ಆ್ಯಪ್ನಗರ

ಹೈಕೋರ್ಟ್‌ ನೋಟಿಸ್‌ ಸ್ವೀಕರಿಸಿದ ಸಂಸದ ಪ್ರಜ್ವಲ್‌ ರೇವಣ್ಣ: ಸೆ. 30ಕ್ಕೆ ವಿಚಾರಣೆ ಮುಂದೂಡಿಕೆ

ಲೋಕಸಭಾ ಚುನಾವಣೆ ಸಂದರ್ಭ ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವ ಆರೋಪದಡಿ ರಾಜ್ಯ ಹೈಕೋರ್ಟ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಹಲವು ಬಾರಿ ನೊಟೀಸ್‌ ನೀಡಿದ್ದರೂ, ಸ್ವೀಕರಿಸಿರಲಿಲ್ಲ. ಪತ್ರಿಕೆಗಳ ಮೂಲಕ ಸಮನ್ಸ್‌ ನೀಡಿದ ನಂತರ ಬುಧವಾರ ಸ್ವೀಕರಿಸಿದ್ದಾರೆ.

Vijaya Karnataka Web 18 Sep 2019, 6:22 pm
ಹಾಸನ: ಚುನಾವಣಾ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಅರೋಪದಡಿ ಹೈಕೋರ್ಟ್‌ ನೀಡಿರುವ ನೋಟಿಸ್‌ಅನ್ನು ಸಂಸದ ಪ್ರಜ್ವಲ್‌ ರೇವಣ್ಣ ಬುಧವಾರ ಸ್ವೀಕರಿಸಿದ್ದಾರೆ. ಈ ಮೊದಲು ಹಲವು ಬಾರಿ ನೋಟೀಸ್ ನೀಡಿದ್ದರೂ ಜೆಡಿಎಸ್ ಯುವ ಮುಖಂಡ ಪ್ರಜ್ವಲ್‌ ಅವರು ಸ್ವೀಕರಿಸಿರಲಿಲ್ಲ. ಇತ್ತೀಚೆಗೆ ಹೈ ಕೋರ್ಟ್ ಹಾಸನ ಜಿಲ್ಲೆಯ ಸ್ಥಳಿಯ ದಿನಪತ್ರಿಕೆಗಳಲ್ಲಿ ನೊಟೀಸ್ ಪ್ರಕಟಿಸಿತ್ತು. ಇದಾದ ನಂತರ ಬುಧವಾರ ನೊಟೀಸ್ ಸ್ವೀಕರಿಸಿದ್ದಾರೆ.
Vijaya Karnataka Web prajwal revanna


ತನ್ನ ವಕೀಲರ ಮೂಲಕ ಅವರು ನೊಟೀಸ್ ಪಡೆದಿದ್ಧಾರೆ. ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲ ಕೇಶವ ರೆಡ್ಡಿ ವಕಾಲತ್ತು ಸಲ್ಲಿಕೆ ಮಾಡಿದ್ದು, ಕೋರ್ಟ್‌ ವಿಚಾರಣೆಯನ್ನು ಸೆ. 30ಕ್ಕೆ ಮುಂದೂಡಿದೆ. ಈ ಹಿಂದೆ ಪ್ರಜ್ವಲ್‌ ಅವರಿಗೆ ನೊಟೀಸ್‌ ತಲುಪಿಸಲು ಹೈಕೋರ್ಟ್‌ ಮೂರು ಬಾರಿ ಪ್ರಯತ್ನಿಸಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನೋಟೀಸನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲು ಮಾಡಿಕೊಂಡ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಸೆ. 23ರೊಳಗೆ ನೋಟೀಸ್ ಪಬ್ಲಿಷ್ ಮಾಡಿರಿ. ಸೆ. 30ರಂದು ಮುದ್ರಿತವಾದ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಆದೇಶ ಹೊರಡಿಸಿದ್ದರು. ಸೆ.30 ರ ನಂತರ ಹೈ ಕೋರ್ಟ್ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.

ಪ್ರಕರಣದ ಹಿನ್ನಲೆ: ಕಳೆದ ಲೋಕಾಸಭಾ ಚುನಾವಣಾ ಸಂಧರ್ಭದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ ಅರೋದಡಿ , ಹಾಸನ ಬಿಜೆಪಿ ಅಭ್ಯರ್ಥಿ ಮತ್ತು ವಕೀಲ ದೇವರಾಜೇಗೌಡ ಹೈ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು . ಈ ಸಂಬಂಧ ಹೈ ಕೋರ್ಟ್ ಪ್ರಜ್ವಲ್ ರೇವಣ್ಣಗೆ ನೊಟೀಸ್ ನೀಡಿತ್ತು. ಆದರೆ ಮೂರು ಬಾರಿಯೂ ಪ್ರಜ್ವಲ್ ರೇವಣ್ಣಗೆ ನೊಟೀಸ್ ತಲುಪಿರಲಿಲ್ಲ. ಆಫಿಡವಿಟ್ ನಲ್ಲಿನ ವಿಳಾಸದಲ್ಲಿ ರೇವಣ್ಣ ಅವರು ಇಲ್ಲ ಎಂಬ ಉತ್ತರ ಕೇಳಿ ಬಂದಿತ್ತು. ಪೋಸ್ಟ್, ಕೋರ್ಟ್ ಅಮೀನರು ಮತ್ತು ಹಾಸನ ಜಿಲ್ಲಾ ನ್ಯಾಯಾಧೀಶರ ಮೂಲಕ ತಲುಪಿಸುವ ಪ್ರಯತನ ವಿಫಲವಾಗಿತ್ತು. ಈ ಬಗ್ಗೆ ಅರ್ಜಿದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ಸೆ.3 ರಂದು ಕೋರ್ಟ್ ಗಮನಕ್ಕೆ ತಂದಿದ್ದರು. ಅಲ್ಲದೇ ನೊಟೀಸ್ ಪ್ರತಿಯನ್ನ ಪೇಪರ್ ಪಬ್ಲೀಷ್ ನಗೆ ಮನವಿ ಮಾಡಿದ್ದರು. ಅದಕ್ಕೆ ಸೆ.6 ರಂದು ಹೈ ಕೋರ್ಟ್ ಅನುಮತಿ ನೀಡಿತ್ತು. ಸೆಪ್ಟೆಂಬರ್ 10 ರಂದು ಪೇಪರ್ ಪಬ್ಲಿಕೇಷನ್ ಮಾಡಿ 13 ರಂದು ಅರ್ಜಿದಾರರು ಪ್ರತಿಯನ್ನ ಹೈ ಕೋರ್ಟ್ಗೆ ಸಲ್ಲಿಸಿದ್ದರು. ಈ ವೇಳೆ ಹಿರಿಯ ವಕೀಲೆ ಪ್ರಮೀಳಾ ನೆಸರ್ಗಿ ಪ್ರಜ್ವಲ್ ರೇವಣ್ಣ ಉದ್ದೇಶ ಪೂರ್ವಕವಾಗಿ ನೊಟೀಸ್ ಸ್ವೀಕರಿಸುತ್ತಿಲ್ಲವೆಂದು ಅರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ