ರಾಜ್ಯಪಾಲರು ಸರ್ವಪಕ್ಷಗಳ ಸಭೆ ಕರೆದಿದ್ದನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ
ರಾಜ್ಯಪಾಲರು ಸರ್ವ ಪಕ್ಷಗಳ ಸಭೆ ಕರೆದಿರೋದು ಸಂವಿಧಾನ ಬಾಹಿರ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಚುನಾಯಿತ ಸರಕಾರ ಅಸ್ತಿತ್ವದಲ್ಲಿ ಇಲ್ಲ. ಇದಕ್ಕೆ ರಾಜ್ಯಪಾಲರು ಸಭೆ ನಡೆಸಿರೋದೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ.
ಹೈಲೈಟ್ಸ್:
- ರಾಜ್ಯಪಾಲರು ಸರ್ವ ಪಕ್ಷಗಳ ಸಭೆ ಕರೆದಿರೋದು ಸಂವಿಧಾನ ಬಾಹಿರ ಎಂದು ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ
- ರಾಜ್ಯದಲ್ಲಿ ಚುನಾಯಿತ ಸರಕಾರ ಅಸ್ತಿತ್ವದಲ್ಲಿ ಇಲ್ಲ. ಇದಕ್ಕೆ ರಾಜ್ಯಪಾಲರು ಸಭೆ ನಡೆಸಿರೋದೇ ಸಾಕ್ಷಿ ಎಂದು ಕಿಡಿಕಾರಿದ ವಿಪಕ್ಷ ನಾಯಕರು
- ರಾಜ್ಯಪಾಲರು ಸರಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದ ಮಾಜಿ ಸಿಎಂ
ಬೆಂಗಳೂರು: ರಾಜ್ಯಪಾಲರು ಸರ್ವಪಕ್ಷಗಳ ಸಭೆ ಕರೆದಿದ್ದನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,
ರಾಜ್ಯಪಾಲರು ಈ ಸಭೆ ಕರೆದಿರೋದು ಸಂವಿಧಾನ ಬಾಹಿರ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಸರಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಸಂವಿಧಾನದ ಪ್ರಕಾರ ಇದು ಸರಿಯಲ್ಲ. ಮುಖ್ಯಮಂತ್ರಿಗಳು ಸಭೆ ಕರೆದು ಮಾಹಿತಿ ಪಡೆಯಬಹುದು. ಆದರೆ ರಾಜ್ಯಪಾಲರು ಸಭೆ ಮಾಡುವ ಹಾಗೆ ಇಲ್ಲ. ಹಾಗೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡೋ ಹಾಗೆ ಇಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರಪತಿ ಆಡಳಿತ ಇದ್ದಾಗ ಮಾತ್ರ ಹೀಗೆ ಸಭೆ ಕರೆಯಬಹುದು. ಸರಕಾರ ಅಸ್ಥಿತ್ವದಲ್ಲಿ ಇಲ್ಲ. ಚುನಾಯಿತ ಸರಕಾರ ಅಸ್ತಿತ್ವದಲ್ಲಿ ಇಲ್ಲ. ಇದಕ್ಕೆ ರಾಜ್ಯಪಾಲರು ಸಭೆ ಮಾಡಿರೋದೇ ಸಾಕ್ಷಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಜ್ಞರ ಸಮಿತಿ ನವೆಂಬರ್ 30, 2020ರಲ್ಲಿ ವರದಿ ಕೊಟ್ಟಿದ್ದರು. ಅದರಲ್ಲಿ ಜನವರಿ ಮೊದಲ ವಾರದಲ್ಲಿ ಎರಡನೇ ಅಲೆ ಬರುತ್ತದೆ ಅಂತ ಹೇಳಿದ್ದರು. ಆದರೆ ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲಿಲ್ಲ. ಇವತ್ತು ಜನ ಪರದಾಡುತ್ತಿದ್ದಾರೆ. ಬೆಡ್, ಔಷಧಿ, ಆಂಬ್ಯುಲೆನ್ ಇಲ್ಲ, ಐಸಿಯು, ಆಕ್ಸಿಜನ್, ಸಿಬ್ಬಂದಿ, ರೆಮಿಡೆಸಿವಿಯರ್ ಇಲ್ಲ. ಅಂತ್ಯ ಸಂಸ್ಕಾರ ಮಾಡಲು ಟೋಕನ್ ಕೊಡ್ತಿದ್ದಾರೆ ಎಂದು ಹರಿಹಾಯ್ದರು.
ತಜ್ಞರು ಎಚ್ಚರಿಕೆ ಕೊಟ್ಟರೂ ಸರಕಾರ ಕ್ರಮವಹಿಸಿಲ್ಲ. ಸರಕಾರ ಸಂಪೂರ್ಣ ವಿಫಲವಾಗಿದೆ. ಸರಕಾರ ಸರಿಯಾಗಿ ಸಿದ್ದತೆ ಮಾಡಿಕೊಂಡಿಲ್ಲ. ಸಚಿವರ ಆಪ್ತ ಕಾರ್ಯದರ್ಶಿಗೆ ಆಕ್ಸಿಜನ್ ಸಿಗದೇ ಸತ್ತು ಹೋಗಿದ್ದಾರೆ. ಮಿನಿಸ್ಟರ್ ಸಹಾಯಕರಿಗೆ ಹೀಗೆ ಆದ್ರೆ ಹೇಗೆ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯಪಾಲರು ಈ ಸಭೆ ಕರೆದಿರೋದು ಸಂವಿಧಾನ ಬಾಹಿರ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ಆಡಳಿತ ಇದ್ದಾಗ ಮಾತ್ರ ಹೀಗೆ ಸಭೆ ಕರೆಯಬಹುದು. ಸರಕಾರ ಅಸ್ಥಿತ್ವದಲ್ಲಿ ಇಲ್ಲ. ಚುನಾಯಿತ ಸರಕಾರ ಅಸ್ತಿತ್ವದಲ್ಲಿ ಇಲ್ಲ. ಇದಕ್ಕೆ ರಾಜ್ಯಪಾಲರು ಸಭೆ ಮಾಡಿರೋದೇ ಸಾಕ್ಷಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಜ್ಞರ ಸಮಿತಿ ನವೆಂಬರ್ 30, 2020ರಲ್ಲಿ ವರದಿ ಕೊಟ್ಟಿದ್ದರು. ಅದರಲ್ಲಿ ಜನವರಿ ಮೊದಲ ವಾರದಲ್ಲಿ ಎರಡನೇ ಅಲೆ ಬರುತ್ತದೆ ಅಂತ ಹೇಳಿದ್ದರು. ಆದರೆ ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲಿಲ್ಲ. ಇವತ್ತು ಜನ ಪರದಾಡುತ್ತಿದ್ದಾರೆ. ಬೆಡ್, ಔಷಧಿ, ಆಂಬ್ಯುಲೆನ್ ಇಲ್ಲ, ಐಸಿಯು, ಆಕ್ಸಿಜನ್, ಸಿಬ್ಬಂದಿ, ರೆಮಿಡೆಸಿವಿಯರ್ ಇಲ್ಲ. ಅಂತ್ಯ ಸಂಸ್ಕಾರ ಮಾಡಲು ಟೋಕನ್ ಕೊಡ್ತಿದ್ದಾರೆ ಎಂದು ಹರಿಹಾಯ್ದರು.
ತಜ್ಞರು ಎಚ್ಚರಿಕೆ ಕೊಟ್ಟರೂ ಸರಕಾರ ಕ್ರಮವಹಿಸಿಲ್ಲ. ಸರಕಾರ ಸಂಪೂರ್ಣ ವಿಫಲವಾಗಿದೆ. ಸರಕಾರ ಸರಿಯಾಗಿ ಸಿದ್ದತೆ ಮಾಡಿಕೊಂಡಿಲ್ಲ. ಸಚಿವರ ಆಪ್ತ ಕಾರ್ಯದರ್ಶಿಗೆ ಆಕ್ಸಿಜನ್ ಸಿಗದೇ ಸತ್ತು ಹೋಗಿದ್ದಾರೆ. ಮಿನಿಸ್ಟರ್ ಸಹಾಯಕರಿಗೆ ಹೀಗೆ ಆದ್ರೆ ಹೇಗೆ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದರು.