ಆ್ಯಪ್ನಗರ

ಹೋಟೆಲ್‌ನಲ್ಲೇ ಶಾಸಕರನ್ನು ಭೇಟಿ ಮಾಡಿದ ಕುಟುಂಬವರ್ಗ

ಚುನಾವಣೆ ಗೆದ್ದ ಮರುಕ್ಷಣವೇ ನಾಯಕರ ಕಟ್ಟಪ್ಪಣೆಯಂತೆ 'ಸುರಕ್ಷಿತ ಕೋಟೆ' ಸೇರಿಕೊಂಡಿದ್ದ ಶಾಸಕರಿಗೆ ಶನಿವಾರ ರಾತ್ರಿಯಿಂದ ನೆಮ್ಮದಿ ಸಿಕ್ಕಿದೆ...

Vijaya Karnataka 21 May 2018, 8:08 am
ಬೆಂಗಳೂರು: ಚುನಾವಣೆ ಗೆದ್ದ ಮರುಕ್ಷಣವೇ ನಾಯಕರ ಕಟ್ಟಪ್ಪಣೆಯಂತೆ 'ಸುರಕ್ಷಿತ ಕೋಟೆ' ಸೇರಿಕೊಂಡಿದ್ದ ಶಾಸಕರಿಗೆ ಶನಿವಾರ ರಾತ್ರಿಯಿಂದ ನೆಮ್ಮದಿ ಸಿಕ್ಕಿದೆ. ಹೋಟೆಲ್‌ ವಾಸ್ತವ್ಯದಲ್ಲೇ ಉಳಿದಿರುವ ಶಾಸಕರನ್ನು ಅವರ ಕುಟುಂಬ ವರ್ಗದವರು ಭಾನುವಾರ ಭೇಟಿ ಮಾಡಿದರು.
Vijaya Karnataka Web Resort


ಬಿಜೆಪಿಯ 'ಆಪರೇಷನ್‌ ಕಮಲ'ದ ಭೀತಿಯಿಂದ ಕಾಂಗ್ರೆಸ್‌, ಜೆಡಿಎಸ್‌ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದರು. ಶನಿವಾರ ಯಡಿಯೂರಪ್ಪ ವಿಶ್ವಾಸಮತಕ್ಕೆ ಸೋಲಾದರೂ, ನೂತನ ಸರಕಾರದ ಪದಗ್ರಹಣದ ವರೆಗೆ ಶಾಸಕರನ್ನು ಒಟ್ಟಿಗೇ ಉಳಿಸಿಕೊಳ್ಳಲಾಗುತ್ತಿದೆ. ಹೀಗಾಗಿ, ಹಲವು ಶಾಸಕರ ಸಂಬಂಧಿಕರು ಹೋಟೆಲ್‌ಗೇ ಆಗಮಿಸಿ ಭೇಟಿ ಮಾಡಿದರು. ಕುಟುಂಬದಿಂದ ದೂರ ಉಳಿದಿದ್ದ ಶಾಸಕರು ತಾವು ತಂಗಿರುವ ಹೋಟೆಲ್‌ನಲ್ಲಿ ಅವರೊಟ್ಟಿಗೆ ಊಟ ಮಾಡಿ ಸಮಯ ಕಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ