ಆ್ಯಪ್ನಗರ

ಗುಲಾಂ ನಬಿ ಆಜಾದ್‌ ಎಂಟ್ರಿ: ಪ್ರಮುಖ ಅತೃಪ್ತರ ಶಮನ?

ಎಐಸಿಸಿ ವರಿಷ್ಠ ನಾಯಕರ ಪೈಕಿ ಟ್ರಬಲ್‌ ಶೂಟರ್‌ ಎಂದೇ ಖ್ಯಾತಿ ಪಡೆದಿದ್ದಾರೆ. ಗುಲಾಂ ನಬಿ ಆಜಾದ್‌, ಹಲವಾರು ರಾಜ್ಯಗಳಲ್ಲಿನ ಬಿಕ್ಕಟ್ಟು ಪರಿಹರಿಸಿದ್ದಾರೆ ಈಗ ರಾಜ್ಯಕ್ಕೂ ಕಾಲಿಟ್ಟಿದ್ದಾರೆ.

Vijaya Karnataka Web 10 Jul 2019, 12:27 pm
ಬೆಂಗಳೂರು: ರಾಜಕೀಯ ಬಿಕ್ಕಟ್ಟು ನಿವಾರಿಸಲು ಸಿದ್ಧಹಸ್ತ ಎನಿಸಿಕೊಂಡಿರುವ ಎಐಸಿಸಿ ವರಿಷ್ಠ ನಾಯಕ ಗುಲಾಂ ನಬಿ ಆಜಾದ್‌ ಈಗ ರಾಜ್ಯ ರಾಜಕೀಯ ಪರಿಸ್ಥಿತಿ ತಿಳಿಗೊಳಿಸಲು ಆಗಮಿಸಿದ್ದಾರೆ.
Vijaya Karnataka Web ಗುಲಾಂ ನಬಿ ಆಜಾದ್‌
ಗುಲಾಂ ನಬಿ ಆಜಾದ್‌


ಮಂಗಳವಾರವೇ ಬೆಂಗಳೂರಿಗೆ ಆಗಮಿಸಿದ ಗುಲಾಂ ನಬಿ ಆಜಾದ್‌ ಇಡೀ ರಾತ್ರಿ ನಿರಂತರ ಚರ್ಚೆ ನಡೆಸಿದರು.

ಕೆಕೆ ಗೆಸ್ಟ್ ಗೌಸ್‌ನಲ್ಲಿ ರಾತ್ರಿಯಿಡೀ ಕಾಂಗ್ರೆಸ್‌ ಉನ್ನತನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಈಶ್ವರ್‌ ಖಂಡ್ರೆ ಸೇರಿದಂತೆ ಹಲವಾರು ನಾಯಕರ ಜತೆ ಸಮಾಲೋಚನೆ ನಡೆಸಿದರು.

ಪ್ರಮುಖವಾಗಿ ಅತೃಪ್ತರ ಮನವೊಲಿಕೆಗೆ ಗುಲಾಂ ನಬಿ ಆಜಾದ್‌ ಒತ್ತು ನೀಡಿದ್ದಾರೆ.

ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಹಾಗೂ ರೋಷನ್‌ ಬೇಗ್ ಜತೆ ಮಾತುಕತೆ ನಡೆಸಿ ಮನವೊಲಿಸಬೇಕು ಎಂದು ಆಜಾದ್‌ ವಿವರಿಸಿದ್ದಾರೆ.

ಇದರು ಕೆಲವು ಕಾಂಗ್ರೆಸ್‌ ಮುಖಂಡರಿಗೆ ಇರಿಸು ಮುರಿಸು ತಂದಿದೆ. ಸಿದ್ದರಾಮಯ್ಯ ವಿರುದ್ಧವೇ ಈ ಇಬ್ಬರೂ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ರಾಮಲಿಂಗಾರೆಡ್ಡಿ ಜತೆ ತಡರಾತ್ರಿ ದೂರವಾಣಿ ಮೂಲಕವೂ ಆಜಾದ್‌ ಮಾತುಕತೆ ನಡೆಸಿದ್ದಾರೆ. ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ನಿಮಗೆ ಸೂಕ್ತ ಸ್ಥಾನ ಮಾನ ನೀಡಲಾಗುವುದು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ, ಪಕ್ಷ ಬಿಡಬೇಡಿ ಎಂದು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಮಲಿಂಗಾರೆಡ್ಡಿ ಕೂಡ ತಮ್ಮ ಅಹವಾಲುಗಳನ್ನು ಎಐಸಿಸಿ ವರಿಷ್ಠ ನಾಯಕರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನಾಯಕರು ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ.

ಆದರೆ ರಾಮಲಿಂಗಾರೆಡ್ಡಿ ವಾಪಸ್‌ ಪಡೆಯುತ್ತಾರಾ ಇಲ್ಲವಾ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ