ಆ್ಯಪ್ನಗರ

ಹಸಿರು ಕರ್ನಾಟಕಕ್ಕೆ ಆಗಸ್ಟ್‌ 15 ರಂದು ಚಾಲನೆ

ಹಸಿರು ಕರ್ನಾಟಕ ಯೋಜನೆಗೆ ಆಗಸ್ಟ್‌ 15 ರಂದು ಚಾಲನೆ ನೀಡಲಾಗುವುದು. ಈ ಬಾರಿ 5.50 ಕೋಟಿ ಸಸಿ ನೆಡುವ ಗುರಿಯಿದೆ ಎಂದು ಅರಣ್ಯ ಸಚಿವ ಆರ್‌. ಶಂಕರ್‌ ತಿಳಿಸಿದ್ದಾರೆ.

Vijaya Karnataka 11 Aug 2018, 5:00 am
ಬೆಂಗಳೂರು : ಹಸಿರು ಕರ್ನಾಟಕ ಯೋಜನೆಗೆ ಆಗಸ್ಟ್‌ 15 ರಂದು ಚಾಲನೆ ನೀಡಲಾಗುವುದು. ಈ ಬಾರಿ 5.50 ಕೋಟಿ ಸಸಿ ನೆಡುವ ಗುರಿಯಿದೆ ಎಂದು ಅರಣ್ಯ ಸಚಿವ ಆರ್‌. ಶಂಕರ್‌ ತಿಳಿಸಿದ್ದಾರೆ.
Vijaya Karnataka Web from august 15 green karnataka initiative
ಹಸಿರು ಕರ್ನಾಟಕಕ್ಕೆ ಆಗಸ್ಟ್‌ 15 ರಂದು ಚಾಲನೆ


ಶುಕ್ರವಾರ ಅರಣ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ''ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವರು ಗಿಡ ನೆಡುವ ಮೂಲಕ ಈ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಜನರಿಗೂ ಗಿಡ ವಿತರಿಸಲಾಗುವುದು. ಸರಕಾರಿ, ಖಾಸಗಿ ಜಮೀನಿನಲ್ಲಿ ಗಿಡ ನೆಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ಅರಣ್ಯಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ಶೇ.21 ರಷ್ಟು ಅರಣ್ಯವಿದೆ. ಇದನ್ನು ಶೇ.33 ಕ್ಕೆ ಹೆಚ್ಚಿಸುವ ಉದ್ದೇಶವಿದೆ. ಪರಿಸರ ಸಂಘಟನೆ ಕಾರ್ಯಕರ್ತರು, ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಗುವುದು'' ಎಂದು ಹೇಳಿದರು. ನರೇಗಾದಡಿಯೂ ಸಸಿ ನೆಡಿಸಲಾಗುವುದು. ನೀಲಗಿರಿ ಬೆಳೆಯುವುದನ್ನು ನಿಷೇಧಿಸಲಾಗಿದೆ. ತೇಗವನ್ನು ಇತರ ಜಾತಿಯ ಗಿಡಗಳ ಮಧ್ಯೆ ಬೆಳೆಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ