ಆ್ಯಪ್ನಗರ

ಐಟಿ ಅಧಿಕಾರಿಗಳ ಮುಂದೆ ಹಾಜರಾದ ಜಿ.ಪರಮೇಶ್ವರ

ಐಟಿ ದಾಳಿಗೆ ಸಂಬಂಧಿಸಿ ಇಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಅವರು ಆದಾಯ ಇಲಾಖೆ ಕಚೇರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಅವರ ಆಪ್ತರಿಗೂ ನೋಟಿಸ್ ಕೊಡಲಾಗಿದ್ದು, ಎಲ್ಲರೂ ಇಂದು ವಿಚಾರಣೆ ಎದುರಿಸಲಿದ್ದಾರೆ.

Vijaya Karnataka Web 15 Oct 2019, 11:25 am
ಬೆಂಗಳೂರು: ಆದಾಯ ಇಲಾಖೆ ದಾಳಿ ನಡೆಸಿದ ವಿಚಾರವಾಗಿ ಇಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು ಬೆಂಗಳೂರಿನ ಕ್ವಿನ್ಸ್ ರೋಡ್ ನಲ್ಲಿರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
Vijaya Karnataka Web g param


ಪತಿ ಸಾವಿಗೆ ಐಟಿ ಚಿತ್ರಹಿಂಸೆ ಕಾರಣ - ರಮೇಶ್‌ ಪತ್ನಿ ಗಂಭೀರ ಆರೋಪ

ಅ.10ರಿಂದ ಅ.12ರ ತಡರಾತ್ರಿವರೆಗೆ ದಾಳಿ ನಡೆಸಿದ್ದ ಐಟಿ ಇಲಾಖೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳು, ಪರಮೇಶ್ವರ ಅವರ ವ್ಯವಹಾರಗಳು ಸೇರಿದಂತೆ ಇತರ ಹಲವು ಮಾಹಿತಿ, ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದಾದ ಬಳಿಕ ಐಟಿ ಅಧಿಕಾರಿಗಳ ಬಳಿ ದಾಳಿಗೆ ಸಂಬಂಧಿಸಿ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂದಿದ್ದರು.


ಸಿದ್ಧಾರ್ಥ ಸಂಸ್ಥೆಯಿಂದ ಕೋಟ್ಯಂತರ ತೆರಿಗೆ ಬಾಕಿ

ಸಿದ್ದಾರ್ಥ ಮತ್ತು ಆರ್ ಎನ್ ಜಾಲಪ್ಪ ವೈದ್ಯ ಶಿಕ್ಷಣ ಸಂಸ್ಥೆಗಳು ಒಟ್ಟಾರೆ ಸುಮಾರು ನೂರು ಕೋಟಿ ರೂಪಾಯಿ ಮೌಲ್ಯದ 184 ಮೆಡಿಕಲ್ ಸೀಟುಗಳು ಮಾರಾಟ ಮಾಡಿ ಅಕ್ರಮದಲ್ಲಿ ಭಾಗಿಯಾಗಿವೆ ಆದಾಯ ತೆರಿಗೆ ಇಲಾಖೆ ಆರೋಪಿಸಿದೆ.

ಐಟಿ ದಾಳಿ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
ದಾಳಿ ವೇಳೆ ಪರಮೇಶ್ವರ್ ಅವರ ಮನೆಯಲ್ಲಿ 89 ಲಕ್ಷ ರೂಪಾಯಿ ನಗದು ಸಿಕ್ಕಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ ಸಮನ್ಸ್ ನೀಡಿತ್ತು. ಇಂದು ಪರಮೇಶ್ವರ್ ಅವರ ಸಹೋದರನ ಪುತ್ರ ಆನಂದ್ ಕೂಡ ಐಟಿ ವಿಚಾರಣೆಗೆ ಆಗಮಿಸಿದ್ದಾರೆ.

ರಾಜಕೀಯ ಪ್ರೇರಿತ ದಾಳಿಯೇ ಎಂಬುದು ಗೊತ್ತಿಲ್ಲ, ಅಧಿಕಾರಿಗಳಿಗೆ ಸಹಕರಿಸುತ್ತೇನೆ: ಜಿ. ಪರಮೇಶ್ವರ್

ಇನ್ನೊಂಡೆದೆ ಇನ್ನು ಐಟಿ ದಾಳಿಗೆ ಹೆದರಿ ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಐಟಿ ದಾಳಿಗೆ ಹೆದರಿ, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ರಮೇಶ್ ಡೆತ್ ನೋಟ್ ಬರೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ