ಆ್ಯಪ್ನಗರ

ಶ್ರೀರಾಮುಲು ದಿಲ್ಲಿ ಮನೆಯಲ್ಲಿ ಅಗ್ನಿ ಅವಘಡ

ಬಳ್ಳಾರಿ ಸಂಸದ ಶ್ರೀರಾಮುಲು ಅವರ ಸರಕಾರಿ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಂಸದರು ಅದೃಷ್ಟವಶಾತ್‌ ಪಾರಾಗಿದ್ದಾರೆ...

Vijaya Karnataka 19 Dec 2017, 10:02 pm

ಹೊಸದಿಲ್ಲಿ: ಬಳ್ಳಾರಿ ಸಂಸದ ಶ್ರೀರಾಮುಲು ಅವರ ಸರಕಾರಿ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಂಸದರು ಅದೃಷ್ಟವಶಾತ್‌ ಪಾರಾಗಿದ್ದಾರೆ.

Vijaya Karnataka Web fire accident in sriramulu house
ಶ್ರೀರಾಮುಲು ದಿಲ್ಲಿ ಮನೆಯಲ್ಲಿ ಅಗ್ನಿ ಅವಘಡ


ಸಂಸದರ ವಸತಿ ಸಮುಚ್ಛಯ 'ಕಾವೇರಿ'ಯಲ್ಲಿದ್ದ ರಾಮುಲು ಅವರು ಇತ್ತೀಚೆಗಷ್ಟೇ ಸ್ಥಳೀಯ ಫಿರೋಜ್‌ ಶಾ ರಸ್ತೆಯಲ್ಲಿರುವ ಸರಕಾರಿ ಬಂಗಲೆಗೆ ಸ್ಥಳಾಂತರವಾಗಿದ್ದರು.

ರಾಮುಲು ಅವರು ನಿದ್ರೆಯಲ್ಲಿದ್ದಾಗ ಮಂಗಳವಾರ ಬೆಳಿಗ್ಗೆ ಐದು ಗಂಟೆಯ ಹೊತ್ತಿಗೆ ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಗೆ ರಾಮುಲು ಅವರು ಮಲಗಿದ್ದ ಕೊಠಡಿಯಲ್ಲಿದ್ದ ಬಟ್ಟೆ, ಮೊಬೈಲ್‌, ಪೀಠೋಪಕರಣ ಮತ್ತು ಚಿನ್ನಾಭರಣ ಸುಟ್ಟು ಕರಕಲಾಗಿದೆ. ಬೆಂಕಿ ಅನಾಹುತದ ಅರಿವಾಗುತ್ತಿದ್ದಂತೆಯೇ ಸಂಸದರು ಎದ್ದು ಬೆಡ್‌ರೂಂನಿಂದ ಹೊರಕ್ಕೆ ಓಡಿ ಬಂದಿದ್ದು, ನಂತರ ಕೊಠಡಿಯ ಚಾವಣಿ ಕುಸಿದಿದೆ.

ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದ ಸಚಿವ ಅನಂತಕುಮಾರ್‌, ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಸುರೇಶ್‌ ಅಂಗಡಿ ಅವರು ಸ್ಥಳಕ್ಕೆ ಧಾವಿಸಿ ರಾಮುಲು ಅವರ ಆರೋಗ್ಯ ವಿಚಾರಿಸಿದರು. ಅಗ್ನಿ ಅವಘಡ ಸಂಭವಿಸಿದಾಗ ಬಳ್ಳಾರಿಯಿಂದ ಬಂದಿದ್ದ ರಾಮುಲು ಅವರ ಕೆಲ ಆಪ್ತರು ಸಹ ಅವರ ನಿವಾಸದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ