ಆ್ಯಪ್ನಗರ

ಸದನದಲ್ಲಿ ಸದ್ದು ಮಾಡಿದ ‘ಶವ ರಾಜಕೀಯ’ ; ಖಾದರ್‌ ಮಾತಿಗೆ ಮಾಧುಸ್ವಾಮಿ ಆಕ್ರೋಶ

ವಿಧಾನಸಭಾ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸದನದಲ್ಲಿ ಶವ ರಾಜಕೀಯದ ವಿಚಾರವಾಗಿ ಸದ್ದುಗದ್ದಲ ನಡೆಯಿತು. ಕೊರೊನಾದಿಂದ ಮೃತಪಟ್ಟವರ ಶವವನ್ನು ಗೌರವಯುತವಾಗಿ ರಾಜ್ಯ ಸರ್ಕಾರ ನಡೆಸಿಲ್ಲ, ಶವದ ಮೇಲೆ ರಾಜಕೀಯ ಮಾಡುವ ಸಂಸ್ಕೃತಿ ನಿಮ್ಮದು ಎಂದು ಕಿಡಿಕಾರಿದರು. ಇದಕ್ಕೆ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ ಖಾದರ್ ವಿರುದ್ಧ ಕಿಡಿಕಾರಿದರು.

Vijaya Karnataka Web 22 Sep 2020, 6:02 pm
ಬೆಂಗಳೂರು: ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇಂದು ಕಲಾಪದಲ್ಲಿ ಮಾತನಾಡುತ್ತಿದ್ದ ವೇಳೆ ಮಾಜಿ ಸಚಿವ ಯುಟಿ ಖಾದರ್ ಅವರು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
Vijaya Karnataka Web MOnsoon Session
PTI


'ಸರ್ಕಾರ ಘೋಷಿಸಿದ ಸಹಾಯಧನ 10% ಜನರಿಗೂ ತಲುಪಿಲ್ಲ' ; ಸದನದಲ್ಲಿ ಡಿಕೆ ಶಿವಕುಮಾರ್ ಕಿಡಿ..!

ಕೊರೊನಾ ನಿರ್ವಹಣೆ ವಿಚಾರವಾಗಿ ರಾಜ್ಯ ಸರ್ಕಾರದ ವಿಫಲತೆ ಬಗ್ಗೆ ನಿಯಮ 69ರ ಅಡಿಯಲ್ಲಿ ಮಾತನಾಡುತ್ತಿದ್ದ ಖಾದರ್, ತಮ್ಮ ಮಾತಿನ ಸಂದರ್ಭದಲ್ಲಿ ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರದ ಸಂದರ್ಭದಲ್ಲಿ ಮೃತದೇಹಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಶವದ ಮೇಲೆ ರಾಜಕೀಯ ಮಾಡುವ ಸಂಸ್ಕೃತಿ ನಮ್ಮದಲ್ಲ, ಬದಲಾಗಿ ನಿಮ್ಮದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

‘ನಾಯಕತ್ವ ಬದಲಾವಣೆ ಸುದ್ದಿ ಸತ್ಯಕ್ಕೆ ದೂರವಾದ ವಿಚಾರ’; ಕ್ಯಾ.ಗಣೇಶ್ ಕಾರ್ಣಿಕ್ ಸ್ಪಷ್ಟನೆ

ಈ ವೇಳೆ ಖಾದರ್ ಮಾತಿಗೆ‌‌ ಆಕ್ಷೇಪ ವ್ಯಕ್ತಪಡಿಸಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಸಚಿವ ಮಾಧುಸ್ವಾಮಿ, ಈ ರೀತಿ ಮಾತನಾಡಬೇಡಿ, ಸಂಸ್ಕೃತಿ ಪಾಠ ಮಾಡಬೇಡಿ ಎಂದು‌ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲಹೊತ್ತು ಸದನದಲ್ಲಿ ಸದ್ದುಗದ್ದಲ ನಡೆಯಿತು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳಿಂದ ಪರವಿರೋಧ ವಾಗ್ದಾಳಿ ನಡೆಯಿತು.

‘ಖಾಸಗಿ ಆಸ್ಪತ್ರೆಗಳು ಸರ್ಕಾರದ ಹಿಡಿತದಲ್ಲಿ ಇಲ್ವಾ?’: ಎಚ್‌ಡಿ ರೇವಣ್ಣ ಪ್ರಶ್ನೆ

ನಂತರ ಮಾತನಾಡಿದ ಖಾದರ್, ಬಳ್ಳಾರಿಯಲ್ಲಿ ಕೊರೊನಾದಿಂದ ಮೃತಪಟ್ಟವರ ಶವಕ್ಕೆ ಅವಮಾನ ಮಾಡಿದ್ದು ಯಾರು ಸರ್ಕಾರವನ್ನು ಪ್ರಶ್ನಿಸಿದರು. ಖಾದರ್ ಪ್ರಶ್ನೆಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಬಳ್ಳಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಸುಧಾಕರ್ ಮಾಹಿತಿ ನೀಡಿದರು. ಅಲ್ಲದೇ ಆ ಕಾರಣ ಮುಂದಿಟ್ಟು ಸಂಸ್ಕೃತಿ ಎಂದೆಲ್ಲಾ ಮಾತನಾಡಬೇಡಿ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ