ಆ್ಯಪ್ನಗರ

ಅಮಿತ್‌ ಶಾ ಭಾಷಣ ಕೇಳಿ ನಗು ಬರ್ತಿತ್ತು: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜ್ಯ ಪ್ರವಾಸ ಮುಕ್ತಾಯವಾಗಿದ್ದು, ಅವರ ಭಾಷಣದ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಅಮಿತ್‌ ಶಾ ಅವರ ಭಾಷಣ ಕೇಳಿದ್ರೆ ನಗು ಬರ್ತಿತ್ತು. ನನ್ನ ಯೋಜನೆಗಳಿಗೆ ಈಗ ಅಡಿಗಲ್ಲು ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ ಕಿಡಿಕಾರಿದ್ದಾರೆ.

Vijaya Karnataka Web 18 Jan 2021, 5:28 pm
ಬೆಂಗಳೂರು: ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಾಡಿದ ಭಾಷಣ ಕೇಳಿ ನಗುಬರುತ್ತಿತ್ತು. ಕಾಂಪೀಟ್‌ ವಿತ್‌ ಚೈನಾ ಯೋಜನೆಯನ್ನು ನಾನು ತಂದಿದ್ದು. ಆದರೆ, ಅದರ ಯೋಜನೆಗಳಿಗೆಲ್ಲಾ ಈಗ ಅಡಿಗಲ್ಲು ಹಾಕುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದರು.
Vijaya Karnataka Web HD kumaraswamy
ಎಚ್‌ಡಿ ಕುಮಾರಸ್ವಾಮಿ, ಮಾಜಿ ಸಿಎಂ (ಸಂಗ್ರಹ ಚಿತ್ರ)


ಜೆಪಿ ಭವನದಲ್ಲಿ ಪ್ರಮುಖ ನಾಯಕರ ಸಭೆ ಬಳಿಕ ಮಾತನಾಡಿದ ಅವರು, ಸೌಜನ್ಯಕ್ಕೂ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ. ಮಾನವೀಯತೆ ಇಲ್ಲದ ಸರಕಾರ ಇದು. ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ನನ್ನ ಯೋಜನೆಯ ನಕಲಾಗಿದೆ. ಇನ್ನು, ಕಿಸಾನ್‌ ಸಮ್ಮಾನ್‌ ಯೋಜನೆ ತೆಲಂಗಾಣ ಮಾದರಿಯದ್ದಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಬಿಜೆಪಿಯವರು ಗ್ರಾಮ‌ ಪಂಚಾಯತಿ ಚುನಾವಣೆಯಲ್ಲಿ ನಾವು ಅತಿ ಹೆಚ್ಚು ಕಡೆ ಗೆದ್ದಿದ್ದೇವೆ ಎಂದು ಹೇಳುತ್ತಿದ್ದಾರೆ. ವಾಸ್ತವಾಂಶ‌ ಏನೆಂಬುದನ್ನು ನಾನು ಅರಿತಿದ್ದೇನೆ. ಅಮಿತ್ ಶಾ ಅವರ ಡಬಲ್‌ ಇಂಜಿನ್ ಸರಕಾರ ರಾಜ್ಯವನ್ನು ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ನಾವು ಭಯಪಡುವ ಅವಶ್ಯಕತೆ ಇಲ್ಲ ಎಂದ ಅವರು, ಖಾಸಗಿ ಶಾಲೆ ಹಾಗೂ ಪೋಷಕರ ನಡುವೆ ಜಟಾಪಟಿ ನಡೆದಿದೆ. ಸರ್ಕಾರ ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕುಳಿತಿದೆ. ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಬೇಕೆಂಬ ಬಯಕೆ ಇತ್ತು. ಆದರೆ, ಅದು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಧ್ವಜ ವಿಚಾರದಲ್ಲಿ ಎಂಇಎಸ್‌ಗೆ ತಕ್ಕ ಉತ್ತರ ಕೊಡ್ತಿದ್ದರೆ ಇಂದು ಉದ್ಧವ್‌ ಇಂತಹ ಹೇಳಿಕೆ ಕೊಡ್ತಿರಲಿಲ್ಲ; ಎಚ್‌ಡಿಕೆಜೆಡಿಎಸ್‌ ಪುನಶ್ಚೇತನಕ್ಕೆ ಅಣಿ
ಇನ್ನು, ಸಂಕ್ರಾಂತಿ ಬಳಿಕ ಜೆಡಿಎಸ್‌ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸೋಮವಾರದಿಂದಲೇ ಚಾಲನೆ ದೊರೆತಿದೆ. ಮೊದಲ ಹಂತವಾಗಿ ಪಕ್ಷದ 32 ಪ್ರಮುಖ ನಾಯಕರ ಸಭೆ ಕರೆಯಲಾಗಿತ್ತು. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಏಳು ವಿಭಾಗಗಳಲ್ಲಿ ವೀಕ್ಷಕರ ಸಮಿತಿ ರಚನೆ ಮಾಡಲಾಗಿದೆ ಎಂದರು.
RAF ಘಟಕದ ಅಡಿಗಲ್ಲು ಫಲಕದಲ್ಲಿ ಕನ್ನಡವೇಕಿಲ್ಲ: ಶಾ, ಬಿಎಸ್‌ವೈಗೆ ಎಚ್‌ಡಿಕೆ ಪ್ರಶ್ನೆ!ಕುಟುಂಬಸ್ಥರಿಗೆ ಆರೋಗ್ಯ ಸಮಸ್ಯೆ ಇರುವ ಕಾರಣ ವೈಎಸ್‌ವಿ ದತ್ತಾ ಬಂದಿಲ್ಲ. ಡಿಸಿಎಂ ಕಾರ್ಯಕ್ರಮ ಇರುವ ಕಾರಣ ದೇವೇಂದ್ರ ಚೌಹಾಣ್ ಬಂದಿಲ್ಲ. ಏಳು ವಿಭಾಗಗಳಲ್ಲಿ ವೀಕ್ಷಕರ ಸಮಿತಿ ರಚನೆ ಮಾಡಲಾಗಿದೆ. ಹೈದರಾಬಾದ್‌ ಕಲ್ಯಾಣ ಭಾಗಕ್ಕೆ ಬಂಡೆಪ್ಪ ಕಾಶೆಂಪೂರ, ಮುಂಬೈ ಕರ್ನಾಟಕಕ್ಕೆ ಬಸವರಾಜ ಹೊರಟ್ಟಿ, ಮಧ್ಯ ಕರ್ನಾಟಕಕ್ಕೆ ಶಿವಶಂಕರ್ ಸೇರಿ ಎಲ್ಲ ಭಾಗಗಳಲ್ಲೂ ಜವಾಬ್ದಾರಿ ನೀಡಲಾಗಿದೆ ಎಂದರು.
ಒಕ್ಕಲಿಗ ಸಮುದಾಯಕ್ಕೆ ಅಧಿಕಾರ ಪೂರೈಸಲಾಗದ ಶಾಪ ಇದೆ; ಎಚ್‌ಡಿ ಕುಮಾರಸ್ವಾಮಿಪಕ್ಷ ಸಂಘಟನೆಗೆ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ ಅವರು ಎಚ್.ಡಿ.ಕುಮಾರಸ್ವಾಮಿ, ಪಕ್ಷಕ್ಕೆ ಬದ್ಧತೆಯಿಂದ ದುಡಿಯುವರಿಗೆ ಅವಕಾಶ ನೀಡಲಾಗುವುದು. ಎಲ್ಲ ಸಭೆ, ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ