ಆ್ಯಪ್ನಗರ

ಇಂಡಿಯನ್‌ ಮನಿ ಡಾಟ್‌ಕಾಂನಿಂದ ರೈತರಿಗಾಗಿ ವಿಶೇಷ ಕೋರ್ಸ್, ಪ್ರಗತಿಪರ ರೈತರಿಂದಲೇ ಬೋಧನೆ

ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ಕೃಷಿಗೆ ಸಂಬಂಧಿಸಿದಂತೆ ಹೊರ ತಂದಿರುವ ಜೇನು ಸಾಕಣೆ, ಕುರಿ ಮತ್ತು ಮೇಕೆ ಸಾಕಣೆ, ಹಳ್ಳಿಯಿಂದ ಜಾಗತಿಕ ಬಿಸಿನೆಸ್ ನಿರ್ಮಾಣ, ಪ್ಲಾಂಟ್ ನರ್ಸರಿ ಕೃಷಿ ಸೇರಿದಂತೆ ಪ್ರಮುಖ ಕೋರ್ಸ್ ಗಳು ರೈತರಿಗೆ ನೆರವಾಗಲಿವೆ. ರೈತರಿಗೆ ಪ್ರಗತಿಪರ ರೈತರಿಂದಲೇ ಹೊಸ ವಿಚಾರಗಳನ್ನು ಕಲಿಸಲು ಮತ್ತು ತಿಳಿಸಲು ಆಪ್ ನಲ್ಲಿ ಹೊಸ ಕೋರ್ಸ್ ಗಳನ್ನು ವಿನ್ಯಾಸಗೊಳಿಸಲಾಗಿದೆ.

Vijaya Karnataka Web 29 Sep 2020, 6:52 am
ಬೆಂಗಳೂರು: ಇಂಡಿಯನ್‌ ಮನಿ ಡಾಟ್‌ಕಾಂ ಫೈನಾನ್ಸಿಯಲ್‌ ಫ್ರೀಡಂ ಆ್ಯಪ್‌ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿ ವಿನ್ಯಾಸಗೊಳಿಸಿರುವ ವಿಶೇಷ ಕೋರ್ಸ್‌ಗಳನ್ನು ಯುವಾ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಲೋಕಾರ್ಪಣೆ ಮಾಡಿದರು.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಶಾಂತಿನಗರದಲ್ಲಿರುವ ಡಾಟ್‌ಕಾಂ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ,''ಕೋವಿಡ್‌ ವೇಳೆ ಎಲ್ಲಾ ಕ್ಷೇತ್ರಗಳೂ ನೆಲಕಚ್ಚಿದರೂ ಕೃಷಿ ವಲಯ ದೇಶದ ಜನರ ಕೈಹಿಡಿಯಿತು. ಭಾರತ ಈ ಕ್ಷೇತ್ರದಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲು ಸಾಧ್ಯವಿದೆ. ಇದಕ್ಕೆ ತಂತ್ರಜ್ಞಾನ ಅಳವಡಿಕೆಯ ಜತೆಗೆ ಹೊಸ ಆವಿಷ್ಕಾರಗಳಾಗಬೇಕಿದೆ. ಕೃಷಿ ಜತೆ ಉಪಕಸುಬುಗಳನ್ನು ಮಾಡಲು ಆರಂಭಿಸಿದರೆ ಕೃಷಿ ಲಾಭದಾಯಕ'' ಎಂದರು.

ಆ್ಯಪ್‌ನಲ್ಲಿ ಕೃಷಿಗೆ ಸಂಬಂಧಿಸಿದಂತೆ ಹೊರ ತಂದಿರುವ ಜೇನು ಸಾಕಣೆ, ಕುರಿ ಮತ್ತು ಮೇಕೆ ಸಾಕಣೆ, ಹಳ್ಳಿಯಿಂದ ಜಾಗತಿಕ ಬಿಸಿನೆಸ್‌ ನಿರ್ಮಾಣ, ಪ್ಲಾಂಟ್‌ ನರ್ಸರಿ ಕೃಷಿ ಸೇರಿದಂತೆ ಪ್ರಮುಖ ಕೋರ್ಸ್‌ಗಳು ರೈತರಿಗೆ ನೆರವಾಗಲಿವೆ ಎಂದರು.

ಮನಿ ಡಾಟ್‌ ಕಾಂನ ಸಂಸ್ಥಾಪಕ- ಸಿಇಒ ಸಿ. ಎಸ್‌. ಸುಧೀರ್ ಮಾತನಾಡಿ , ರೈತರಿಂದಲೇ ಹೊಸ ವಿಚಾರಗಳನ್ನು ಕಲಿಸಲು ಮತ್ತು ತಿಳಿಸಲು ಫೈನಾನ್ಸಿಯಲ್‌ ಫ್ರೀಡಂ ಆ್ಯಪ್‌ನಲ್ಲಿ ಹೊಸ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ