ಆ್ಯಪ್ನಗರ

ನೆರೆ ಪರಿಹಾರ ನೀಡದ ಕೇಂದ್ರದ ವಿರುದ್ಧ ಸಂಪುಟ ಸಭೆಯಲ್ಲಿ ಅಸಮಧಾನ!

"ಪರಿಹಾರಕ್ಕಾಗಿ ಇಷ್ಟು ವಿಳಂಬ ಮಾಡಿದ್ದು ಸರಿಯಲ್ಲ. ಜನರಿಗೆ, ಮಾಧ್ಯಮಗಳಿಗೆ ಉತ್ತರಿಸಲು ಆಗ್ತಿಲ್ಲ. ನಮ್ಮ ಸರಕಾರವೇ ಹಿಂಗೆ ಮಾಡಿದ್ರೆ ಹೇಗೆ..? ಎರಡು ತಿಂಗಳು ಬೇಕಾ..?" ಎಂಬುದಾಗಿ ಕೆಲವು ಸಚಿವರು ಸಿಎಂ ಯಡಿಯೂರಪ್ಪ ಅವರಲ್ಲಿ ಅಳಲು ತೋಡಿಕೊಂಡರು.

Vijaya Karnataka Web 3 Oct 2019, 2:18 pm

ಬೆಂಗಳೂರು: ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ವಿಚಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪವಾಯಿತು. ಸ್ವತಃ ಬಿಜೆಪಿ ಸಚಿವರು ಕೇಂದ್ರ ಸರಕಾರದ ನಡೆಗಳ ವಿರುದ್ಧ ಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದರು.
Vijaya Karnataka Web Cabinet Meeting


"ಪರಿಹಾರಕ್ಕಾಗಿ ಇಷ್ಟು ವಿಳಂಬ ಮಾಡಿದ್ದು ಸರಿಯಲ್ಲ. ಜನರಿಗೆ, ಮಾಧ್ಯಮಗಳಿಗೆ ಉತ್ತರಿಸಲು ಆಗ್ತಿಲ್ಲ. ನಮ್ಮ ಸರಕಾರವೇ ಹಿಂಗೆ ಮಾಡಿದ್ರೆ ಹೇಗೆ..? ಎರಡು ತಿಂಗಳು ಬೇಕಾ..?" ಎಂಬುದಾಗಿ ಕೆಲವು ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.

ಈ ವೇಳೆ ಸ್ವತಃ ಯಡಿಯೂರಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿದರು. “ಏನ್ ಮಾಡೋದು ಹೇಳಿ. ನಮ್ಮದೇ ಸರ್ಕಾರ ಕೇಂದ್ರದಲ್ಲಿ ಇದೆ. ಮಾತಾಡುವಂಗಿಲ್ಲ, ಬಿಡುವಂತಿಲ್ಲ,” ಎಂಬುದಾಗಿ ತಮ್ಮ ಅಸಹಾಯಕತೆ ತೆರೆದಿಟ್ಟರು.

ಏನು ಹುಡುಗಾಟಿಕೆ ಮಾಡುತ್ತಿದ್ದೀರಾ? ಕೇಂದ್ರ ಸಚಿವರ ವಿರುದ್ಧ ಯತ್ನಾಳ್‌ ಕಿಡಿ

“ಮೂರ್ನಾಲ್ಕು ದಿನದೊಳಗೆ ನೆರೆ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಯಾರೊಬ್ಬರೂ ಕೂಡ ಬಹಿರಂಗವಾಗಿ ಅಸಮಾಧಾನ ಹೊರಹಾಕಬೇಡಿ. ಆತುರದಿಂದ ಯಾರ ಮೇಲೂ ತಿರುಗಿಬಿದ್ದು ಮಾತನಾಡಬೇಡಿ,” ಎಂಬುದಾಗಿ ಯಡಿಯೂರಪ್ಪ ಸಚಿವರನ್ನು ಸಮಾಧಾನಪಡಿಸಿದರು.

ಕೊನೆಗೆ ಚರ್ಚೆ ನಿಲ್ಲದಿದ್ದಾಗ, “ನಾನು ಮೂರು ದಿನ ನೆರೆಪೀಡಿತ ಪ್ರದೇಶದಲ್ಲಿಯೇ ಇರ್ತೇನೆ. ಆಗಾದ್ರೂ ಪರಿಹಾರ ಬಿಡುಗಡೆ ಮಾಡ್ತಾರಾ ನೋಡೋಣ,” ಎಂಬುದಾಗಿ ಬಿಎಸ್ ಯಡಿಯೂರಪ್ಪ ಚರ್ಚೆಗೆ ಪೂರ್ಣವಿರಾಮ ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ