ಆ್ಯಪ್ನಗರ

ರೈತರಿಂದ ಸಹಕಾರಿ ಸಾಲ ದಾಖಲೆ ಬಂದ ತಕ್ಷಣ ಖಾತೆಗೆ ಹಣ ಜಮೆ: ಬಂಡೆಪ್ಪ ಕಾಶೆಂಪೂರ

ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿದ ನಂತರ ಘೋಷಣೆ ಮಾಡಿದ ಸಚಿವರು

Vijaya Karnataka Web 21 Nov 2018, 7:37 pm
ಶಿರಸಿ: ಸಹಕಾರಿ ಸಾಲದಲ್ಲಿ ಯಾವ ಗೊಂದಲವೂ ಇಲ್ಲ. 9440 ಕೋಟಿ ರೂ.ಗಳಿಷ್ಟು ಹಣ ತೆಗೆದಿಟ್ಟಿದ್ದೇವೆ. ರೈತರಿಂದ ದಾಖಲೆ ಬಂದ ತಕ್ಷಣ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸಹಕಾರಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
Vijaya Karnataka Web ಸಹಕಾರ ಸಮಾವೇಶ
ಸಹಕಾರ ಸಮಾವೇಶ


ಇಲ್ಲಿನ ಟಿ.ಎಸ್.ಎಸ್. ಸೇಲ್ ಯಾರ್ಡ್‍ನಲ್ಲಿ ಬುಧವಾರ ನಡೆದ 65 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್ ಗಳಿಗೆ ಈಗಾಗಲೇ ಮನ್ನಾದ ಹಣ ಹಾಕಲು 4-5 ತಿಂಗಳು ವಿಳಂವಾಗಿದೆ‌. ನವೆಂಬರ್ ತಿಂಗಳನ್ನೂ ಒಳಗೊಂಡು ಪ್ರತೀ ಡಿಸಿಸಿ ಬ್ಯಾಂಕ್ ಗೆ ಆಯಾ ಬ್ಯಾಂಕ್ ವ್ಯಾಪ್ತಿಗೆ ಬರುವ ಸರಾಸರಿ ಬಡ್ಡಿ ಮೊತ್ತ ಸೇರಿ ಜಮಾ ಮಾಡಲಾಗುವುದು. ಅಲ್ಲದೇ ಆಸಾಮಿ ಖಾತೆ ಸಾಲದ ಬಗೆಗೂ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದರು‌.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡುತ್ತಾ, ಸಾಲಮನ್ನಾ ಒಂದೇ ಸರ್ಕಾರದ ಕೆಲಸ ಆಗಬಾರದು. ಪ್ರತೀ ದಿನದ ವ್ಯವಹಾರ ಆಗಬಾರದು. ರೈತರ ಆರ್ಥಿಕ ಮೂಲಕ ಹೆಚ್ಚಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯ ಪಟ್ಟರು.

ಪಾರದರ್ಶಕವಾದ ಸಹಕಾರಿ ಚಳವಳಿ ಈ ಜಿಲ್ಲೆಯಲ್ಲಿದೆ. ಮಹಿಳೆಯರ ಪಾತ್ರ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಬೇಕು. ಎಲ್ಲ ವರ್ಗದ, ಧರ್ಮದ ಜನರು ಭಾಗಿಯಾಗಬೇಕು. ಸಹಕಾರಿ ಸಂಘಗಳ ಮೂಲಕ ನಿರುದ್ಯೋಗ ನಿವಾರಿಸಲು ಸಹಕಾರಿಗಳು ಶ್ರಮಿಸಬೇಕು. ಕೃಷಿಯ ಜೊತೆಗೆ ಪರ್ಯಾಯ ಉದ್ಯೋಗ ಸೃಷ್ಟಿಯಾಗಬೇಕು ಎಂದರು‌.

ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ಸಾಲಮನ್ನಾ ಕುರಿತು ಸಚಿವರು ಮಾಧ್ಯಮದ ಮೂಲಕ ಎಲ್ಲ ವಿವರ ಬಹಿರಂಗ ಮಾಡಬೇಕು. ಆಸಾಮಿ ಖಾತೆ ಸಾಲದ ಬಗ್ಗೆ ಕೃಷಿಯಲ್ಲಿ ಮಾಡಿದ ಸಾಲ ಮನ್ನಾ ಮಾಡಬೇಕು. ಈ ಸಾಲದ ಬಗ್ಗೆ ಜನರಲ್ಲಿ ಸಾಕಷ್ಟು ನೋವಿದ್ದು, ಇದರ ಕುರಿತು ಸೂಕ್ತ ಕ್ರಮವಾಗಬೇಕು. ಜನಪ್ರತಿನಿಧಿಗಳು ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ಚರ್ಚಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ