ಆ್ಯಪ್ನಗರ

ಕಾರವಾರ: ನೀರು ಪಾಲಾಗಿದ್ದವರಲ್ಲಿ ಮತ್ತೆ ಮೂವರ ಶವ ಪತ್ತೆ

ಚೆಂಡಿಯಾ ನಾಗರಮಡಿ ಫಾಲ್ಸ್ ನಲ್ಲಿ ಪ್ರವಾಸಕ್ಕೆ ಬಂದು ನೀರುಪಾಲಾಗಿದ್ದವರಲ್ಲಿ ಮೂವರ ಮೃತದೇಹಗಳು ಸೋಮವಾರ ಪತ್ತೆಯಾಗಿವೆ.

Vijaya Karnataka Web 18 Sep 2017, 10:32 am
ಕಾರವಾರ: ಚೆಂಡಿಯಾ ನಾಗರಮಡಿ ಫಾಲ್ಸ್ ನಲ್ಲಿ ಪ್ರವಾಸಕ್ಕೆ ಬಂದು ನೀರುಪಾಲಾಗಿದ್ದವರಲ್ಲಿ ಮೂವರ ಮೃತದೇಹಗಳು ಸೋಮವಾರ ಪತ್ತೆಯಾಗಿವೆ.
Vijaya Karnataka Web five drowned in falls near karwar
ಕಾರವಾರ: ನೀರು ಪಾಲಾಗಿದ್ದವರಲ್ಲಿ ಮತ್ತೆ ಮೂವರ ಶವ ಪತ್ತೆ


ಮಡಗಾಂವ್ ರಾಯ್ ಗ್ರಾಮದ ಆರುಮಂದಿ ನೀರುಪಾಲಾಗಿದ್ದು, ಮಹಿಳೆಯರಿಬ್ಬರ ದೇಹ ಮಾತ್ರ ನಿನ್ನೆ ಪತ್ತೆಯಾಗಿತ್ತು. ರೇಣುಕಾ ಎಂಬವರಿಗೆ ಶೋಧ ಕಾರ್ಯ ಮುಂದುವರೆದಿದೆ.

ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ನಾಗರಮಡಿ ಫಾಲ್ಸ್‌ನಲ್ಲಿ ಭಾರಿ ನೀರು ಹರಿದು ಬಂದಿತ್ತು. ಇಲ್ಲಿ ಇಳಿಯಬಾರದು ಎಂದು ಸೂಚನೆ ನೀಡಿದ್ದರೂ ಪ್ರವಾಸಿಗರು ಇದನ್ನು ಲೆಕ್ಕಿಸದೇ ನೀರಿಗೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.

ಜಲಪಾತದ ಪ್ರವಾಹದಲ್ಲಿ ಗೋವಾದ ಮಡಗಾಂವ್ ಮೂಲದ ಆರು ಪ್ರವಾಸಿಗರು ಕೊಚ್ಚಿ ಹೋಗಿದ್ದರು. ಈ ಪೈಕಿ ಪ್ರೆಸಿಲ್ಲಾ ಹಾಗೂ ಫಿಯಾನ ಎಂಬುವವರ ಮೃತದೇಹ ಭಾನುವಾರ ಸಂಜೆ ದೊರೆತಿತ್ತು. ಬಳಿಕ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಬೆಳಗ್ಗೆ ೬ ಗಂಟೆಯಿಂದಲೇ ನಾಪತ್ತೆಯಾದವರ ಹುಡುಕಾಟ ಆರಂಭಿಸಲಾಗಿದ್ದು ಸಿದ್ದು ಚೆರಿ, ಸಂದೀಪ ಗಾವಡೆ ಹಾಗೂ ಮಾರ್ಸಲಿನಾ ಎಂಬುವವರ ಶವಗಳು ದೊರೆತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ