ಆ್ಯಪ್ನಗರ

ವಸತಿ ಯೋಜನೆಗಳಲ್ಲಿಅಕ್ರಮ ತಡೆಗೆ ಎಲ್ಲರ ಆಧಾರ್‌, ರೇಷನ್‌ ಕಾರ್ಡ್‌ ಜೋಡಣೆ

ವಸತಿ ಯೋಜನೆಗಳಲ್ಲಿಅಕ್ರಮ ತಡೆಗೆ ರಾಜ್ಯ ಮಟ್ಟದ ಜಾಗೃತ ದಳ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ಜಾಗೃತ ದಳವೊಂದನ್ನು ರಚಿಸಲು ನಿರ್ಧರಿಸಲಾಗಿದೆ.

Vijaya Karnataka Web 15 Jan 2020, 3:29 pm
ಬೆಂಗಳೂರು: ಬೆಂಗಳೂರು ವಸತಿ ಯೋಜನೆಗಳಲ್ಲಿಅಕ್ರಮ ತಡೆಗೆ ರಾಜ್ಯ ಮಟ್ಟದ ಜಾಗೃತ ದಳ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ''ವಸತಿ ಯೋಜನೆಗಳ ಸೌಲಭ್ಯವನ್ನು ಅನರ್ಹರು ದುರ್ಬಳಕೆ ಮಾಡಿಕೊಳ್ಳು ವುದನ್ನು ತಪ್ಪಿಸುವುದು ಹಾಗೂ ಅಕ್ರಮ ತಡೆಯಲು ಬೆಸ್ಕಾಂ ವಿಜಿಲೆನ್ಸ್‌ ಮಾದರಿಯಲ್ಲಿ ಜಾಗೃತ ದಳ ರಚಿಸಲು ಉದ್ದೇಶಿಸಲಾಗಿದೆ'' ಎಂದು ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Vijaya Karnataka Web aadhaar


''ಬಡವರಿಗೆ ಸೂರು ಕಲ್ಪಿಸಲು ಸರಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡು ತ್ತಲೇ ಇದ್ದು, ಬೇಡಿಕೆ ಮಾತ್ರ ತಗ್ಗುತ್ತಿಲ್ಲ. ರಾಮ -ಕೃಷ್ಣನ ಲೆಕ್ಕದಲ್ಲಿ ಪಡೆದವರೇ ಮತ್ತೆ ಮತ್ತೆ ಮನೆ ಪಡೆಯುತ್ತಿರುವುದು ನಡೆದಿದೆ. ಇದಕ್ಕೆ ಕಡಿವಾಣ ಹಾಕಿ ಸರಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಲು ಕಟ್ಟು ನಿಟ್ಟಿನ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ರಾಜೀವ್‌ಗಾಂಧಿ ವಸತಿ ನಿಗಮದಲ್ಲಿ ಜಾಗೃತ ದಳವೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಜಿಲ್ಲಾಮಟ್ಟದಲ್ಲೂಜಾಗೃತ ದಳ ರಚನೆಗೆ ಚಿಂತನೆ ನಡೆದಿದೆ'' ಎಂದು ಹೇಳಿದರು.

ಆಧಾರ್‌ಗೆ ರೇಷನ್‌ ಕಾರ್ಡ್‌ ಜೋಡಣೆ:
''ವಸತಿ ಯೋಜನೆಗಳ ದುರ್ಬಳಕೆ ತಡೆಗೆ ಇನ್ನು ಮುಂದೆ ಫಲಾನುಭವಿ ಕುಟುಂಬದ ಎಲ್ಲ ಸದಸ್ಯರ ಆಧಾರ್‌ ಸಂಖ್ಯೆ ಜತೆಗೆ, ಪಡಿತರ ಚೀಟಿ ಜೋಡಣೆ ಕಡ್ಡಾಯಗೊಳಿ ಸಲು ತೀರ್ಮಾನಿಸಲಾಗಿದೆ. ಸದ್ಯ ಪ್ರಗತಿ ಯಲ್ಲಿರುವ ಹಾಗೂ ಮುಂದೆ ಆಯ್ಕೆ ಯಾಗುವ ಫಲಾನುಭವಿಗಳ ಕುಟುಂಬ ಗಳಿಗೆ ಈ ನಿರ್ಧಾರ ಅನ್ವಯವಾಗಲಿದೆ. ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆ ಹೆಸರಿನಲ್ಲಿ ಸೌಲಭ್ಯ ಪಡೆಯುವುದು ಇದರಿಂದ ತಪ್ಪಲಿದೆ'' ಎಂದು ತಿಳಿಸಿದರು.

''ವಿವಿಧ ವಸತಿ ಯೋಜನೆಯಡಿ ರಾಜ್ಯಾದ್ಯಂತ 4.37 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಜೂ. 30ರೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಉದ್ದೇಶಕ್ಕೆ 3,500 ಕೋಟಿ ರೂ. ವೆಚ್ಚವಾಗಲಿದೆ'' ಎಂದರು. ''ಮುಂದಿನ 3 ವರ್ಷಗಳ ಅವಧಿಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ 6 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಇದೆ. ರಾಜ್ಯದಲ್ಲಿಈವರೆಗೆ 40,690 ಮನೆಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, 27,489 ಮನೆಗಳ ಪರಿಶೀಲನಾ ವರದಿ ಸಲ್ಲಿಕೆ ಯಾಗಿದೆ. ಇದರಲ್ಲಿ26,193 ಅರ್ಹ ಹಾಗೂ 1296 ಅನರ್ಹ ಎಂದು ಗುರುತಿಸ ಲಾಗಿದೆ. ಜಿ.ಪಂ. ಸಿಇಒಗಳು ಅನುಮೋದಿ ಸಿದ 8154 ಫಲಾನುಭವಿಗಳಿಗೆ 40 ಕೋಟಿ ರೂ. ಸಹಾಯಧನವನ್ನು ವಸತಿ ಇಲಾಖೆ ಬಿಡುಗಡೆ ಮಾಡಿದೆ'' ಎಂದು ಹೇಳಿದರು.

ಅಕ್ರಮ ಬಹಿರಂಗಪಡಿಸುವೆ: ''ವಸತಿ ಯೋಜನೆ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮತ್ತಿತರರ ಆಪಾದನೆ ತಪ್ಪು. ಖಂಡ್ರೆ ಅವರು ಪ್ರತಿನಿಧಿಸುವ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆಗಳ ವಿವರಗಳನ್ನು ವಾರದೊಳಗೆ ನೀಡಲಾಗು ವುದು. ಏನೆಲ್ಲಾಅಕ್ರಮಧಿಗಳಾಗಿವೆ ಮತ್ತು ಯಾರಾರ‍ಯರು ಇದಕ್ಕೆ ಹೊಣೆ ಎಂಬುದನ್ನು ಬಹಿರಂಗಪಡಿಸುತ್ತೇನೆ'' ಎಂದು ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ