ಆ್ಯಪ್ನಗರ

ಚುನಾವಣೆಗೆ ಸ್ಪರ್ಧಿಸದಂತೆ ಗೌರಿಶಂಕರ್‌ಗೆ ಬೆದರಿಕೆ ಪತ್ರ

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ, ಮಾಜಿ ಶಾಸಕ ಡಿಸಿ...

Vijaya Karnataka 7 Apr 2018, 5:00 am
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ ನಿವಾಸದ ಎದುರು ವಾಮಾಚಾರ ನಡೆಸಿದ್ದು ಪತ್ರ ಮೂಲಕ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
Vijaya Karnataka Web mata


ಬೆಂಗಳೂರಿನ ನಾಗರಬಾವಿಯಲ್ಲಿರುವ ಗೌರಿಶಂಕರ್‌ ನಿವಾಸದ ಎದುರು ಶುಕ್ರವಾರ ವಾಮಾಚಾರ ನಡೆಸಿರುವ ವಸ್ತುಗಳು ಪತ್ತೆಯಾಗಿವೆ. ಅಡಕೆ ತಟ್ಟೆಯಲ್ಲಿ ಅನ್ನ, ಕುಂಕುಮ ಹಾಕಿ ಮನೆ ಮುಂದೆ ತಂದಿಡಲಾಗಿದೆ. ಜೊತೆಗೆ ಬೆದರಿಕೆ ಪತ್ರ ಹಾಗೂ ಹರಿತವಾದ ಚಾಕುವೊಂದನ್ನು ಇಡಲಾಗಿದೆ.

ಪತ್ರದಲ್ಲೇನಿದೆ?: ಮೂರು ಪುಟದ ಬೆದರಿಕೆ ಪತ್ರದಲ್ಲಿ ''ನೀನು ನಾಮಪತ್ರ ಸಲ್ಲಿಸಬೇಡ. ಸಲ್ಲಿಸಿದರೆ ನಿನ್ನ, ಹೆಂಡತಿ, ಮಕ್ಕಳನ್ನು ಸುಮ್ಮನೆ ಬಿಡುವುದಿಲ್ಲ. ಭಿಕ್ಷೆ ಬೇಡಿಕೊಂಡು ಅಲೆಯುವಂತೆ ಮಾಡುತ್ತೇನೆ,'' ಎಂದು ಎಚ್ಚರಿಸಲಾಗಿದೆ.

ದೂರು ದಾಖಲು: ಘಟನೆ ನಡೆದ ವೇಳೆ ತುಮಕೂರಿನಲ್ಲಿದ್ದ ಡಿ.ಸಿ.ಗೌರಿಶಂಕರ್‌, ತಕ್ಷಣ ಈ ಬಗ್ಗೆ ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ