ವಿಕಸುದ್ದಿಲೋಕ ಬೆಂಗಳೂರು
ಐಟಿ-ಬಿಟಿಯಂಥ ಮಹತ್ತರ ಉದ್ಯಮ ಹೊರತುಪಡಿಸಿ ಕೈಗಾರಿಕಾ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಆದ್ಯತೆ ನೀಡುವಂತೆ ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸಿಗೆ ಹಲವು ದಶಕಗಳ ಬಳಿಕ ಕಾನೂನಾತ್ಮಕ ಬೆಂಬಲ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕರ್ನಾಟಕ ಇಂಡಸ್ಟ್ರಿಯಲ್ ಎಂಪ್ಲಾಯ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್-1961ರ ಆದೇಶಕ್ಕೆ ತಿದ್ದುಪಡಿಗೆ ಸರಕಾರ ಮುಂದಾಗಿದೆ. ರಾಜ್ಯ ಸರಕಾರದಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ನೆರವಿನೊಂದಿಗೆ ಸ್ಥಾಪಿತವಾದ ಹಾಗೂ ತೆರಿಗೆ ವಿನಾಯಿತಿ ಪಡೆದ ಕೈಗಾರಿಕೆಗಳಲ್ಲಿ ಲಭ್ಯತೆ ಇದ್ದರೆ ಸಿ ಮತ್ತು ಡಿ ದರ್ಜೆಯ ಉದ್ಯೋಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ನಿಯಮ ರೂಪಿಸಲು ನಿರ್ಧರಿಸಲಾಗಿದೆ. ಮಹಿಷಿ ವರದಿಗೆ ಇದೇ ಮೊದಲ ಬಾರಿಗೆ ಕಾನೂನಾತ್ಮಕ ಬೆಂಬಲ ನೀಡುವ ಪ್ರಯತ್ನ ನಡೆದಿರುವುದನ್ನು ಬಿಟ್ಟರೆ ಉದ್ಯೋಗ ನೀಡುವಿಕೆಯನ್ನು ಕಡ್ಡಾಯ ಅಥವಾ ಐಚ್ಛಿಕ ಎಂದು ಘೋಷಿಸುವಲ್ಲಿ ರಾಜ್ಯ ಸರಕಾರ ಮೀನಾಮೇಷ ಎಣಿಸಿದೆ.
ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಈ ವಿಷಯ ತಿಳಿಸಿದ್ದು, ಅರ್ಹತೆ ಆಧರಿಸಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ನಿಯಮ ರೂಪಿಸಲಾಗುತ್ತಿದೆ. ಒಂದು ವೇಳೆ ಯಾವುದೇ ಸಂಸ್ಥೆ ಕನ್ನಡಿಗರಿಗೆ ಲಭ್ಯತೆ ಇದ್ದಾಗಲೂ ಉದ್ಯೋಗ ನೀಡಲು ಹಿಂದೇಟು ಹಾಕಿದರೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ದೂರು ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ವಿಶೇಷ ಚೇತನರಿಗೆ ಲಭ್ಯ ಉದ್ಯೋಗದಲ್ಲೇ ಶೇ.5ರಷ್ಟು ಮೀಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಐಟಿ-ಬಿಟಿ ಕ್ಷೇತ್ರವನ್ನು ಈ ನಿಯಮದಿಂದ ಹೊರಗಿಡಲಾಗಿದೆ ಎಂದು ಹೇಳಿದರು. ಆದರೆ ಖಾಸಗಿ ಕ್ಷೇತ್ರದಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳು ಎಷ್ಟು ಖಾಲಿ ಇವೆ, ಕಡ್ಡಾಯ ಎಂಬ ಪದ ಬಳಕೆ ಮಾಡದೇ ಇರುವುದರಿಂದ ಕೈಗಾರಿಕಾ ಸಂಸ್ಥೆಗಳಿಗೆ ಜಾರಿಕೊಳ್ಳಲು ಅವಕಾಶವಾಗುವುದಿಲ್ಲವೇ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡಲು ಅವರು ನಿರಾಕರಿಸಿದ್ದಾರೆ. ಹೀಗಾಗಿ ಹೊಸ ನಿಯಮದ ಮೂಲಕ ರಾಜ್ಯ ಸರಕಾರ ಕನ್ನಡಿಗರ ಕಣ್ಣೊರೆಸುವ ತಂತ್ರ ನಡೆಸಿದಂತಾಗಿದೆ.
ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು
ವಿಶೇಷ ಚೇತನ ನೀತಿಗೆ ತಿದ್ದುಪಡಿ
ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಶೇಷ ಚೇತನ ನೀತಿ ತಿದ್ದುಪಡಿಗೆ ಒಪ್ಪಿಗೆ. ಈ ಹಿಂದೆ ಕೇಂದ್ರ ಸರಕಾರ 7 ಬಗೆಯ ದೈಹಿಕ ನ್ಯೂನ್ಯತೆಯನ್ನು ಗುರುತಿಸಿತ್ತು. ಅದನ್ನು ಈಗ 21ಕ್ಕೆ ವಿಸ್ತರಿಸಲಾಗಿದೆ. ಇವರಿಗೆ ಸರಕಾರಿ ಸವಲತ್ತು ಪಡೆಯುವಾಗ ನೀಡುತ್ತಿದ್ದ ಮೀಸಲನ್ನು ಶೇ 2ರಿಂದ ಶೇ.5ಕ್ಕೆ ಹೆಚ್ಚಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಶೇ.5, ಸರಕಾರಿ ನೇಮಕದಲ್ಲಿ ಶೇ.4ರಷ್ಟು ಮೀಸಲು ಸೌಲಭ್ಯ ನೀಡಲು ನಿರ್ಧರಿಸಲಾಗಿದೆ.
ಸರಕಾರಿ ಇಲಾಖೆಗೂ ಇಂಟರ್ನ್ಶಿಫ್
ಆಡಳಿತ ವ್ಯವಸ್ಥೆ ಮತ್ತು ಸಮಾಜದ ನಡುವೆ ಸೃಷ್ಟಿಯಾಗಿರುವ ಅಂತರ ಕಡಿಮೆ ಮಾಡುವುದು ಹಾಗೂ ಸಮಾಜದಲ್ಲಿ ಸೃಷ್ಟಿಯಾಗಿರುವ ನಾವೀನ್ಯತೆಯ ಸ್ಪರ್ಶವನ್ನು ಸರಕಾರಿ ಇಲಾಖೆಗಳಿಗೂ ನೀಡುವ ಉದ್ದೇಶದಿಂದ ಉನ್ನತ ವ್ಯಾಸಂಗ ಪೂರೈಸಿದ ವಿದ್ಯಾರ್ಥಿಗಳಿಗೆ ಸರಕಾರದ 27 ವಲಯಗಳಲ್ಲಿ ಇಂಟರ್ನ್ಶಿಫ್ ನೀಡಲು ಸರಕಾರ ನಿರ್ಧರಿಸಿದೆ. 2 ತಿಂಗಳ ಅವಧಿಯ ಈ ತರಬೇತಿಗೆ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ಇಲಾಖೆಯಲ್ಲಿ ಮೂರು ಜನರಿಗೆ ಅವಕಾಶ ಕೊಡಲು ಸೂಚನೆ ನೀಡಲಾಗಿದೆಯಾದರೂ ಈ ಬಗ್ಗೆ ಮಿತಿ ಬೇಡ ಎಂಬ ಸಲಹೆ ವ್ಯಕ್ತವಾಗಿದೆ. ತರಬೇತಿ ವೇಳೆ ಯಾವುದೇ ಗೌರವಧನ ಇರುವುದಿಲ್ಲ, ಸರಕಾರಿ ನೇಮಕ ಸಂದರ್ಭದಲ್ಲೂ ಇದನ್ನು ಪರಿಗಣಿಸುವುದಿಲ್ಲ.
ಎಸ್ಐಟಿ ಅವಧಿ ವಿಸ್ತರಣೆ
ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ ) ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಿಸಲು ನಿರ್ಧಾರ.
ದಾಖಲೆ ನೀಡುವುದಕ್ಕೆ ಗಡುವು
ಸರಕಾರಿ ಸೇವೆಗೆ ಸೇರಿದವರು 3 ತಿಂಗಳೊಳಗಾಗಿ ತಮ್ಮ ವಯೋಮಿತಿ ದಾಖಲೆ ನೀಡುವುದಕ್ಕೆ ಗಡುವು ನೀಡಿದ್ದರೂ ಸರಿಯಾದ ಪಾಲನೆಯಾಗುತ್ತಿಲ್ಲ. ಜತೆಗೆ ಬದಲಿ ದಾಖಲೆ ನೀಡಿ ದಾರಿತಪ್ಪಿಸಲಾಗುತ್ತಿದೆ. ಹೀಗಾಗಿ ದಾಖಲೆ ಸಲ್ಲಿಕೆ ಹಾಗೂ ತಕರಾರು ಇತ್ಯರ್ಥಕ್ಕೆ ಒಂದು ತಿಂಗಳು ಅವಕಾಶ ನೀಡಲು ನಿರ್ಧರಿಸಲಾಗಿದೆ.
ಮೈಸೂರು ನಗರ ಸುತ್ತಲಿನ 92 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಕಲ್ಪಿಸಲು 340 ಕೋಟಿ ರೂ. ನಿಗದಿ.
ಪೊಲೀಸ್ ಇಲಾಖೆಗೆ ಮತ್ತಷ್ಟು ಸ್ತ್ರೀ ಬಲ
ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ.20ರಷ್ಟು ಮಹಿಳಾ ಮೀಸಲು ನೀಡಲು 2015ರಲ್ಲಿ ತೆಗೆದುಕೊಂಡ ನಿರ್ಧಾರ ಪರಿಷ್ಕರಣೆ. ಮುಂದಿನ 5 ವರ್ಷಗಳಲ್ಲಿ ಈ ಪ್ರಮಾಣವನ್ನು ಸೇ.25ಕ್ಕೆ ಹೆಚ್ಚಿಸಲು ನಿರ್ಧಾರ. ಪೊಲೀಸ್ ಕಾನ್ಸ್ಟೇಬಲ್, ಡಿಟೆಕ್ಟಿವ್ ಸಬ್ - ಇನ್ಸ್ಪೆಕ್ಟರ್, ವೈರ್ಲೆಸ್ ಸೇರಿದಂತೆ 7 ಕೇಡರ್ಗಳ ನೇರ ನೇಮಕ ಸಂದರ್ಭದಲ್ಲಿ ಈ ಮೀಸಲು ನೀತಿ ಪಾಲಿಸಲು ನಿರ್ಧಾರ.
ಉಚಿತ ಬೈಸಿಕಲ್ ವಿತರಣೆ
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುವ ಯೋಜನೆ ಮುಂದುವರಿಸಲು ನಿರ್ಧಾರ. ಇದಕ್ಕಾಗಿ 189 ಕೋಟಿ ರೂ. ನೀಡಲು ಸರಕಾರದ ಒಪ್ಪಿಗೆ. ಒಟ್ಟು 5.5 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭವಾಗಲಿದೆ. ಗುಣಮಟ್ಟ ವಿವಾದ ಹಿನ್ನೆಲೆಯಲ್ಲಿ ಈ ವರ್ಷ ಸೈಕಲ್ ವಿತರಣೆಗೆ ತಾತ್ಕಾಲಿಕ ತಡೆ ಹಿಡಿಯಲಾಗಿತ್ತು. ಆದರೆ ಪ್ರಾಥಮಿಕ ಶಿಕ್ಷಣ ಇಲಾಖೆ ಉಸ್ತುವಾರಿಯನ್ನು ಹೊತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಯೋಜನೆ ಮುಂದುವರಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ
ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರಕಾರ ಮೇಲ್ವರ್ಗದ ಬಡವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ನೀಡಲು ನಿರ್ಧರಿಸಿರುವ ವಿಚಾರ ಚರ್ಚೆಯಾಗುತ್ತಿರುವುದರ ಮಧ್ಯೆಯೇ ಮೈತ್ರಿ ಸರಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ನಿರ್ಧಾರ ತೆಗೆದುಕೊಂಡಿದೆ. ಇದಕ್ಕಾಗಿ ವಾರ್ಷಿಕ 25 ಕೋಟಿ ರೂ.ನ್ನು ಮೀಸಲಿರಿಸಲು ನಿರ್ಧರಿಸಿದೆ.
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಈ ಮಂಡಳಿ ಸೃಜನೆಯಾಗಲಿದೆ. ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣ, ವಿದ್ಯಾರ್ಥಿ ವೇತನ, ಸ್ವ ಉದ್ಯೋಗಕ್ಕೆ ಸಾಲ, ಸಾಮೂಹಿಕ ವಿವಾಹ, ಉಪನಯನಕ್ಕೆ ನೆರವು, ಅನಾಥರು, ವಿಧವೆಯರು, ವೃದ್ಧರಿಗೆ ಪಿಂಚಣಿ, ವೃದ್ಧಾಶ್ರಮ ಮತ್ತು ವೈದ್ಯ ವೆಚ್ಚವನ್ನು ನೀಡಲಾಗುತ್ತದೆ. ಇದರ ಜತೆಗೆ ಸಂಜೀವಿನಿ, ಆಚಾರ್ಯತ್ರಯ ಶಿಷ್ಯ ವೇತನ, ಸರ್.ಎಂ.ವಿಶ್ವೇಶ್ವರಯ್ಯ, ವಿಶ್ವಾಮಿತ್ರ ಕೈಗಾರಿಕಾ ಶಿಷ್ಯ ವೇತನ, ಆಡಳಿತತ್ಮಕವಾಗಿ ಚಾಣಕ್ಯ ಆಡಳಿತಾತ್ಮಕ ತರಬೇತಿ ನೀಡಲಾಗುತ್ತದೆ.
ಐಟಿ-ಬಿಟಿಯಂಥ ಮಹತ್ತರ ಉದ್ಯಮ ಹೊರತುಪಡಿಸಿ ಕೈಗಾರಿಕಾ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಆದ್ಯತೆ ನೀಡುವಂತೆ ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸಿಗೆ ಹಲವು ದಶಕಗಳ ಬಳಿಕ ಕಾನೂನಾತ್ಮಕ ಬೆಂಬಲ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕರ್ನಾಟಕ ಇಂಡಸ್ಟ್ರಿಯಲ್ ಎಂಪ್ಲಾಯ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್-1961ರ ಆದೇಶಕ್ಕೆ ತಿದ್ದುಪಡಿಗೆ ಸರಕಾರ ಮುಂದಾಗಿದೆ. ರಾಜ್ಯ ಸರಕಾರದಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ನೆರವಿನೊಂದಿಗೆ ಸ್ಥಾಪಿತವಾದ ಹಾಗೂ ತೆರಿಗೆ ವಿನಾಯಿತಿ ಪಡೆದ ಕೈಗಾರಿಕೆಗಳಲ್ಲಿ ಲಭ್ಯತೆ ಇದ್ದರೆ ಸಿ ಮತ್ತು ಡಿ ದರ್ಜೆಯ ಉದ್ಯೋಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ನಿಯಮ ರೂಪಿಸಲು ನಿರ್ಧರಿಸಲಾಗಿದೆ. ಮಹಿಷಿ ವರದಿಗೆ ಇದೇ ಮೊದಲ ಬಾರಿಗೆ ಕಾನೂನಾತ್ಮಕ ಬೆಂಬಲ ನೀಡುವ ಪ್ರಯತ್ನ ನಡೆದಿರುವುದನ್ನು ಬಿಟ್ಟರೆ ಉದ್ಯೋಗ ನೀಡುವಿಕೆಯನ್ನು ಕಡ್ಡಾಯ ಅಥವಾ ಐಚ್ಛಿಕ ಎಂದು ಘೋಷಿಸುವಲ್ಲಿ ರಾಜ್ಯ ಸರಕಾರ ಮೀನಾಮೇಷ ಎಣಿಸಿದೆ.
ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಈ ವಿಷಯ ತಿಳಿಸಿದ್ದು, ಅರ್ಹತೆ ಆಧರಿಸಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ನಿಯಮ ರೂಪಿಸಲಾಗುತ್ತಿದೆ. ಒಂದು ವೇಳೆ ಯಾವುದೇ ಸಂಸ್ಥೆ ಕನ್ನಡಿಗರಿಗೆ ಲಭ್ಯತೆ ಇದ್ದಾಗಲೂ ಉದ್ಯೋಗ ನೀಡಲು ಹಿಂದೇಟು ಹಾಕಿದರೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ದೂರು ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ವಿಶೇಷ ಚೇತನರಿಗೆ ಲಭ್ಯ ಉದ್ಯೋಗದಲ್ಲೇ ಶೇ.5ರಷ್ಟು ಮೀಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಐಟಿ-ಬಿಟಿ ಕ್ಷೇತ್ರವನ್ನು ಈ ನಿಯಮದಿಂದ ಹೊರಗಿಡಲಾಗಿದೆ ಎಂದು ಹೇಳಿದರು. ಆದರೆ ಖಾಸಗಿ ಕ್ಷೇತ್ರದಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳು ಎಷ್ಟು ಖಾಲಿ ಇವೆ, ಕಡ್ಡಾಯ ಎಂಬ ಪದ ಬಳಕೆ ಮಾಡದೇ ಇರುವುದರಿಂದ ಕೈಗಾರಿಕಾ ಸಂಸ್ಥೆಗಳಿಗೆ ಜಾರಿಕೊಳ್ಳಲು ಅವಕಾಶವಾಗುವುದಿಲ್ಲವೇ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡಲು ಅವರು ನಿರಾಕರಿಸಿದ್ದಾರೆ. ಹೀಗಾಗಿ ಹೊಸ ನಿಯಮದ ಮೂಲಕ ರಾಜ್ಯ ಸರಕಾರ ಕನ್ನಡಿಗರ ಕಣ್ಣೊರೆಸುವ ತಂತ್ರ ನಡೆಸಿದಂತಾಗಿದೆ.
ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು
ವಿಶೇಷ ಚೇತನ ನೀತಿಗೆ ತಿದ್ದುಪಡಿ
ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಶೇಷ ಚೇತನ ನೀತಿ ತಿದ್ದುಪಡಿಗೆ ಒಪ್ಪಿಗೆ. ಈ ಹಿಂದೆ ಕೇಂದ್ರ ಸರಕಾರ 7 ಬಗೆಯ ದೈಹಿಕ ನ್ಯೂನ್ಯತೆಯನ್ನು ಗುರುತಿಸಿತ್ತು. ಅದನ್ನು ಈಗ 21ಕ್ಕೆ ವಿಸ್ತರಿಸಲಾಗಿದೆ. ಇವರಿಗೆ ಸರಕಾರಿ ಸವಲತ್ತು ಪಡೆಯುವಾಗ ನೀಡುತ್ತಿದ್ದ ಮೀಸಲನ್ನು ಶೇ 2ರಿಂದ ಶೇ.5ಕ್ಕೆ ಹೆಚ್ಚಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಶೇ.5, ಸರಕಾರಿ ನೇಮಕದಲ್ಲಿ ಶೇ.4ರಷ್ಟು ಮೀಸಲು ಸೌಲಭ್ಯ ನೀಡಲು ನಿರ್ಧರಿಸಲಾಗಿದೆ.
ಸರಕಾರಿ ಇಲಾಖೆಗೂ ಇಂಟರ್ನ್ಶಿಫ್
ಆಡಳಿತ ವ್ಯವಸ್ಥೆ ಮತ್ತು ಸಮಾಜದ ನಡುವೆ ಸೃಷ್ಟಿಯಾಗಿರುವ ಅಂತರ ಕಡಿಮೆ ಮಾಡುವುದು ಹಾಗೂ ಸಮಾಜದಲ್ಲಿ ಸೃಷ್ಟಿಯಾಗಿರುವ ನಾವೀನ್ಯತೆಯ ಸ್ಪರ್ಶವನ್ನು ಸರಕಾರಿ ಇಲಾಖೆಗಳಿಗೂ ನೀಡುವ ಉದ್ದೇಶದಿಂದ ಉನ್ನತ ವ್ಯಾಸಂಗ ಪೂರೈಸಿದ ವಿದ್ಯಾರ್ಥಿಗಳಿಗೆ ಸರಕಾರದ 27 ವಲಯಗಳಲ್ಲಿ ಇಂಟರ್ನ್ಶಿಫ್ ನೀಡಲು ಸರಕಾರ ನಿರ್ಧರಿಸಿದೆ. 2 ತಿಂಗಳ ಅವಧಿಯ ಈ ತರಬೇತಿಗೆ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ಇಲಾಖೆಯಲ್ಲಿ ಮೂರು ಜನರಿಗೆ ಅವಕಾಶ ಕೊಡಲು ಸೂಚನೆ ನೀಡಲಾಗಿದೆಯಾದರೂ ಈ ಬಗ್ಗೆ ಮಿತಿ ಬೇಡ ಎಂಬ ಸಲಹೆ ವ್ಯಕ್ತವಾಗಿದೆ. ತರಬೇತಿ ವೇಳೆ ಯಾವುದೇ ಗೌರವಧನ ಇರುವುದಿಲ್ಲ, ಸರಕಾರಿ ನೇಮಕ ಸಂದರ್ಭದಲ್ಲೂ ಇದನ್ನು ಪರಿಗಣಿಸುವುದಿಲ್ಲ.
ಎಸ್ಐಟಿ ಅವಧಿ ವಿಸ್ತರಣೆ
ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ ) ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಿಸಲು ನಿರ್ಧಾರ.
ದಾಖಲೆ ನೀಡುವುದಕ್ಕೆ ಗಡುವು
ಸರಕಾರಿ ಸೇವೆಗೆ ಸೇರಿದವರು 3 ತಿಂಗಳೊಳಗಾಗಿ ತಮ್ಮ ವಯೋಮಿತಿ ದಾಖಲೆ ನೀಡುವುದಕ್ಕೆ ಗಡುವು ನೀಡಿದ್ದರೂ ಸರಿಯಾದ ಪಾಲನೆಯಾಗುತ್ತಿಲ್ಲ. ಜತೆಗೆ ಬದಲಿ ದಾಖಲೆ ನೀಡಿ ದಾರಿತಪ್ಪಿಸಲಾಗುತ್ತಿದೆ. ಹೀಗಾಗಿ ದಾಖಲೆ ಸಲ್ಲಿಕೆ ಹಾಗೂ ತಕರಾರು ಇತ್ಯರ್ಥಕ್ಕೆ ಒಂದು ತಿಂಗಳು ಅವಕಾಶ ನೀಡಲು ನಿರ್ಧರಿಸಲಾಗಿದೆ.
ಮೈಸೂರು ನಗರ ಸುತ್ತಲಿನ 92 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಕಲ್ಪಿಸಲು 340 ಕೋಟಿ ರೂ. ನಿಗದಿ.
ಪೊಲೀಸ್ ಇಲಾಖೆಗೆ ಮತ್ತಷ್ಟು ಸ್ತ್ರೀ ಬಲ
ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ.20ರಷ್ಟು ಮಹಿಳಾ ಮೀಸಲು ನೀಡಲು 2015ರಲ್ಲಿ ತೆಗೆದುಕೊಂಡ ನಿರ್ಧಾರ ಪರಿಷ್ಕರಣೆ. ಮುಂದಿನ 5 ವರ್ಷಗಳಲ್ಲಿ ಈ ಪ್ರಮಾಣವನ್ನು ಸೇ.25ಕ್ಕೆ ಹೆಚ್ಚಿಸಲು ನಿರ್ಧಾರ. ಪೊಲೀಸ್ ಕಾನ್ಸ್ಟೇಬಲ್, ಡಿಟೆಕ್ಟಿವ್ ಸಬ್ - ಇನ್ಸ್ಪೆಕ್ಟರ್, ವೈರ್ಲೆಸ್ ಸೇರಿದಂತೆ 7 ಕೇಡರ್ಗಳ ನೇರ ನೇಮಕ ಸಂದರ್ಭದಲ್ಲಿ ಈ ಮೀಸಲು ನೀತಿ ಪಾಲಿಸಲು ನಿರ್ಧಾರ.
ಉಚಿತ ಬೈಸಿಕಲ್ ವಿತರಣೆ
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುವ ಯೋಜನೆ ಮುಂದುವರಿಸಲು ನಿರ್ಧಾರ. ಇದಕ್ಕಾಗಿ 189 ಕೋಟಿ ರೂ. ನೀಡಲು ಸರಕಾರದ ಒಪ್ಪಿಗೆ. ಒಟ್ಟು 5.5 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭವಾಗಲಿದೆ. ಗುಣಮಟ್ಟ ವಿವಾದ ಹಿನ್ನೆಲೆಯಲ್ಲಿ ಈ ವರ್ಷ ಸೈಕಲ್ ವಿತರಣೆಗೆ ತಾತ್ಕಾಲಿಕ ತಡೆ ಹಿಡಿಯಲಾಗಿತ್ತು. ಆದರೆ ಪ್ರಾಥಮಿಕ ಶಿಕ್ಷಣ ಇಲಾಖೆ ಉಸ್ತುವಾರಿಯನ್ನು ಹೊತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಯೋಜನೆ ಮುಂದುವರಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ
ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರಕಾರ ಮೇಲ್ವರ್ಗದ ಬಡವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ನೀಡಲು ನಿರ್ಧರಿಸಿರುವ ವಿಚಾರ ಚರ್ಚೆಯಾಗುತ್ತಿರುವುದರ ಮಧ್ಯೆಯೇ ಮೈತ್ರಿ ಸರಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ನಿರ್ಧಾರ ತೆಗೆದುಕೊಂಡಿದೆ. ಇದಕ್ಕಾಗಿ ವಾರ್ಷಿಕ 25 ಕೋಟಿ ರೂ.ನ್ನು ಮೀಸಲಿರಿಸಲು ನಿರ್ಧರಿಸಿದೆ.
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಈ ಮಂಡಳಿ ಸೃಜನೆಯಾಗಲಿದೆ. ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣ, ವಿದ್ಯಾರ್ಥಿ ವೇತನ, ಸ್ವ ಉದ್ಯೋಗಕ್ಕೆ ಸಾಲ, ಸಾಮೂಹಿಕ ವಿವಾಹ, ಉಪನಯನಕ್ಕೆ ನೆರವು, ಅನಾಥರು, ವಿಧವೆಯರು, ವೃದ್ಧರಿಗೆ ಪಿಂಚಣಿ, ವೃದ್ಧಾಶ್ರಮ ಮತ್ತು ವೈದ್ಯ ವೆಚ್ಚವನ್ನು ನೀಡಲಾಗುತ್ತದೆ. ಇದರ ಜತೆಗೆ ಸಂಜೀವಿನಿ, ಆಚಾರ್ಯತ್ರಯ ಶಿಷ್ಯ ವೇತನ, ಸರ್.ಎಂ.ವಿಶ್ವೇಶ್ವರಯ್ಯ, ವಿಶ್ವಾಮಿತ್ರ ಕೈಗಾರಿಕಾ ಶಿಷ್ಯ ವೇತನ, ಆಡಳಿತತ್ಮಕವಾಗಿ ಚಾಣಕ್ಯ ಆಡಳಿತಾತ್ಮಕ ತರಬೇತಿ ನೀಡಲಾಗುತ್ತದೆ.