ಆ್ಯಪ್ನಗರ

ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರದಿಂದ ನೆರವು ಘೋಷಣೆ, ಎಫ್.ಕೆ.ಸಿ.ಸಿ.ಐ. ಸ್ವಾಗತ

ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ನೆರವು ಘೋಷಣೆ ಮಾಡಿದ್ದಕ್ಕೆ ಎಫ್‌ಕೆಸಿಸಿಐ ಸ್ವಾಗತಿಸಿದೆ. ಕೇಂದ್ರದ ಈ ನಿರ್ಧಾರದಿಂದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಅಭಿವೃದ್ದಿ ಹೊಂದಲು ಸಾಧ್ಯ ಎಂದಿದೆ.

Vijaya Karnataka Web 2 Jun 2020, 4:03 pm
ಬೆಂಗಳೂರು: ಅತೀ ಸಣ್ಣ, ಸಣ್ಣ ಮತ್ತು ಮದ್ಯಮ ಪ್ರಮಾಣದ ಉದ್ದಿಮೆಗಳಿಗೆ ಕೇಂದ್ರ ಸರ್ಕಾರವು ಘೋಷಿಸಿರುವ ನೆರವನ್ನು ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಸ್ವಾಗತಿಸುತ್ತದೆ. ಈ ನೆರವಿನಡಿಯಲ್ಲಿ ಎಂ.ಎಸ್.ಎಂ.ಇ. ಪರಿಭಾಷೆಯನ್ನು ಪರಿಷ್ಕರಿಸಿದ್ದು, ಇದರ ಆಧಾರದಲ್ಲಿ ಎಂ.ಎಸ್.ಎಂ.ಇ. ಪ್ಯಾಕೇಜಿನಲ್ಲಿ ಘೋಷಿಸಿರುವ ನೆರವು ಬಹಳಷ್ಟು ಸಣ್ಣ ಕೈಗಾರಿಕೆಗಳಿಗೆ ಲಭ್ಯವಾಗುತ್ತದೆ. ಈ ನಿರ್ಧಾರಗಳಿಂದ ಪ್ರಥಮ ಬಾರಿಗೆ ಎನ್.ಪಿ.ಎ. ಮಟ್ಟದಲ್ಲಿರುವ ಎಂ.ಎಸ್.ಎಂ.ಇ.ಗಳು ಈ ವ್ಯಾಪ್ತಿಯಿಂದ ಹೊರಬಂದು ಹೆಚ್ಚುವರಿ ಧನಸಹಾಯವನ್ನು ಪಡೆಯಲು ಅರ್ಹತೆ ಪಡೆಯುತ್ತವೆ ಎಂದು ಎಫ್.ಕೆ.ಸಿ.ಸಿ.ಐ.ಸಿ ಅಧ್ಯಕ್ಷ ಆರ್ ಜನಾರ್ಧನ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web industry


ರಾಜ್ಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಇಲ್ಲ, ಇನ್ಮುಂದೆ ಹೋಮ್‌ ಕ್ವಾರಂಟೈನ್‌: ಸುಧಾಕರ್‌

ಇದಲ್ಲದೇ, ಸಂಕಷ್ಟದಲ್ಲಿರುವ ಎಂ.ಎಸ್.ಎಂ.ಇ. ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆಗಾಗಿ ಸುಮಾರು ರೂ.20,000 ಕೋಟಿಗಳಷ್ಟು, ಅಧೀನ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದು, ಸುಮಾರು 2,00,000 ಸಂಕಷ್ಟದಲ್ಲಿರುವ ಘಟಕಗಳಿಗೆ ನೆರವಾಗಲಿದೆ. ಇದರ ಜೊತೆಗೆ ಎಂ.ಎಸ್.ಎಂ.ಇ. ಘಟಕಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ರೂ.50,000 ಕೋಟಿಗಳ ಫಂಡ್ ಆಫ್ ಪಂಡ್ಸ್ ಸ್ಥಾಪನೆ ಮಾಡುವುದರಿಂದ ಡೆಟ್ ಇಕ್ವಿಟಿ ಪ್ರಮಾಣವನ್ನು ಸರಿದೂಗಿಸುವಲ್ಲಿ ಸಹಾಯವಾಗುತ್ತದೆ.

ತವರಿಗೆ ಮರಳಲು ವಲಸೆ ಕಾರ್ಮಿಕರಿಗಿಲ್ಲ ಅವಕಾಶ, ಬಿಲ್ಡರ್‌ಗಳ ಒತ್ತಡಕ್ಕೆ ಮಣಿದ ಸರ್ಕಾರ?

ಎಂ.ಎಸ್.ಎಂ.ಇ. ಮಂತ್ರಾಲಯವು ಚಾಂಪಿಯನ್ ವೆಬ್ ಸೈಟ್ ಪ್ರಾರಂಭಿಸಿದ್ದು, ಪ್ರತಿಯೊಂದು ಎಂ.ಎಸ್.ಎಂ.ಇ. ಡಿಐಗಳಲ್ಲಿ ಚಾಂಪಿಯನ್ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಇದರಿಂದ ಹಲವಾರು ಅತೀ ಸಣ್ಣ ಮತ್ತು ಸಣ್ಣ ಉದ್ದಿಮೆಗಳು ಚಾಂಪಿಯನ್ ಉದ್ದಿಮೆಗಳಾಗಿ ಮಾರ್ಪಾಡಾಗಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಘೋಷಿಸಿರುವ ಎಂ.ಎಸ್.ಎಂ.ಇ. ಪ್ಯಾಕೇಜುಗಳಿಂದ ಸದರಿ ಉದ್ದಿಮೆಗಳು ಮುಂದಿನ ದಿನಗಳಲ್ಲಿ ಶರವೇಗದಿಂದ ಅತ್ಯಂತ ಶಕ್ತಿಶಾಲಿಯಾಗಿ ಬೆಳೆಯುವ ಅವಕಾಶಗಳಿವೆ. ಈ ಕ್ರಮಗಳಿಗೆ ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಕೇಂದ್ರ ಎಂ.ಎಸ್.ಎಂ.ಇ. ಸಚಿವರಾದ ನಿತಿನ್ ಗಡ್ಕರಿರವರಿಗೆ ಧನ್ಯವಾದ ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ