ಆ್ಯಪ್ನಗರ

ಬೆಂಕಿ ಹಚ್ಚಿಕೊಂಡ ಯಶ್‌ ಅಭಿಮಾನಿ

ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲವೆಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸ್ಟಾರ್‌ ನಟ ಯಶ್‌ ಅಭಿಮಾನಿಯೊಬ್ಬ ಸಾವು ಬದುಕಿನ ನಡುವೆ ಸೆಣೆಸಾಡುತ್ತಿದ್ದಾನೆ.

Vijaya Karnataka 9 Jan 2019, 5:00 am
ಬೆಂಗಳೂರು : ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲವೆಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸ್ಟಾರ್‌ ನಟ ಯಶ್‌ ಅಭಿಮಾನಿಯೊಬ್ಬ ಸಾವು ಬದುಕಿನ ನಡುವೆ ಸೆಣೆಸಾಡುತ್ತಿದ್ದಾನೆ.
Vijaya Karnataka Web film star yash fan sucide attempt
ಬೆಂಕಿ ಹಚ್ಚಿಕೊಂಡ ಯಶ್‌ ಅಭಿಮಾನಿ


ಪಾವಗಡ ಮೂಲದವನಾದ ಪೀಣ್ಯ ಸಮೀಪದ ಲಗ್ಗೆರೆಯಲ್ಲಿ ನೆಲೆಸಿರುವ ರವಿ (28) ಆತ್ಮಹತ್ಯೆಗೆ ಯತ್ನಿಸಿ ಶೇ 80 ರಷ್ಟು ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೆಣೆಸಾಡುತ್ತಿದ್ದಾನೆ.

ಮಂಗಳವಾರ ಬೆಳಗ್ಗೆ ಹೊಸಕೆರೆಹಳ್ಳಿಯಲ್ಲಿರುವ ಯಶ್‌ ಮನೆ ಎದುರಿಗೆ ಕಾಣಿಸಿಕೊಂಡ ರವಿ, ತನಗೆ ಯಶ್‌ ನೋಡಲು ಸಿಗಲಿಲ್ಲ ಎನ್ನುವ ಬೇಸರದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಯಶ್‌ ಮನೆಯ ಕಾವಲು ಸಿಬ್ಬಂದಿ ಆತನನ್ನು ರಕ್ಷಿಸಿದಲ್ಲದೆ ಪೊಲೀಸ್‌ ಠಾಣೆಗೆ ವಿಷಯ ಮುಟ್ಟಿಸಿದ್ದರು. ಮನೆ ಮುಂದೆ ನೆರೆದಿದ್ದ ಇತರೆ ಅಭಿಮಾನಿಗಳು ಮತ್ತು ಸ್ಥಳೀಯರು ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರವಿಗೆ ಶೇ 80 ರಷ್ಟು ಸುಟ್ಟಗಾಯಗಳಾಗಿವೆ ಎಂದು ಆಸ್ಪತ್ರೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ