ಆ್ಯಪ್ನಗರ

ಹುಕ್ಕೇರಿ ತಮಾಷೆಯ ಬಾಂಬ್‌

ಸಮ್ಮಿಶ್ರ ಸರಕಾರದ ಗೋಣು ಮುರಿಯಲು ಆಪರೇಷನ್‌ ಕಮಲದ ಬಲೆ ಹೆಣೆದ ಬೆಳಗಾವಿಯಲ್ಲಿ, ಕಾಂಗ್ರೆಸ್‌ ಶಾಸಕರೊಬ್ಬರ ಬಿಜೆಪಿ ಸೇರುವ ಹೇಳಿಕೆ ಸ್ವತಃ ಬಿಜೆಪಿಗರಿಗೇ ಶಾಕ್‌ ಕೊಟ್ಟಿದೆ!

Vijaya Karnataka 14 Jan 2019, 5:00 am
ಬೆಳಗಾವಿ: ಸಮ್ಮಿಶ್ರ ಸರಕಾರದ ಗೋಣು ಮುರಿಯಲು ಆಪರೇಷನ್‌ ಕಮಲದ ಬಲೆ ಹೆಣೆದ ಬೆಳಗಾವಿಯಲ್ಲಿ, ಕಾಂಗ್ರೆಸ್‌ ಶಾಸಕರೊಬ್ಬರ ಬಿಜೆಪಿ ಸೇರುವ ಹೇಳಿಕೆ ಸ್ವತಃ ಬಿಜೆಪಿಗರಿಗೇ ಶಾಕ್‌ ಕೊಟ್ಟಿದೆ!
Vijaya Karnataka Web ganesh hukkeri clarification
ಹುಕ್ಕೇರಿ ತಮಾಷೆಯ ಬಾಂಬ್‌


ಸಚಿವ ಸ್ಥಾನ ತಪ್ಪಿದ್ದಕ್ಕೆ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ ಸೇರುತ್ತೇನೆ ಎಂದಿದ್ದ ಶಾಸಕ ರಮೇಶ ಜಾರಕಿಹೊಳಿ ಅವರು ಸದ್ಯ ಸುದ್ದಿ ಇಲ್ಲದೆ ಸುಮ್ಮನಿದ್ದಾರೆ. ಚಿಕ್ಕೋಡಿಯಲ್ಲಿ ಸುರಕ್ಷಿತ ಸ್ಥಿತಿಯಲ್ಲಿರುವ ಶಾಸಕ ಗಣೇಶ ಹುಕ್ಕೇರಿ ದೋಸ್ತಿ ಸರಕಾರದಲ್ಲಿ ಮುಖ್ಯ ಸಚೇತಕರಾಗಿದ್ದಾರೆ. ಅವರ ತಂದೆ, ಸಂಸದ ಪ್ರಕಾಶ ಹುಕ್ಕೇರಿ ಕಾಂಗ್ರೆಸ್‌ನ ಹೈ ಕಮಾಂಡ್‌ನಲ್ಲಿ ವಿಶೇಷ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಹೀಗಿರುವಾಗ ಗಣೇಶ ಅವರು ಜ.19ರಂದು ಬಿಜೆಪಿ ಸೇರುತ್ತೇನೆ ಎಂದು ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವುದು ಬಿಜೆಪಿಗರನ್ನೇ ದಂಗು ಬಡಿಸಿದೆ!


ಸುದ್ದಿ ಮಾಧ್ಯಮದವರೊಬ್ಬರು ಕರೆ ಮಾಡಿದ್ದರು. ತಮಾಷೆಗಾಗಿ ಜ.19ಕ್ಕೆ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರುತ್ತೇನೆ ಎಂದು ಹೇಳಿದ್ದೆ ಅಷ್ಟೆ. ಕಾಂಗ್ರೆಸ್‌ ಪಕ್ಷ ಉತ್ತಮ ಸ್ಥಾನ ಕೊಟ್ಟಿದೆ. ಪಕ್ಷ ತೊರೆಯುವುದಿಲ್ಲ.

- ಗಣೇಶ ಹುಕ್ಕೇರಿ, ಕಾಂಗ್ರೆಸ್‌ ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ