ಆ್ಯಪ್ನಗರ

ಗಂಗಾ ತಪಸ್ಸು

ಪವಿತ್ರ ಗಂಗಾ ನದಿಯ ಉಳಿವಿಗಾಗಿ ಸ್ವಾಮೀಜಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಪರಿಸರ ತಜ್ಞರು ಒಗ್ಗೂಡಿ ಮಂಗಳವಾರ 'ಗಂಗಾ ತಪಸ್ಸು' ಎಂಬ ಹೆಸರಿನಲ್ಲಿ ...

Vijaya Karnataka 3 Oct 2018, 5:00 am
ಬೆಂಗಳೂರು: ಪವಿತ್ರ ಗಂಗಾ ನದಿಯ ಉಳಿವಿಗಾಗಿ ಸ್ವಾಮೀಜಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಪರಿಸರ ತಜ್ಞರು ಒಗ್ಗೂಡಿ ಮಂಗಳವಾರ 'ಗಂಗಾ ತಪಸ್ಸು' ಎಂಬ ಹೆಸರಿನಲ್ಲಿ ಪ್ರಾರ್ಥನಾ ಸಭೆ ನಡೆಸುವ ಮೂಲಕ ಕೇಂದ್ರ ಸರಕಾರದ ಗಮನಸೆಳೆದರು.
Vijaya Karnataka Web 0210-2-2-112


ಗಂಗಾ ನದಿಗೆ 32 ಕಡೆಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವುದನ್ನು ವಿರೋಧಿಸಿ ಹರಿದ್ವಾರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾನಂದ ಸ್ವಾಮೀಜಿ ಅವರಿಗೆ ನೈತಿಕ ಬೆಂಬಲ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಗರದ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆ ಬಳಿ ವಿದ್ಯಾರ್ಥಿಗಳ ಜೊತೆ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಸೋಸಲೆ ವಾದಿರಾಜ ಮಠದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಗಂಗೆಯ ಪರವಾಗಿ ದನಿಯೆತ್ತಿ, 'ರಾಜಕಾರಣಿಗಳು ಗಂಗೆಯನ್ನು ಉಳಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದರು.

''ಗಂಗಾ ಮಾತೆ ಬರೀ ನೀರಲ್ಲ. ಅವಳು ಅಮೃತ ನೀಡುವವಳು. ಅವಳ ಕುಣಿತಕ್ಕೆ ಧಕ್ಕೆ ಬರಬಾರದು. ಈ ಮಕ್ಕಳ ಪ್ರಾರ್ಥನೆಯನ್ನು ಗಮನಿಸಿ ಭಗವಂತ ಪ್ರಕೃತಿಗೆ ಹಾನಿಯಾಗದಂತೆ ನೋಡಿಕೊಳ್ಳಲಿ'' ಎಂದು ವಿಶ್ವೇಶತೀರ್ಥ ಶ್ರೀಗಳು ಆಗ್ರಹಿಸಿದರು.

ವಿದ್ಯಾಶ್ರೀಶತೀರ್ಥ ಸ್ವಾಮೀಜಿ,''ಶುದ್ಧವಾದ ನೀರು ಇನ್ನು ಮುಂದೆ ದುರ್ಲಭ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ನದಿಯ ನಾಶಕ್ಕೆ ಸರಕಾರಗಳೇ ಮುಂದಾಗಿರುವುದು ವಿಷಾದನೀಯ. ಪ್ರಕೃತಿ ನಾಶವಾದರೆ ಮುಂದೇನಾಗಬಹುದು ಎಂಬುದಕ್ಕೆ ಕೇರಳವೇ ಸಾಕ್ಷಿ. ಗಂಗೆಯ ವಿಚಾರದಲ್ಲೂ ಸಾನಂದ ಸ್ವಾಮೀಜಿಯವರ ಬೇಡಿಕೆಗೆ ಸರಕಾರ ಬೆಲೆ ಕೊಡಬೇಕು,'' ಎಂದರು.

ಪರಿಸರ ತಜ್ಞ ಎ.ಎನ್‌. ಯಲ್ಲಪ್ಪರೆಡ್ಡಿ ಮಾತನಾಡಿ, ''ನದಿ, ಕೆರೆ-ಗುಂಟೆಗಳು ಭೂಮಿಯ ಅತ್ಯಮೂಲ್ಯ ಅಂಗಗಳು. ಮನುಷ್ಯನ ಕಿಡ್ನಿ ಹಾಳಾದರೆ ಮರು ಜೋಡಣೆ ಮಾಡಬಹುದು. ಆದರೆ, ಪ್ರಕೃತಿಯ ಕಿಡ್ನಿ ಹಾಳಾದರೆ ಮರು ಜೋಡಣೆ ಸಾಧ್ಯವಿಲ್ಲ. ಹಾಗೆಯೇ, ಯಾರಾದರೂ ಒಂದು ನದಿಯನ್ನು ಸೃಷ್ಟಿಸಲು ಸಾಧ್ಯವೇ'' ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ