ಆ್ಯಪ್ನಗರ

ರೈತರ ಭೂ ಪರಿಹಾರಕ್ಕೆ ಕಮಿಷನ್‌ ಪಡೆಯುತ್ತಿದ್ದ 7 ಅಧಿಕಾರಿಗಳು ಅರೆಸ್ಟ್

ಕೈಗಾರಿಕೆ ಪ್ರದೇಶಕ್ಕೆ ಭೂಮಿ ಕೊಟ್ಟ ರೈತರಿಗೆ ನೀಡುವ ಪರಿಹಾರದಲ್ಲಿ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದ ಆರೋಪದ ಮೇಲೆ 7 ಅಧಿಕಾರಿಗಳನ್ನು ಬಂಧಿಸಲಾಗಿದೆ. ಒಟ್ಟು 12.90 ಲಕ್ಷ ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.

Vijaya Karnataka Web 17 Oct 2019, 7:50 am
ಬೆಂಗಳೂರು: ಕೈಗಾರಿಕೆ ಪ್ರದೇಶಕ್ಕೆ ಭೂಮಿ ಕೊಟ್ಟ ರೈತರಿಗೆ ನೀಡುವ ಪರಿಹಾರದಲ್ಲಿ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದ ಆರೋಪದ ಮೇಲೆ 7 ಅಧಿಕಾರಿಗಳನ್ನು ಬಂಧಿಸಿರುವ ಎಸಿಬಿ, 12.90 ಲಕ್ಷ ರೂ. ನಗದು ವಶಕ್ಕೆ ಪಡೆದಿದೆ.
Vijaya Karnataka Web arresytoe


ವಿವಿಧ ರೈತರಿಂದ ಪಡೆದಿದ್ದ 13 ಖಾಲಿ ಚೆಕ್‌ಗಳು ಮತ್ತು ವಿವಿಧ ಜಮೀನು ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬಂಧಿತರಲ್ಲಿ ಹಿರಿಯ ಸಹಾಯಕ ಎಲ್‌.ಶ್ರೀನಿವಾಸ, ಖಾಸಗಿ ಮಧ್ಯವರ್ತಿಗಳಾದ ದೇವರಾಜ್‌, ನಾರಾಯಣಸ್ವಾಮಿ, ಜಗದೀಶ್‌, ನವೀನ್‌ ಕುಮಾರ್‌, ಸಮೀರ್‌ ಪಾಷಾ ಮತ್ತು ಕೇಶವ ಬಂಧಿತರು.

ಪ್ರಕರಣದಲ್ಲಿಅಧಿಕಾರಿ ಮತ್ತು ಮಧ್ಯವರ್ತಿಗಳ ಪಾತ್ರದ ಬಗ್ಗೆ ತನಿಖೆ ನಡೆದಿದೆ ಎಂದು ಎಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸೋಂಪುರ ಕೈಗಾರಿಕಾ ಪ್ರದೇಶಕ್ಕಾಗಿ ಕೆಐಎಡಿಬಿ 800 ಎಕರೆ ಜಮೀನನ್ನು ರೈತರಿಂದ ವಶಪಡಿಸಿಕೊಂಡಿದೆ. ರೈತರಿಗೆ ನೀಡಬೇಕಾದ ಪರಿಹಾರದ ಪೈಕಿ 50 ಕೋಟಿ ರೂ.ಗಳನ್ನು ಸೆಪ್ಟೆಂಬರ್‌ 20ರಂದು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿಕಮಿಷನ್‌ ಪಡೆಯಲಾಯುಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಯಿತು.

ಮಧ್ಯವರ್ತಿಗಳ ಮೂಲಕ ರೈತರ ಸಂಪರ್ಕ ಪರಿಹಾರ ಪಡೆಯುವ ರೈತರನ್ನು ಮಧ್ಯವರ್ತಿಗಳ ಮೂಲಕ ಸಂಪರ್ಕಿಸಿ ಪರಿಹಾರದ ಹಣವನ್ನು ಶೀಘ್ರ ನಿಮ್ಮ ಖಾತೆಗೆ ಹಾಕಿಸಲು ಶೇ.10ರಷ್ಟು ಕಮಿಷನ್‌ ನೀಡುವಂತೆ ಅಧಿಕಾರಿಗಳು ಡೀಲ್‌ ಕುದುರಿಸುತ್ತಿದ್ದರು. ಅದಕ್ಕೊಪ್ಪುವ ರೈತರಿಂದ ಖಾಲಿ ಚೆಕ್‌ ಪಡೆದುಕೊಳ್ಳುತ್ತಿದ್ದರು. ಪರಿಹಾರ ಬಂದ ಬಳಿಕ 10% ಕಮಿಷನ್‌ ಹಣವನ್ನು ಅಧಿಕಾರಿ, ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಹಂಚಿಕೊಳ್ಳುತ್ತಿದ್ದರು. ಕಮಿಷನ್‌ ಕೊಡಲು ಒಪ್ಪದ ರೈತರಿಗೆ ಏನಾದರೂ ನೆಪ ಹೇಳಿ ಪರಿಹಾರಕ್ಕೆ ಅಲೆಸುತ್ತಿದ್ದರು. ಅಧಿಕಾರಿಗಳ ಈ ಕಿರುಕುಳದಿಂದ ಬೇಸತ್ತ ಏಳೆಂಟು ರೈತರು ಎಸಿಬಿಗೆ ದೂರು ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ