ಆ್ಯಪ್ನಗರ

ಗಾಂಜಾ ಮೇಲೆ ಜಿಪಿಎಸ್‌ ಕಣ್ಣು: ಗೃಹ ಇಲಾಖೆಯಿಂದ ವಿನೂತನ ಪ್ರಯೋಗ, ಮೊದಲ ಹಂತದಲ್ಲಿ ಭೂಮಿ ಮ್ಯಾಪಿಂಗ್‌!

ಅಕ್ರಮವಾಗಿ ಗಾಂಜಾ ಬೆಳೆಯುವ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಲು ಗೃಹ ಇಲಾಖೆ ವಿನೂತನ ಪ್ರಯೋಗ ನಡೆಸುತ್ತಿದೆ. ಮೊದಲ ಹಂತದಲ್ಲಿ ಭೂಮಿ ಮ್ಯಾಪಿಂಗ್‌ ಮಾಡುವ ಕಾರ್ಯ ಕೈಗೆತ್ತಿಕೊಂಡಿದೆ.

Vijaya Karnataka Web 20 Sep 2020, 11:53 am
ಆರ್‌.ಶ್ರೀಧರ್‌ ರಾಮನಗರ
Vijaya Karnataka Web ಸಾಂದರ್ಭಿಕ ಚಿತ್ರ

ರಾಮನಗರ: ರಾಜ್ಯಾದ್ಯಂತ ಹೆಚ್ಚಾಗಿರುವ ಡ್ರಗ್ಸ್‌ ಮಾಫಿಯಾ ನಿಯಂತ್ರಣಕ್ಕೆ ರಾಜ್ಯ ಗೃಹ ಇಲಾಖೆ ಜಿಪಿಎಸ್‌ ಮೊರೆ ಹೋಗಿದ್ದು, ವಿದೇಶಗಳ ಮಾದರಿಯಲ್ಲಿಯೇ ಅಕ್ರಮವಾಗಿ ಗಾಂಜಾ ಬೆಳೆಯುವ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ. ಈ ಬಗ್ಗೆ ಆಯಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಶುಕ್ರವಾರ ಸೂಚನೆ ನೀಡಲಾಗಿದೆ.

ಒಂದು ವರ್ಷದ ಅವಧಿಯಲ್ಲಿ ರಾಜ್ಯದ ಯಾವ ಭಾಗಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆ ಎಂಬ ಬಗ್ಗೆ ಪೊಲೀಸ್‌ ಠಾಣೆಗಳಲ್ಲಿ ಮಾಹಿತಿಗಳಿವೆ. ಹಿಂದಿನ ದಾಳಿಗಳನ್ನು ಆಧರಿಸಿ ಭೂಮಿಯನ್ನು ಪೊಲೀಸ್‌ ಅಧಿಕಾರಿಗಳು ಫೈನಲ್‌ ಮಾಡಬೇಕು. ಆ ಎಲ್ಲ ಪ್ರದೇಶವನ್ನು ಮ್ಯಾಪಿಂಗ್‌ ಮಾಡಿ ಸರಕಾರಕ್ಕೆ ವರದಿ ನೀಡುವುದು ಹಾಗೂ ಸಂಪೂರ್ಣ ಡೇಟಾವನ್ನು ಸಂಗ್ರಹಿಸಿಡುವಂತೆ ನೋಡಿಕೊಳ್ಳುವುದು ಪೊಲೀಸ್‌ ವರಿಷ್ಠಾಧಿಕಾರಿಗಳ ಕೆಲಸ. ಮುಂದಿನ ದಿನಗಳಲ್ಲಿ ಇದನ್ನು ಅಪ್ಲೋಡ್‌ ಮಾಡುವುದು ಅಥವಾ ಜಿಪಿಎಸ್‌ ಅಳವಡಿಸುವ ಸಂಬಂಧ ಸರಕಾರದ ಸೂಚನೆ ಬಳಿಕ ಕಾರ್ಯ ಪ್ರವೃತ್ತರಾಗಬೇಕಿದೆ. ಸದ್ಯಕ್ಕೆ ಮ್ಯಾಪಿಂಗ್‌ ಕಾರ್ಯಗಳು ಚುರುಕುಗೊಂಡಿವೆ. ಅಮೆರಿಕಾ ಸೇರಿ ವಿದೇಶಗಳಲ್ಲಿ ಇದೇ ಮಾದರಿಯಲ್ಲಿ ಗಾಂಜಾ ಬೆಳೆಯುವ ಪ್ರದೇಶಗಳ ಮೇಲೆ ಜಿಪಿಎಸ್‌ ಮೂಲಕ ನಿಗಾ ವಹಿಸಲಾಗುತ್ತದೆ.

ಮತ್ತಿಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ ಸಿಸಿಬಿ: ಗಾಂಜಾ ಸೇರಿದಂತೆ ಹಲವು ಮಾದಕ ವಸ್ತುಗಳು ವಶಕ್ಕೆ!

ಮ್ಯಾಪಿಂಗ್‌ ಏಕೆ?
ಒಂದು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುವ ಪ್ರದೇಶದ ಮೇಲೆ ದಾಳಿ ನಡೆಸಿದ ಬಳಿಕ ಆ ಪ್ರದೇಶದಲ್ಲಿ ಮತ್ತೆ ಗಾಂಜಾ ಬೆಳೆಯುವ ಸಾಧ್ಯತೆಗಳಿವೆ. ಠಾಣೆಯ ಇನ್ಸ್‌ಪೆಕ್ಟರ್‌, ಸಬ್‌ ಇನ್ಸೆಪೆಕ್ಟರ್‌ ವರ್ಗಾವಣೆಗೊಂಡ ಬಳಿಕ ಹೊಸದಾಗಿ ಬರುವ ಅಧಿಕಾರಿಗಳಿಗೆ ಗಾಂಜಾ ಎಲ್ಲಿ ಬೆಳೆಯುತ್ತಾರೆ, ಈ ಹಿಂದೆ ಎಲ್ಲಿ ಪತ್ತೆಯಾಗಿತ್ತು ಎಂಬುದರ ಮಾಹಿತಿ ಇರುವುದಿಲ್ಲ. ಹೀಗಾಗಿ ಮ್ಯಾಪಿಂಗ್‌ ಮಾಡಲಾಗುತ್ತದೆ.
ಗಾಂಜಾ ಬೆಳೆಗಾರರಿಗೆ ವರವಾಯ್ತು ಚಾಮರಾಜನಗರದ ಕಾಡು: ಖದೀಮರಿಗೆ ಬಿಸಿ ಮುಟ್ಟಿಸಿದ ಖಾಕಿ ಕಾರ್ಯಾಚರಣೆ

ವರ್ಷದಿಂದ ಗಾಂಜಾ ಬೆಳೆ ಪತ್ತೆಯಾಗಿರುವ ಭೂಮಿಯ ಸಂಪೂರ್ಣ ಮಾಹಿತಿಯನ್ನು ಮ್ಯಾಪಿಂಗ್‌ ನಡೆಸುವಂತೆ ನಮಗೆ ಸೂಚನೆ ಬಂದಿದೆ. ಮುಂದೆ ಪತ್ತೆಯಾಗುವ ಭೂ ಪ್ರದೇಶವನ್ನೂ ಮ್ಯಾಪಿಂಗ್‌ ನಡೆಸಬೇಕಿದೆ.
ಎಸ್‌.ಗಿರೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ರಾಮನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ