ಆ್ಯಪ್ನಗರ

ನಾಪತ್ತೆಯಾದ ಮೀನುಗಾರರ ಎಸ್ಸೆಮ್ಮೆಸ್‌ ಆಧರಿಸಿ ತನಿಖೆ

ನೆಟ್‌ವರ್ಕ್‌ ಸಮಸ್ಯೆಯಿಂದ ಎಸ್‌ಎಂಎಸ್‌ ತಡವಾಗಿ ಬಂದಿದೆ. ಇದನ್ನು ಎಲ್ಲಿಂದ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಪತ್ತೆ ಮಾಡಲಾಗುತ್ತಿದೆ.

Vijaya Karnataka 12 Jan 2019, 8:42 am
ಬೆಂಗಳೂರು: ಮೀನುಗಾರಿಕೆಗೆ ಹೋಗಿದ್ದ ಬೋಟ್‌ನಲ್ಲಿದ್ದ ಮೀನುಗಾರನೊಬ್ಬ ಕಳುಹಿಸಿದ್ದ ಎಸ್‌ ಎಂಎಸ್‌ ತಡವಾಗಿ ಕುಟುಂಬದ ಸದಸ್ಯರಿಗೆ ತಲುಪಿದ್ದು, ಇದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದ್ದಾರೆ.
Vijaya Karnataka Web BNG-1101-2-2-VENKATRAO NADAGOUDA


ಗಾಂಧಿ ಭವನದಲ್ಲಿ ಶುಕ್ರವಾರ 'ವಿಕ'ದೊಂದಿಗೆ ಮಾತನಾಡಿ, ''ನೆಟ್‌ವರ್ಕ್‌ ಸಮಸ್ಯೆಯಿಂದ ಎಸ್‌ಎಂಎಸ್‌ ತಡವಾಗಿ ಬಂದಿದೆ. ಇದನ್ನು ಎಲ್ಲಿಂದ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಪತ್ತೆ ಮಾಡಲಾಗುತ್ತಿದೆ. ಮೀನುಗಾರಿಕೆಗೆ ಬಳಸಿದ್ದ ಬೋಟು ಅಪಘಾತಕ್ಕೀಡಾದ ಅಥವಾ ಸಾಗರದಲ್ಲಿ ಮುಳುಗಿರುವುದು ದೃಢಪಟ್ಟಿಲ್ಲ. ಮೀನುಗಾರರು ಬದುಕಿದ್ದಲ್ಲಿ ಹೇಗಾದರೂ ಮಾಡಿ ವಾಪಸ್‌ ಕರೆ ತರಲು ಸರಕಾರ ಸಿದ್ಧವಿದೆ,'' ಎಂದು ವಿವರಿಸಿದರು.

ಮೀನುಗಾರರು ಜೀವಂತ ಇದ್ದಾರೆಂದು ಅವರ ಸಹೋದ್ಯೋಗಿಗಳು ಪ್ರತಿಪಾದಿಸಿದ್ದಾರೆ. ಇದಕ್ಕೆ ನಮ್ಮ ಸಹಮತ ಇದೆ. ಮೀನುಗಾರರನ್ನು ಯಾರಾದರೂ ಒತ್ತೆಯಾಳಾಗಿ ಇಟ್ಟುಕೊಂಡಿರಬಹುದು ಎಂಬ ವಾದವೂ ಇದೆ. ಹೀಗಾಗಿ ಮಹಾರಾಷ್ಟ್ರದ ನೆರವು ಪಡೆಯಲಾಗುವುದು. ಈಗಾಗಲೇ ನೌಕಾದಳ ಕಾರ್ಯಾಚರಣೆ ನಡೆಸಿದ್ದು, ಕೇಂದ್ರದಿಂದ ಹೆಚ್ಚಿನ ನೆರವು ನಿರೀಕ್ಷಿಸುತ್ತಿದ್ದೇವೆ ಎಂದರು.

ಹುಡುಕಾಟಕ್ಕೆ ಎರಡು ರಾಜ್ಯಗಳ ಗೃಹ ಸಚಿವರ ಸಭೆ
ಕಣ್ಮರೆಯಾಗಿರುವ ಮೀನುಗಾರರ ಹುಡುಕಾಟದಲ್ಲಿ ಜಂಟಿ ಕಾರ್ಯಾಚರಣೆ ಸಂಬಂಧ ಎರಡೂ ರಾಜ್ಯಗಳ ಗೃಹ ಸಚಿವರ ಸಭೆ ನಡೆಸಲು ಮಹಾರಾಷ್ಟ್ರ ಸಿಎಂಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರ ಬರೆಯಲಿದ್ದಾರೆ. ಈ ಬಗ್ಗೆ ಗುರುವಾರದ ಸಂಪುಟ ಸಭೆಯಲ್ಲಿ ಪತ್ರ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ