ಆ್ಯಪ್ನಗರ

ಎ,ಬಿ ವರ್ಗದ ಮನೆ ಹಾನಿಗೆ ₹5 ಲಕ್ಷ , ಸಿ ವರ್ಗದ ಮನೆ ನಷ್ಟಕ್ಕೆ ₹50 ಸಾವಿರ ಪರಿಹಾರ ಸರಕಾರದ ಅಧಿಕೃತ ಆದೇಶ

ಸಿಎಂ ನೀಡಿದ ಭರವಸೆಯಂತೆ ಪ್ರವಾಹದಿಂದ ಮನೆ ಹಾನಿ ಸಂಬಂಧ 5 ಲಕ್ಷ ರೂ ಪರಿಹಾರ ನೀಡಲು ಅಧಿಕೃತ ಆದೇಶ ಹೊರಡಿಸಲಾಗಿದೆ. ಶೇ.25ಕ್ಕಿಂತ ಕಡಿಮೆ ಹಾನಿಗೊಳಗಾದ ಸಿ ವರ್ಗದಡಿಯ ಮನೆಗಳ ಸಂಬಂಧ 50 ಸಾವಿರ ರೂ. ಪರಿಹಾರ ಕೊಡಲಾಗುತ್ತದೆ.

Vijaya Karnataka Web 19 Oct 2019, 10:20 am
ಬೆಂಗಳೂರು: ವಿಧಾನಮಂಡಲದಲ್ಲಿ ಸಿಎಂ ನೀಡಿದ ಭರವಸೆಯಂತೆ ಪ್ರವಾಹದಿಂದ ಮನೆ ಹಾನಿ ಸಂಬಂಧ 5 ಲಕ್ಷ ರೂ. ಪರಿಹಾರ ನೀಡಲು ಅಧಿಕೃತ ಆದೇಶ ಹೊರಡಿಸಲಾಗಿದೆ.
Vijaya Karnataka Web Bengaluru: An aerial view of the flood-affected districts of north Karnataka, in...
An aerial view of the flood-affected districts of north Karnataka, in Bengaluru.CM BS Yediyurappa to undertake aerial survey9.Photo) (


ಶೇ.25 ರಿಂದ ಶೇ.75 ರಷ್ಟು ಹಾಗೂ ಸಂಪೂರ್ಣ ನಷ್ಟವಾಗಿರುವ ಎ ಮತ್ತು ಬಿ ವರ್ಗದಡಿಯ ಮನೆಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಶೇ.25ಕ್ಕಿಂತ ಕಡಿಮೆ ಹಾನಿಗೊಳಗಾದ ಸಿ ವರ್ಗದಡಿಯ ಮನೆಗಳ ಸಂಬಂಧ 50 ಸಾವಿರ ರೂ. ಪರಿಹಾರ ಕೊಡಲಾಗುತ್ತದೆ. ಈ ಪ್ರಸ್ತಾವನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿಸರಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್‌) ಕರ್ನಾಟಕಕ್ಕೆ 897 ಕೋಟಿ ರೂಪಾಯಿ ನೆರೆ ಪರಿಹಾರ ಬಿಡುಗಡೆ ಮಾಡಿದೆ. ಇನ್ನೂ 303 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದೆ.

ಗೃಹ ಸಚಿವಾಲಯದ ಆದೇಶದ ಮೇರೆಗೆ ಮೊದಲ ಹಂತದಲ್ಲಿ 897 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಬಾಕಿ 303 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಎನ್‌ಡಿಆರ್ ಎಫ್‌ ತಿಳಿಸಿದೆ. ಆದರೆ, ಬಾಕಿ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ