ಆ್ಯಪ್ನಗರ

1.75 ಲಕ್ಷಕ್ಕೆ ಡಾಕ್ಟರೇಟ್‌ ನೀಡುತ್ತೇವೆ ಎಂದು ಸಚಿವರಿಗೆ ಪತ್ರ ಬರೆದಾತ ಜೈಲಿಗೆ

1.75 ಲಕ್ಷ ಹಣ ಕೊಡಿ ಡಾಕ್ಟರೇಟ್‌ ಪದವಿ ನೀಡುತ್ತೇವೆ ಎಂದು ಪತ್ರ ಬರೆದಿದ್ದವನನ್ನು ಜೈಲಿಗೆ ಅಟ್ಟಿದೆ. ಬಳಿಕ ಪರಿಶೀಲಿಸಿದಾಗ ಅನೇಕ ಮಹನೀರು ಇದೇ ರೀತಿ ದುಡ್ಡು ಕೊಟ್ಟು ಡಾಕ್ಟರೇಟ್‌ ಪದವಿ ಪಡೆದಿದ್ದು ಬೆಳಕಿಗೆ ಬಂದಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

Vijaya Karnataka Web 17 Oct 2019, 8:21 am
ಬೆಂಗಳೂರು: ಡಾಕ್ಟರೇಟ್‌ ಪದವಿ ನೀಡುತ್ತೇವೆ 1.75 ಲಕ್ಷ ಹಣ ಕೊಡಿ ಎಂದು ಪತ್ರ ಬರೆದಿದ್ದವನನ್ನು ಜೈಲಿಗೆ ಅಟ್ಟಿದೆ. ಬಳಿಕ ಪರಿಶೀಲಿಸಿದಾಗ ಅನೇಕ ಮಹನೀರು ಇದೇ ರೀತಿ ದುಡ್ಡು ಕೊಟ್ಟು ಡಾಕ್ಟರೇಟ್‌ ಪದವಿ ಪಡೆದಿದ್ದು ಗೊತ್ತಾಯಿತು ಎಂದು ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದರು.
Vijaya Karnataka Web minister suresh kumar


ಚಡಚಣ ಕೊಲೆ ಆರೋಪಿಗೂ ಡಾಕ್ಟರೇಟ್

ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿಏರ್ಪಡಿಸಿದ್ದ ಸಮಾರಂಭದಲ್ಲಿ ಗಾಂಧಿ ವಿಚಾರ ಚಿಂತಕಿ ಪ್ರೊ. ಮೀನಾ ದೇಶಪಾಂಡೆಯವರಿಗೆ 'ಎ.ಆರ್‌. ನಾರಾಯಣ ಭಟ್ಟ, ಸರೋಜಮ್ಮ ಗಾಂ ಪುದುವಟ್ಟು ಪ್ರಶಸ್ತಿ' (10 ಸಾವಿರ ನಗದು) ಹಾಗೂ ಹೋಟೆಲ್‌ ಉದ್ಯಮಿ ಎಸ್‌. ಷಡಕ್ಷರಿ ಅವರಿಗೆ 'ಲಕ್ಷ್ಮೇದೇವಿ ಮತ್ತು ಎಸ್‌. ರಾಮಚಂದ್ರ ಬಾಯರ್‌' ದತ್ತಿ ಪ್ರಶಸ್ತಿ (5 ಸಾವಿರ ನಗದು)ಗಳನ್ನು ಪ್ರದಾನ ಮಾಡಿ ಬುಧವಾರ ಮಾತನಾಡಿದರು.

ಶಾಸಕರಿಗೆ ನಕಲಿ ಡಾಕ್ಟರೇಟ್‌ ಅಮಿಷವೊಡ್ಡಿದಾತ ಜೈಲು ಪಾಲು

''ಒಂದೂವರೆ ವರ್ಷದ ಹಿಂದೆ ನನಗೆ ಪತ್ರವೊಂದು ಬಂತು. ನಿಮಗೆ ಡಾಕ್ಟರೇಟ್‌ ಪದವಿ ಕೊಡುತ್ತೇವೆ. 1.75 ಲಕ್ಷ ಹಣ ಕೊಡಿ ಎಂದಿದ್ದರು. ಅಲ್ಲದೆ, ಖಡಕ್‌ ಪೊಲೀಸ್‌ ಅಧಿಕಾರಿಯೊಬ್ಬರಿಂದ ಪದವಿ ಪ್ರಮಾಣ ಮಾಡಿಸುವುದಾಗಿ ಆಹ್ವಾನ ಪತ್ರಿಕೆಯನ್ನೂ ಸಿದ್ಧಪಡಿಸಿದ್ದರು. ಕೂಡಲೇ ಆ ಪೊಲೀಸ್‌ ಅಧಿಕಾರಿಗೆ ಪತ್ರ ಕೊಟ್ಟೆ. ಅದು ಆಯುಕ್ತರಿಗೂ ತಲುಪಿತು. ಅದಾದ ಮೂರೇ ದಿನದಲ್ಲಿ ಪತ್ರ ಕಳುಹಿಸಿದ್ದ ವ್ಯಕ್ತಿ ಜೈಲು ಸೇರಿದ ,'' ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ