ಆ್ಯಪ್ನಗರ

ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಯಾವ ಜಿಲ್ಲೆಗೆ ಯಾರು?

​ವಿಶೇಷವೆಂದರೆ ಬೆಂಗಳೂರು ನಗರ ಉಸ್ತುವಾರಿಯನ್ನು ಸಿಎಂ ತಮ್ಮ ಬಳಿಯಲ್ಲೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಹೊಣೆ ಹೊರಲು ಆರ್‌. ಅಶೋಕ್‌ ಉತ್ಸುಕಗಿದ್ದರು. ಆದರೆ ಅವರ ಆಸೆಗೆ ಇಲ್ಲೂ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್‌ ತಣ್ಣೀರು ಎರಚಿದೆ.

Vijaya Karnataka Web 16 Sep 2019, 6:08 pm
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೊನೆಗೂ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಹೆಚ್ಚು ಕಡಿಮೆ ಸಂಪುಟ ವಿಸ್ತರಣೆಯಾಗಿ ಒಂದು ತಿಂಗಳ ನಂತರ ಅಳೆದು ತೂಗಿ ಜಿಲ್ಲೆಗಳನ್ನು ಸಚಿವರ ನಡುವೆ ಹಂಚಿದ್ದಾರೆ.
Vijaya Karnataka Web Karnataka Chief Minister B S Yediyurappa


ವಿಶೇಷವೆಂದರೆ ಬೆಂಗಳೂರು ನಗರ ಉಸ್ತುವಾರಿಯನ್ನು ಸಿಎಂ ತಮ್ಮ ಬಳಿಯಲ್ಲೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಹೊಣೆ ಹೊರಲು ಆರ್‌. ಅಶೋಕ್‌ ಉತ್ಸುಕರಾಗಿದ್ದರು. ಆದರೆ ಅವರ ಆಸೆಗೆ ಇಲ್ಲೂ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್‌ ತಣ್ಣೀರು ಎರಚಿದೆ.

ಹೆಚ್ಚಿನ ಸಚಿವರಿಗೆ ಎರಡೆರಡು ಜಿಲ್ಲೆಗಳನ್ನು ಉಸ್ತುವಾರಿ ನೀಡಲಾಗಿದ್ದು, ಇವುಗಳಲ್ಲಿ ಒಂದು ಜಿಲ್ಲೆಯನ್ನು ಅಧಿಕ ಪ್ರಭಾರ ನೆಲೆಯಲ್ಲಿ ನೀಡಲಾಗಿದೆ. ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಈ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ಹಾಲಿ ಮಂತ್ರಿಗಳು ಕಳೆದುಕೊಳ್ಳಲಿದ್ದಾರೆ.

ರಾಜ್ಯದ ಸಚಿವರು ಮತ್ತು ಅವರ ಉಸ್ತುವಾರಿ ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ,

* ಬಿ.ಎಸ್‌. ಯಡಿಯೂರಪ್ಪ - ಬೆಂಗಳೂರು ನಗರ

* ಗೋವಿಂದ ಎಂ. ಕಾರಜೋಳ - ಬಾಗಲಕೋಟೆ, ಕಲಬುರಗಿ (ಹೆಚ್ಚುವರಿ)

* ಡಾ. ಅಶ್ವಥ್‌ ನಾರಾಯಣ್‌ - ರಾಮನಗರ, ಚಿಕ್ಕಬಳ್ಳಾಪುರ (ಹೆಚ್ಚುವರಿ)

* ಲಕ್ಷ್ಮಣ ಸವದಿ - ಬಳ್ಳಾರಿ, ಕೊಪ್ಪಳ (ಹೆಚ್ಚುವರಿ)

* ಕೆ.ಎಸ್‌. ಈಶ್ವರಪ್ಪ - ಶಿವಮೊಗ್ಗ, ದಾವಣಗೆರೆ (ಹೆಚ್ಚುವರಿ)

* ಆರ್‌. ಅಶೋಕ್‌ - ಬೆಂಗಳೂರು ಗ್ರಾಮಾಂತರ, ಮಂಡ್ಯ (ಹೆಚ್ಚುವರಿ)

* ಬಿ. ಶ್ರೀರಾಮುಲು - ರಾಯಚೂರು, ಚಿತ್ರದುರ್ಗ (ಹೆಚ್ಚುವರಿ)

* ಎಸ್‌. ಸುರೇಶ್‌ ಕುಮಾರ್‌ - ಚಾಮರಾಜನಗರ

* ವಿ. ಸೋಮಣ್ಣ - ಮೈಸೂರು, ಮಡಿಕೇರಿ (ಹೆಚ್ಚುವರಿ)

* ಸಿ.ಟಿ. ರವಿ - ಚಿಕ್ಕಮಗಳೂರು

* ಬಸವರಾಜ ಬೊಮ್ಮಾಯಿ - ಉಡುಪಿ, ಹಾವೇರಿ (ಹೆಚ್ಚುವರಿ)

* ಕೋಟ ಶ್ರೀನಿವಾಸ ಪೂಜಾರಿ - ದಕ್ಷಿಣ ಕನ್ನಡ

* ಜೆ.ಸಿ. ಮಾಧುಸ್ವಾಮಿ - ತುಮಕೂರು, ಹಾಸನ (ಹೆಚ್ಚುವರಿ)

* ಸಿ.ಸಿ. ಪಾಟೀಲ್‌ - ಗದಗ, ವಿಜಯಪುರ (ಹೆಚ್ಚುವರಿ)

* ಎಚ್‌. ನಾಗೇಶ್‌ - ಕೋಲಾರ

* ಪ್ರಭು ಚೌವ್ಹಾಣ್‌ - ಬೀದರ್, ಯಾದಗಿರಿ (ಹೆಚ್ಚುವರಿ)

* ಶಶಿಕಲಾ ಜೊಲ್ಲೆ - ಉತ್ತರ ಕನ್ನಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ