ಆ್ಯಪ್ನಗರ

ವಿದೇಶದಿಂದ ಮರಳುವ 10,823 ಮಂದಿಯ ತಪಾಸಣೆ, ಕ್ವಾರಂಟೈನ್‌ಗೆ ಸರಕಾರ ಸಿದ್ಧ

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದೇಶಗಳಿಂದ ತವರಿಗೆ ಮರಳುತ್ತಿರುವ 10,823 ಮಂದಿ ಅನಿವಾಸಿ ಕನ್ನಡಿಗರ ನಿರ್ವಹಣೆಗೆ ರಾಜ್ಯ ಸರಕಾರ ತಯಾರಿ ನಡೆಸಿದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Vijaya Karnataka Web 29 Apr 2020, 8:16 pm
ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದೇಶಗಳಿಂದ ತವರಿಗೆ ಮರಳುತ್ತಿರುವ 10,823 ಮಂದಿ ಅನಿವಾಸಿ ಕನ್ನಡಿಗರ ನಿರ್ವಹಣೆಗೆ ರಾಜ್ಯ ಸರಕಾರ ತಯಾರಿ ನಡೆಸಿದೆ.
Vijaya Karnataka Web quarantine in Singapore


''ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಕರೆಸಲು ಕೇಂದ್ರ ಸರಕಾರ ಕ್ರಿಯಾಯೋಜನೆ ರೂಪಿಸಿದೆ,'' ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ವಿದೇಶಗಳಲ್ಲಿರುವ 4,408 ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,784 ವಲಸಿಗರು ಹಾಗೂ ವೃತ್ತಿಪರರು ರಾಜ್ಯಕ್ಕೆ ಮರಳುತ್ತಿದ್ದಾರೆ. ಈ ಪೈಕಿ ಮೊದಲ ಹಂತದಲ್ಲಿ 6100 ಮಂದಿ ಶೀಘ್ರ ಆಗಮಿಸಲಿದ್ದಾರೆ. ಈ ಎಲ್ಲರನ್ಬೂ ಎ, ಬಿ, ಸಿ ಎಂದು ವರ್ಗೀಕರಿಸಿ ತಪಾಸಣೆ, ಚಿಕಿತ್ಸೆ ಮತ್ತು ಕ್ವಾರಂಟೈನ್‌ ಗೆ ಒಳಪಡಿಸುವ ಪ್ರಕ್ರಿಯೆಗೆ ತಯಾರಿ ಮಾಡಲಾಗುತ್ತಿದೆ,'' ಎಂದು ತಿಳಿಸಿದರು.

ಮಲೇಷ್ಯಾ ಕನ್ನಡಿಗರ ಸಂಕಷ್ಟ ಕೇಳುವರಿಲ್ಲ: ವಾಪಸ್‌ ಕರೆಸಿಕೊಳ್ಳಲು ಅಂಗಲಾಚಿದ ವಿದ್ಯಾರ್ಥಿ

ಲಾಕ್‌ಡೌನ್‌ನಿಂದಾಗಿ ಬೆಂಗಳೂರು ಮತ್ತು ದಕ್ಷಿಣ ಭಾರತದಲ್ಲಿಸಿಲುಕಿದ್ದ 3 ಸಾವಿರ ವಿದೇಶಿ ಪ್ರಯಾಣಿಕರು ತಾಯ್ನಾಡಿಗೆ ಮರಳಿದ್ದಾರೆ. ಮಾರ್ಚ್ ಅಂತ್ಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಜಗತ್ತಿನ 17 ಸ್ಥಳಗಳಿಗೆ 22 ವಿಮಾನಗಳು ಹಾರಾಟ ನಡೆಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ