ಆ್ಯಪ್ನಗರ

ಫೊನಿ ಚಂಡಮಾರುತ: ರಾಜಧಾನಿಯಲ್ಲಿ ಹೆಚ್ಚಾದ ತಾಪಮಾನ

ಫೊನಿ ಚಂಡಮಾರುತದ ಬಳಿಕ ಬೆಂಗಳೂರು ನಗರದಲ್ಲಿ ತೇವಾಂಶ ಕೊರತೆಯಾಗಿದೆ. ಇದರಿಂದಾಗಿ ಒಂದೇ ದಿನದಲ್ಲಿ ಗರಿಷ್ಠ ತಾಪಮಾನ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ.

Vijaya Karnataka 6 May 2019, 5:00 am
ಬೆಂಗಳೂರು: ಫೊನಿ ಚಂಡಮಾರುತದ ಬಳಿಕ ಬೆಂಗಳೂರು ನಗರದಲ್ಲಿ ತೇವಾಂಶ ಕೊರತೆಯಾಗಿದೆ. ಇದರಿಂದಾಗಿ ಒಂದೇ ದಿನದಲ್ಲಿ ಗರಿಷ್ಠ ತಾಪಮಾನ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ.
Vijaya Karnataka Web fani effect city temperature increased
ಫೊನಿ ಚಂಡಮಾರುತ: ರಾಜಧಾನಿಯಲ್ಲಿ ಹೆಚ್ಚಾದ ತಾಪಮಾನ


ಮಳೆ ನಿಂತ ನಂತರ ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮುಂದುವರಿದಿತ್ತು. ಭಾನುವಾರ ನಗರದ ಕೇಂದ್ರಭಾಗದಲ್ಲಿ ಎರಡು ಡಿಗ್ರಿ ಏರಿಕೆಯಾಗಿ 35.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇದರಿಂದ ಏಪ್ರಿಲ್‌ ಆರಂಭದಲ್ಲಿ ಕಾಣಿಸಿಕೊಂಡಿದ್ದ ಸೆಕೆ ಮೇ ಆರಂಭದಲ್ಲೂ ಕಂಡುಬಂದಿದೆ. ಮಳೆ ಬಂದ ಬಳಿಕ ಮೋಡಗಳು ದೂರ ಸರಿದು ತೇವಾಂಶ ಕೊರತೆಯಾಗಿರುವುದರಿಂದ ಈ ರೀತಿ ತಾಪಮಾನದಲ್ಲಿ ಏರಿಕೆಯಾಗಿ ಸೆಕೆಯ ಕಿರಿಕಿರಿ ಉಂಟಾಗುತ್ತಿದೆ. ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಬಿಸಿಗಾಳಿ ಬೀಸುತ್ತಿರುವುದು ಕೂಡ ಸೆಕೆ ಏರಿಕೆಗೆ ಒಂದು ಕಾರಣ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಈಗಾಗಲೇ ಬಿಸಿಗಾಳಿ ಇದೆ. ಇದು ರಾಜ್ಯದ ಗಡಿಭಾಗದ ಜಿಲ್ಲೆಗಳಿಗೂ ವ್ಯಾಪಿಸಿದೆ. ರಾಜ್ಯದ ಒಳಗೆ ಬಿಸಿಗಾಳಿ ಬಂದಿರುವುದರ ಪರಿಣಾಮವಾಗಿ ಬೇರೆ ಭಾಗಗಳಲ್ಲೂ ಸೆಲೆ ಏರಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ