ಆ್ಯಪ್ನಗರ

ಸ್ಪಿರಿಟ್‌ಗೂ ಮಲ್ಯಗೂ ಸಂಬಂಧವಿಲ್ಲ: ಚಿದಂಬರಂ ವಾದ

ಐಡಿಬಿಐ ಸಾಲದಿಂದ ವಿಜಯ್‌ ಮಲ್ಯರನ್ನು ಮುಕ್ತಗೊಳಿಸಬೇಕು ಎಂದು ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ವಾದಿಸಿದ್ದಾರೆ.

Vijaya Karnataka Web 29 Nov 2018, 10:03 am
ಬೆಂಗಳೂರು: ವಿಜಯ್‌ ಮಲ್ಯ ಹಾಗೂ ಯುನೈಟೆಡ್‌ ಸ್ಪಿರಿಟ್‌ ಲಿ. ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ವಾದಿಸಿದ್ದಾರೆ.
Vijaya Karnataka Web chidu


ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಕೇಂದ್ರ ಮಾಜಿ ಸಚಿವ ಚಿದಂಬರಂ, ಬ್ಯಾಂಕ್‌ಗಳಿಂದ ಸಾಲ ತೆಗೆದು ವಿದೇಶಕ್ಕೆ ಪಲಾಯನ ಮಾಡಿದ ವಿಜಯ್‌ ಮಲ್ಯ ಪರ ಬುಧವಾರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

ಐಡಿಬಿಐ ಸಾಲದಿಂದ ವಿಜಯ್‌ ಮಲ್ಯರನ್ನು ಮುಕ್ತಗೊಳಿಸಬೇಕು. ಏಕೆಂದರೆ ಯುನೈಟೆಡ್‌ ಸ್ಪಿರಿಟ್‌ ಲಿ. ಸಂಸ್ಥೆ ಹಾಗೂ ಮಲ್ಯ ಅವರಿಗೂ ಸಂಬಂಧವಿಲ್ಲ. ವಿಜಯ್‌ ಮಲ್ಯ ಕೇವಲ ಶೇ.2ರಷ್ಟು ಷೇರು ಹೊಂದಿದ್ದಾರೆ. ಯುಎಸ್‌ಎಲ್‌ ಸಂಸ್ಥೆ ಸಂಪೂರ್ಣ ವಿಭಿನ್ನ ಕಂಪನಿ ಎಂದು ಚಿದಂಬರಂ ವಾದ ಮಂಡಿಸಿದ್ದಾರೆ.

ಚಿದಂಬರಂ ಅವರ ವಾದವನ್ನು ಒಪ್ಪದ ಐಡಿಬಿಐ ವಕೀಲರು, ಮಲ್ಯ ಅವರಿಗೆ ಸಾಲ ನೀಡುವ ವೇಳೆ ಅವರು ಯುಎಸ್‌ಎಲ್‌ ಅಧ್ಯಕ್ಷರಾಗಿದ್ದರು. ಹೀಗಾಗಿಯೇ ಅವರಿಗೆ ಕಿಂಗ್‌ಫಿಶರ್‌ ಏರ್‌ಲೈನ್ಸ್‌ಗಾಗಿ ಸಾಲ ನೀಡಿದ್ದೇವೆ. ಯುಎಸ್‌ಎಲ್‌ ಈ ಸಾಲಕ್ಕಾಗಿ ಕಾರ್ಪೊರೇಟ್‌ ಗ್ಯಾರೆಂಟಿ ನೀಡಿದೆ ಎಂದು ಪ್ರತಿವಾದ ಮಾಡಿದ್ದಾರೆ.

ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್‌ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ