ಖಾಸಗಿ ಸಂಸ್ಥೆಯ ಕಾರಿಗೆ ಅಕ್ರಮವಾಗಿ ನಾಮಫಲಕ ಅಳವಡಿಕೆ
ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ಕಾರಿಗೆ ಅಕ್ರಮವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೆಸರಿನ ಫಲಕವನ್ನು ಅಳವಡಿಕೆ ಮಾಡಿರುವ ಬಗ್ಗೆ ಕೂಡಲೇ ತನಿಖೆ ನಡೆಸುವಂತೆ ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ದೂರು ನೀಡಿದ್ದಾರೆ.
Vijaya Karnataka Web 4 Jul 2018, 11:47 am
ಬೆಂಗಳೂರು: ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ಕಾರಿಗೆ ಅಕ್ರಮವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೆಸರಿನ ಫಲಕವನ್ನು ಅಳವಡಿಕೆ ಮಾಡಿರುವ ಬಗ್ಗೆ ಕೂಡಲೇ ತನಿಖೆ ನಡೆಸುವಂತೆ ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಂಗಳವಾರ ದೂರು ನೀಡಿದ್ದಾರೆ.
ಸಾರಿಗೆ ಇಲಾಖೆಯ ನಿಯಮಾವಳಿಗಳ ಅನ್ವಯ ‘ಜಿ’ ಶ್ರೇಣಿಯ ನೋಂದಾಯಿತ ವಾಹನಗಳು ಮಾತ್ರ ಹಿಂಬದಿಯಲ್ಲಿ ‘ಕರ್ನಾಟಕ ಸರಕಾರ’ ಎಂಬ ನಾಮಫಲಕಗಳನ್ನು ಹೊಂದಲು ಅವಕಾಶವಿರುತ್ತದೆ. ಅಂತೆಯೇ ಸರಕಾರದ ಶಾಸನಬದ್ಧ ಸಂಸ್ಥೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಆಪ್ತ ಕಾರ್ಯದರ್ಶಿ ಮಾತ್ರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎನ್ನುವ ಶೀರ್ಷಿಕೆಯ ಫಲಕಗಳನ್ನು ನಾಮನಿರ್ದೇಶನ ಸಹಿತವಾಗಿ ಸರಕಾರದಿಂದ ನೀಡಲಾಗಿರುವ ವಾಹನಗಳಿಗೆ ಮಾತ್ರ ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ.
ಹಾಗಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಲ್ಲದೇ ಅನ್ಯರು ಫಲಕಗಳನ್ನು ಹೊಂದುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಅಲ್ಲದೆ, ಈ ರೀತಿ ಅನ್ಯರು ತಮ್ಮ ಕಾರಿನ ಮುಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಫಲಕಗಳನ್ನು ಹಾಕಿದ್ದಲ್ಲಿ, ಪ್ರಾಧಿಕಾರದ ಘನತೆಗೂ ಧಕ್ಕೆಯುಂಟಾಗುತ್ತದೆ. ಆದ್ದರಿಂದ ಕೂಡಲೇ ಈ ಬಗ್ಗೆ ತನಿಖೆ ನಡೆಸಿ, ಎರಡು ದಿನಗಳಲ್ಲಿ ವರದಿ ನೀಡುವಂತೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೂಚಿಸಿದ್ದಾರೆ.
ನಗರದ ಕುಮಾರ ಕೃಪಾ ಅತಿಥಿ ಗೃಹದ ಬಳಿ ಮುಂದೆ ಹಳದಿ ಹಾಗೂ ಹಿಂದೆ ಬಳಿ ಬಣ್ಣದ ನಂಬರ್ ಪ್ಲೇಟ್ ಇರುವ ಕಾರಿನ ಚಿತ್ರಗಳನ್ನು ಸೋಮವಾರ ಶಾಸಕ ಎಸ್.ಸುರೇಶ್ಕುಮಾರ್ ಅವರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.
‘ಒಂದೇ ಕಾರು, ಒಂದೇ ನಂಬರ್. ವ್ಯತ್ಯಾಸವೆಂದರೆ ಹಿಂದೆ ಬ್ಲಾಕ್ ಆ್ಯಂಡ್ ವೈಟ್ ನಂಬರ್ಪ್ಲೇಟ್. ಮುಂದೆ ಹಳದಿ ಬಣ್ಣದ ನಂಬರ್ ಪ್ಲೇಟ್’ ಎಂದು ಒಕ್ಕಣೆ ಬರೆದಿದ್ದರು. ಈ ಚಿತ್ರಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಸಾರಿಗೆ ಇಲಾಖೆಯ ಆ್ಯಪ್ ಮೂಲಕ ಕಾರಿನ ವಿವರಗಳುಳ್ಳ ಸ್ಕ್ರೀನ್ಶಾಟ್ಗಳನ್ನು ನೆಟ್ಟಿಗರು ಹಂಚಿಕೊಂಡಿದ್ದರು.
‘ಕೆಎ02 ಎಂಕೆ 9394’ ಸಂಖ್ಯೆಯ ಈ ಮರ್ಸಿಡೀಸ್ ಬೆಂಜ್ ಕಾರು ‘ಗುಡ್ವಿಲ್ ಹೌಸಿಂಗ್ ಲಿಮಿಟೆಡ್’ಗೆ ಸೇರಿದ್ದಾಗಿದೆ. ಕಾರಿನ ಹಿಂದೆ ‘ಗವರ್ನಮೆಂಟ್ ಆಫ್ ಕರ್ನಾಟಕ’ ಎಂಬ ಉಲ್ಲೇಖವಿದ್ದರೆ, ಮುಂದೆ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಎಂಬ ಫಲಕವಿತ್ತು. ‘ಇದು ನ್ಯಾಯವೇ?’ ಎಂದು ಪ್ರಶ್ನಿಸಿದ್ದ ಶಾಸಕ ಸುರೇಶ್ಕುಮಾರ್, ಈ ಬಗ್ಗೆ ಸಾರಿಗೆ ಇಲಾಖೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಸಾರಿಗೆ ಆಯುಕ್ತ ನವೀನ್ ರಾಜ್ ಸಿಂಗ್ ಮತ್ತು ಪೋಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಸಾರಿಗೆ ಇಲಾಖೆಯ ನಿಯಮಾವಳಿಗಳ ಅನ್ವಯ ‘ಜಿ’ ಶ್ರೇಣಿಯ ನೋಂದಾಯಿತ ವಾಹನಗಳು ಮಾತ್ರ ಹಿಂಬದಿಯಲ್ಲಿ ‘ಕರ್ನಾಟಕ ಸರಕಾರ’ ಎಂಬ ನಾಮಫಲಕಗಳನ್ನು ಹೊಂದಲು ಅವಕಾಶವಿರುತ್ತದೆ. ಅಂತೆಯೇ ಸರಕಾರದ ಶಾಸನಬದ್ಧ ಸಂಸ್ಥೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಆಪ್ತ ಕಾರ್ಯದರ್ಶಿ ಮಾತ್ರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎನ್ನುವ ಶೀರ್ಷಿಕೆಯ ಫಲಕಗಳನ್ನು ನಾಮನಿರ್ದೇಶನ ಸಹಿತವಾಗಿ ಸರಕಾರದಿಂದ ನೀಡಲಾಗಿರುವ ವಾಹನಗಳಿಗೆ ಮಾತ್ರ ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ.
ಹಾಗಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಲ್ಲದೇ ಅನ್ಯರು ಫಲಕಗಳನ್ನು ಹೊಂದುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಅಲ್ಲದೆ, ಈ ರೀತಿ ಅನ್ಯರು ತಮ್ಮ ಕಾರಿನ ಮುಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಫಲಕಗಳನ್ನು ಹಾಕಿದ್ದಲ್ಲಿ, ಪ್ರಾಧಿಕಾರದ ಘನತೆಗೂ ಧಕ್ಕೆಯುಂಟಾಗುತ್ತದೆ. ಆದ್ದರಿಂದ ಕೂಡಲೇ ಈ ಬಗ್ಗೆ ತನಿಖೆ ನಡೆಸಿ, ಎರಡು ದಿನಗಳಲ್ಲಿ ವರದಿ ನೀಡುವಂತೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೂಚಿಸಿದ್ದಾರೆ.
ನಗರದ ಕುಮಾರ ಕೃಪಾ ಅತಿಥಿ ಗೃಹದ ಬಳಿ ಮುಂದೆ ಹಳದಿ ಹಾಗೂ ಹಿಂದೆ ಬಳಿ ಬಣ್ಣದ ನಂಬರ್ ಪ್ಲೇಟ್ ಇರುವ ಕಾರಿನ ಚಿತ್ರಗಳನ್ನು ಸೋಮವಾರ ಶಾಸಕ ಎಸ್.ಸುರೇಶ್ಕುಮಾರ್ ಅವರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.
‘ಒಂದೇ ಕಾರು, ಒಂದೇ ನಂಬರ್. ವ್ಯತ್ಯಾಸವೆಂದರೆ ಹಿಂದೆ ಬ್ಲಾಕ್ ಆ್ಯಂಡ್ ವೈಟ್ ನಂಬರ್ಪ್ಲೇಟ್. ಮುಂದೆ ಹಳದಿ ಬಣ್ಣದ ನಂಬರ್ ಪ್ಲೇಟ್’ ಎಂದು ಒಕ್ಕಣೆ ಬರೆದಿದ್ದರು. ಈ ಚಿತ್ರಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಸಾರಿಗೆ ಇಲಾಖೆಯ ಆ್ಯಪ್ ಮೂಲಕ ಕಾರಿನ ವಿವರಗಳುಳ್ಳ ಸ್ಕ್ರೀನ್ಶಾಟ್ಗಳನ್ನು ನೆಟ್ಟಿಗರು ಹಂಚಿಕೊಂಡಿದ್ದರು.
‘ಕೆಎ02 ಎಂಕೆ 9394’ ಸಂಖ್ಯೆಯ ಈ ಮರ್ಸಿಡೀಸ್ ಬೆಂಜ್ ಕಾರು ‘ಗುಡ್ವಿಲ್ ಹೌಸಿಂಗ್ ಲಿಮಿಟೆಡ್’ಗೆ ಸೇರಿದ್ದಾಗಿದೆ. ಕಾರಿನ ಹಿಂದೆ ‘ಗವರ್ನಮೆಂಟ್ ಆಫ್ ಕರ್ನಾಟಕ’ ಎಂಬ ಉಲ್ಲೇಖವಿದ್ದರೆ, ಮುಂದೆ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಎಂಬ ಫಲಕವಿತ್ತು. ‘ಇದು ನ್ಯಾಯವೇ?’ ಎಂದು ಪ್ರಶ್ನಿಸಿದ್ದ ಶಾಸಕ ಸುರೇಶ್ಕುಮಾರ್, ಈ ಬಗ್ಗೆ ಸಾರಿಗೆ ಇಲಾಖೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಸಾರಿಗೆ ಆಯುಕ್ತ ನವೀನ್ ರಾಜ್ ಸಿಂಗ್ ಮತ್ತು ಪೋಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ಅವರಿಗೆ ದೂರು ನೀಡಿದ್ದಾರೆ.