ಆ್ಯಪ್ನಗರ

ಪಿಯುಸಿ ಉತ್ತರ ಪತ್ರಿಕೆಯಲ್ಲಿ ತಮಾಷೆ ಉತ್ತರಗಳು

ಭಾನುವಾರ, ಕೋಳಿ ಸಾರು ಮಾಡಲು ಪ್ರಯತ್ನಿಸಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಾರುಕಟ್ಟೆಯಿಂದ ಮೊದಲು ಒಂದು ಕೆ.ಜಿ ಚಿಕನ್ ತಂದೆ. ತುಂಬಾ ಚೆನ್ನಾಗಿತ್ತು. ಮೊದಲು ಸಣ್ಣಸಣ್ಣದಾಗಿ ಕಟ್ ಮಾಡಿಕೊಂಡೆ. ಮಸಾಲೆ ಸಿದ್ಧಪಡಿಸಿಕೊಂಡು ಈರುಳ್ಳಿ ಹೆಚ್ಚಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡೆ. ಆಮೇಲೆ ಸಾಂಬಾರ್ ತಯಾರಿಸಿ ನೋಡಿ ತುಂಬಾ ರುಚಿಯಾಗಿರುತ್ತದೆ.

Bangalore Mirror Bureau 12 Apr 2017, 7:25 pm
ಬೆಂಗಳೂರು: ಪಿಯುಸಿ ಮೌಲ್ಯಮಾಪನ ನಡೆಯುತ್ತಿದ್ದು, ಹಲವಾರು ವಿದ್ಯಾರ್ಥಿಗಳು ತಮಾಷೆ ಉತ್ತರಗಳನ್ನು ಬರೆದಿರುವುದು ಪತ್ತೆಯಾಗಿದೆ. ವಿಜಯ ಕರ್ನಾಟಕ ಸೋದರ ಪತ್ರಿಕೆ 'ಬೆಂಗಳೂರು ಮಿರರ್' ಉಪನ್ಯಾಸಕರನ್ನು ಸಂಪರ್ಕಿಸಿದಾಗ ಕೆಲವು ವಿದ್ಯಾರ್ಥಿಗಳು ಕೊಟ್ಟಿರುವ ತಮಾಷೆ ಉತ್ತರಗಳನ್ನು ಅವರು ಹಂಚಿಕೊಂಡಿದ್ದಾರೆ.
Vijaya Karnataka Web funny answers to pu questions
ಪಿಯುಸಿ ಉತ್ತರ ಪತ್ರಿಕೆಯಲ್ಲಿ ತಮಾಷೆ ಉತ್ತರಗಳು


ಕೆಲವು ವಿದ್ಯಾರ್ಥಿಗಳು ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಿದ್ದರೆ, ಒಬ್ಬ ಸಾರ್ ನೀವು ಕೈಯಲ್ಲಿ ಹಿಡಿದುಕೊಂಡಿರುವುದು ಪೆನ್ನಲ್ಲ ನನ್ನ ಭವಿಷ್ಯ ಎಂದಿದ್ದಾನೆ. ಇನ್ನೊಬ್ಬನಂತೂ ಸಾರ್ ನಾನು ಕನ್ನಡ ಸ್ಟುಡೆಂಟ್, ಇಂಗ್ಲಿಷ್‌ನಲ್ಲಿ ಬರೆಯುವುದು ಹೇಗೆ ಅಂತ ಗೊತ್ತಿಲ್ಲ. ಕನ್ನಡದಲ್ಲೆ ಇಂಗ್ಲಿಷ್ ಪರೀಕ್ಷೆಯನ್ನು ನನಗೆ ತಿಳಿದ ಮಟ್ಟಿಗೆ ಚೆನ್ನಾಗಿ ಬರೆದಿದ್ದೇನೆ ಎಂದಿದ್ದಾನೆ.

ಮುಖ್ಯವಾಗಿ ಎಮೋಷನಲ್ ಬ್ಲ್ಯಾಕ್ ಮೇಲ್ ತಂತ್ರವನ್ನು ಬಹುತೇಕ ವಿದ್ಯಾರ್ಥಿಗಳು ಬಳಸಿರುವುದು ಪತ್ತೆಯಾಗಿದೆ. ಅವುಗಳಲ್ಲಿ ಒಂದು ಉತ್ತರ ಹೀಗಿದೆ, "ನನ್ನನ್ನು ಪಾಸು ಮಾಡಲು ನಿಮಗೆ ನಿಜವಾದ ಕಾರಣ ಇದೆ. ನನಗೆ ತಂದೆತಾಯಿ ಇಲ್ಲ. ಒಡಹುಟ್ಟಿದವರ ಜವಾಬ್ದಾರಿ ನನ್ನ ಮೇಲೆ ಇದೆ. ನಿಮ್ಮ ಕೈಯಲ್ಲಿ ಇರುವುದು ಲೇಖನಿ ಅಲ್ಲ, ನನ್ನ ಭವಿಷ್ಯ."

ಒಬ್ಬನಂತೂ ಚಿಪ್ಕೋ ಚಳವಳಿ ಬಗ್ಗೆ ಬರೆಯಲು ಕೇಳಿದ್ದರೆ, "ಸಾರ್, ಈ ಸಲ ಪಾಸ್ ಮಾಡಿಬಿಡಿ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ವಂದನಾ ಶಿವ ಬಗ್ಗೆ ನನಗೆ ಎಲ್ಲವೂ ಗೊತ್ತು. ಆದರೆ ಈ ಕ್ಷಣದಲ್ಲಿ ಅವರ ಬಗ್ಗೆ ನನಗೆ ಏನೂ ನೆನಪಾಗುತ್ತಿಲ್ಲ." ಎಂದು ಬರೆದಿದ್ದಾನೆ ಈ ಘಜನಿ ಸ್ಟುಡೆಂಟ್.

ಉಪನ್ಯಾಸಕರೊಬ್ಬರು ಇನ್ನೊಂದು ಘಟನೆಯನ್ನು ನೆನಪಿಕೊಂಡಿದ್ದಾರೆ, "ವಿದ್ಯಾರ್ಥಿಯೊಬ್ಬ ಬರೆದಿದ್ದ ಉತ್ತರ ನನಗೆ ಇನ್ನೂ ನೆನಪಿದೆ. ಅವರ ತಂದೆ ಯೋಧನಂತೆ. ಯುದ್ಧದಲ್ಲಿ ಹುತಾತ್ಮನಾದ ಕಾರಣ ಓದಲು ಸಾಧ್ಯವಾಗಲಿಲ್ಲವಂತೆ" ಎಂದು ಉತ್ತರಿಸಿದ್ದ ಎಂದು. ಇನ್ನೊಬ್ಬರು ಒಂದು ವೇಳೆ ಶೇ.80ಕ್ಕಿಂತ ಜಾಸ್ತಿ ಅಂಕ ಬರದಿದ್ದರೆ ನನ್ನ ತಂದೆತಾಯಿ ಮುಂದೆ ಓದಿಸಲ್ಲ ಅಂತ. ಆದರೆ ಈ ರೀತಿಯ ಉತ್ತರಗಳಿಗೆ ಯಾವ ಉಪನ್ಯಾಸಕರು ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ ಎನ್ನುವುದು ಬೇರೆ ವಿಚಾರ.

ಇಲ್ಲಿವೆ ನೋಡಿ ಇನ್ನಷ್ಟು ತಮಾಷೆ ಉತ್ತರಗಳು:

"ಮೌಲ್ಯಮಾಪಕರು ನನ್ನನ್ನು ಪಾಸು ಮಾಡದಿದ್ದರೆ, ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ನಾನು ಮಾಟ ಮಾಡಿಸುತ್ತೇನೆ, ಎಲ್ಲರೂ ಸಾಯ್ತೀರ. ನಾನೊಬ್ಬ ಒಳ್ಳೆಯ ವಿದ್ಯಾರ್ಥಿ. ಎಲ್ಲ ಪತ್ರಿಕೆಗಳನ್ನು ಚೆನ್ನಾಗಿ ಉತ್ತರಿಸಿದ್ದೇನೆ. ಆದರೆ ಗಣಿತ ಮಾತ್ರ ಕಷ್ಟವಾಗಿದೆ. ಕಷ್ಟವಾಗಿ ಕೊಟ್ಟಿರುವುದು ನನ್ನ ತಪ್ಪಲ್ಲ. ನನ್ನ ಅಣ್ಣಂದಿರು ಹೋಗಿರುವ ಕಾಲೇಜಿಗೆ ಹೋಗಬೇಕೆಂಬ ಕನಸಿದೆ. ಒಂದು ವೇಳೆ ಫೇಲ್ ಮಾಡಿದರೆ, ಮನೆಯಲ್ಲಿ ಬೈತಾರೆ ನಾನು ನೇಣು ಬಿಗಿದುಕೊಳ್ಳಬೇಕಾಗುತ್ತ."

ಒಬ್ಬ ವಿದ್ಯಾರ್ಥಿಯಂತೂ ಅಂಕಗಳನ್ನು ಯಾಕೆ ಕೊಡಬೇಕು ಮತ್ತು ತನ್ನನ್ನು ಯಾಕೆ ಪಾಸು ಮಾಡಬೇಕು ಅಂತ ಬರೆದುಕೊಂಡಿದ್ದ. ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಆದರೆ ನಪಾಸಾದರೆ ಆ ಹುಡುಗಿ ತನ್ನನ್ನು ಗಂಡನನ್ನಾಗಿ ಸ್ವೀಕರಿಸಲ್ಲವಂತೆ. ಹಾಗಾಗಿ ದಯವಿಟ್ಟು ಪಾಸು ಮಾಡಿ ಎಂದು ವಿನಂತಿಸಿಕೊಂಡಿದ್ದ.

"ಭಾನುವಾರ, ಕೋಳಿ ಸಾರು ಮಾಡಲು ಪ್ರಯತ್ನಿಸಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಾರುಕಟ್ಟೆಯಿಂದ ಮೊದಲು ಒಂದು ಕೆ.ಜಿ ಚಿಕನ್ ತಂದೆ. ತುಂಬಾ ಚೆನ್ನಾಗಿತ್ತು. ಮೊದಲು ಸಣ್ಣಸಣ್ಣದಾಗಿ ಕಟ್ ಮಾಡಿಕೊಂಡೆ. ಮಸಾಲೆ ಸಿದ್ಧಪಡಿಸಿಕೊಂಡು ಈರುಳ್ಳಿ ಹೆಚ್ಚಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡೆ. ಆಮೇಲೆ ಸಾಂಬಾರ್ ತಯಾರಿಸಿ ನೋಡಿ ತುಂಬಾ ರುಚಿಯಾಗಿರುತ್ತದೆ."

Funny Answers to PU questions

Bangalore Mirror spoke with PU lecturers to know what’s going on with the evaluation process. Many of them admitted that going through answer scripts was, too often, a task that required a certain emotional durability.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ