ಆ್ಯಪ್ನಗರ

ಕೋಲಾರಕ್ಕೆ ಚಿನ್ನದಂಥ ಸುದ್ದಿ: ಗಣಿಗೆ ಪುನಶ್ಚೇತನ?

ವಿಶ್ವವಿಖ್ಯಾತ ಕೋಲಾರ ಚಿನ್ನದ ಗಣಿಗೆ ಪುನಶ್ಚೇತನ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಮುಚ್ಚಿರುವ ಬೆಂಗಳೂರು ಹೊರವಲಯದಲ್ಲಿರುವ ಕೋಲಾರ ಗಣಿಯಲ್ಲಿ ಚಿನ್ನದ ಅದಿರು ಗಣಿಗಾರಿಕೆಗೆ ಸರಕಾರಿ ಸ್ವಾಮ್ಯದ ಮಿನರಲ್ ಎಕ್ಸ್‌ಪ್ಲೋರೇಷನ್ ಕಾರ್ಪ್ ಲಿ. ಮರುಚಾಲನೆ ನೀಡಲಿದೆ.

ಏಜೆನ್ಸೀಸ್ 27 Jan 2017, 5:31 pm
ಹೊಸದಿಲ್ಲಿ: ವಿಶ್ವವಿಖ್ಯಾತ ಕೋಲಾರ ಚಿನ್ನದ ಗಣಿಗೆ ಪುನಶ್ಚೇತನ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಮುಚ್ಚಿರುವ ಬೆಂಗಳೂರು ಹೊರವಲಯದಲ್ಲಿರುವ ಕೋಲಾರ ಗಣಿಯಲ್ಲಿ ಚಿನ್ನದ ಅದಿರು ಗಣಿಗಾರಿಕೆಗೆ ಸರಕಾರಿ ಸ್ವಾಮ್ಯದ ಮಿನರಲ್ ಎಕ್ಸ್‌ಪ್ಲೋರೇಷನ್ ಕಾರ್ಪ್ ಲಿ. ಮರುಚಾಲನೆ ನೀಡಲಿದೆ.
Vijaya Karnataka Web government mulls reviving colonial era gold mines with 2 billion reserves
ಕೋಲಾರಕ್ಕೆ ಚಿನ್ನದಂಥ ಸುದ್ದಿ: ಗಣಿಗೆ ಪುನಶ್ಚೇತನ?


ಕೋಲಾರ ಗಣಿಯಲ್ಲಿ ಅಂದಾಜು 2.1 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 14298 ಕೋಟಿ ರೂ.) ಮೌಲ್ಯದ ಚಿನ್ನದ ನಿಕ್ಷೇಪವಿರುವುದಾಗಿ ಅಂದಾಜಿಸಲಾಗಿದೆ. ಇದು ವಿಶ್ವದ ಎರಡನೇ ಅತಿ ದೊಡ್ಡ ಚಿನ್ನ ಆಮದು ರಾಷ್ಟ್ರವಾಗಿರುವ ಭಾರತಕ್ಕೆ ವ್ಯಾಪಾರದ ಕೊರತೆಯನ್ನು ಸರಿದೂಗಿಸಿಕೊಳ್ಳುವಲ್ಲಿ ನೆರವಾಗಲಿದೆ.

ಇದರಂತೆ ಸದ್ಯ ಗಣಿಯ ನಿಯಂತ್ರಣ ಹೊಂದಿರುವ ಮತ್ತು ಈಗ ನಿಷ್ಕ್ರಿಯವಾಗಿರುವ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ನ ಹಣಕಾಸು ಸ್ಥಿತಿಗತಿಯ ಮೌಲ್ಯಮಾಪನ ಮಾಡಲು ಎಸ್‌ಬಿಐ ಕ್ಯಾಪಿಟಲ್‌ಗೆ ಸಚಿವಾಲಯವು ಸೂಚಿಸಿದೆ. ನೌಕರರಿಗೆ ಮತ್ತು ಅಧಿಕಾರಿಗಳಿಗೆ ಈ ಕಂಪನಿ ಎಷ್ಟು ಬಾಕಿ ಹಣ ಪಾವತಿಸಬೇಕೆಂಬ ಲೆಕ್ಕಾಚಾರವೂ ಇದರಲ್ಲಿ ಸೇರಿದೆ.

ಚೀನಾ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಚಿನ್ನ ಆಮದು ರಾಷ್ಟ್ರವಾಗಿರುವ ಭಾರತ, ವಿದೇಶದಿಂದ ವರ್ಷಂಪ್ರತಿ 3000 ಕೋಟಿ ಡಾಲರ್ ಮೌಲ್ಯದ ಚಿನ್ನವನ್ನು ಖರೀದಿ ಮಾಡುತ್ತಿದೆ. ಭಾರತೀಯ ಸಂಸ್ಕೃತಿ ಜೊತೆ ಅಗಾಧ ನಂಟು ಹೊಂದಿರುವ ಏಷ್ಯಾದ ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿರುವ ಭಾರತದ ಕೋಟ್ಯಂತರ ಜನರು ವಿವಾಹ ಇನ್ನಿತರ ಶುಭ ಸಂದರ್ಭಗಳಲ್ಲಿ ಚಿನ್ನವನ್ನು ಅತಿ ಹೆಚ್ಚು ಆಶ್ರಯಿಸಿಕೊಂಡಿದ್ದಾರೆ.

ಉದ್ಯಾನ ನಗರಿ ಬೆಂಗಳೂರಿನಿಂದ 65 ಕಿ.ಮೀ. ಹೊರವಲಯದ ಕೋಲಾರದಲ್ಲಿ ಸ್ಥಿತಗೊಂಡಿರುವ ಚಿನ್ನ ಗಣಿಗಾರಿಕೆಯನ್ನು 1880ರಲ್ಲಿ ಬ್ರಿಟಿಷ್ ಎಂಜಿನಿಯರ್ ಸಂಸ್ಥೆ ಜಾನ್ ಟೇಲರ್ ಆ್ಯಂಡ್ ಸನ್ಸ್ ಆರಂಭಿಸಿತ್ತು. ಬಳಿಕ ನಷ್ಟದ ಹಿನ್ನಲೆಯಲ್ಲಿ 2001ರಲ್ಲಿ ಗಣಿಗಾರಿಕೆಯನ್ನು ನಿಲುಗಡೆಗೊಳಿಸಲಾಗಿತ್ತು.

ಇದೀಗ ಬ್ರಿಟಿಷ್ ವಸಾಹತು ಕಾಲದ ಕೋಲಾರ ಗಣಿ ಪುನರಾರಂಭದಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆ ಗರಿಗೆದರುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ