ಆ್ಯಪ್ನಗರ

ಬಿರುಸುಗೊಂಡ ಸಿಎಂ ಕಡತ ಯಜ್ಞ

ಸಮ್ಮಿಶ್ರ ಸರಕಾರ ಪತನದ ಹಾದಿ ಖಚಿತವಾಗುತ್ತಿದ್ದಂತೆಯೇ ನಿರ್ಗಮನಕ್ಕೆ ಸಿದ್ಧತೆಯೋ ಎಂಬಂತೆ ಸಿಎಂ ಎಚ್‌ಡಿಕುಮಾರಸ್ವಾಮಿ ಕಡತ ಯಜ್ಞ ಆರಂಭಿಸಿದ್ದಾರೆ...

Vijaya Karnataka 11 Jul 2019, 5:00 am
ಬೆಂಗಳೂರು: ಸಮ್ಮಿಶ್ರ ಸರಕಾರ ಪತನದ ಹಾದಿ ಖಚಿತವಾಗುತ್ತಿದ್ದಂತೆಯೇ ನಿರ್ಗಮನಕ್ಕೆ ಸಿದ್ಧತೆಯೋ ಎಂಬಂತೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಡತ ಯಜ್ಞ ಆರಂಭಿಸಿದ್ದಾರೆ.
Vijaya Karnataka Web file disposal
ಬಿರುಸುಗೊಂಡ ಸಿಎಂ ಕಡತ ಯಜ್ಞ


ಸಿಎಂ ಮಂಗಳವಾರ ತಡರಾತ್ರಿವರೆಗೆ ಹಲವು ಕಡತಗಳನ್ನು ವಿಲೇವಾರಿ ಮಾಡಿದ್ದು, ಬುಧವಾರವೂ ಆಪ್ತ ಅಧಿಕಾರಿಗಳನ್ನು ಕರೆಸಿಕೊಂಡು ಕೆಲವೊಂದು ಫೈಲ್‌ಗಳನ್ನು ವಿಲೇವಾರಿ ಮಾಡಿದರು ಎಂದು ತಿಳಿದುಬಂದಿದೆ.

ಮೈತ್ರಿಕೂಟದ ಶಾಸಕರ ಸರಣಿ ರಾಜೀನಾಮೆಯಿಂದ ಸಮ್ಮಿಶ್ರ ಸರಕಾರ ಅಲ್ಪಮತಕ್ಕೆ ಕುಸಿದಿದ್ದು, ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಇದರ ಮಧ್ಯೆಯೇ, ಕೆಲವೊಂದು ವರ್ಗಾವಣೆ ಸೇರಿದಂತೆ ತೀರ್ಮಾನ ಬಾಕಿ ಇದ್ದ ಕೆಲವೊಂದು ಕಡತಗಳನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ