ಆ್ಯಪ್ನಗರ

ಕುಮಾರಪರ್ವಕ್ಕೆ ಸಾಕ್ಷಿಯಾಗುವವರು ಇವರು

ಜೆಡಿಎಸ್‌-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶದ ವಿವಿಧ ರಾಜ್ಯಗಳ ನಾಯಕರು ಆಗಮಿಸುತ್ತಿದ್ದಾರೆ.

Vijaya Karnataka Web 22 May 2018, 10:06 pm
ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶದ ವಿವಿಧ ರಾಜ್ಯಗಳ ನಾಯಕರು ಬುಧವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
Vijaya Karnataka Web kumaraswami2.


ಯಾರೆಲ್ಲ ಅತಿಥಿಗಳು?: ಕಾಂಗ್ರೆಸ್‌‌ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ , ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ದೆಹಲಿ ಸಿಎಂ ಅರವಿಂದ್‌‌ ಕೇಜ್ರಿವಾಲ್‌, ತೆಲಂಗಾಣ ಸಿಎಂ ಕೆಸಿಆರ್‌, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಉತ್ತರಪ್ರದೇಶ ಮಾಜಿ ಸಿಎಂ ಮಾಯಾವತಿ, ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ, ಸಿಪಿಎಂನ ಸೀತಾರಾಮ್‌ ಯಚೂರಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಮಾಜಿ ಸಚಿವ ತೇಜಸ್ವಿ ಯಾದವ್‌ ಭಾಗಿಯಾಗಲಿದ್ದಾರೆ.
ಜತೆಗೆ ರಾಜ್ಯದ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸಂಚಾರ ನಿರ್ಬಂಧ:
ಎಚ್.ಡಿ. ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಬದಲಾವಣೆ ಮಾಡಿದ್ದಾರೆ.

ವಿಧಾನಸೌಧ ಕಡೆ ಸಂಚಾರ ನಿಷೇಧ: ಶಿವಾಜಿನಗರದಿಂದ ವಿಧಾನಸೌಧ ಕಡೆ ಬರುವ ವಾಹನಗಳು ಬಾಳೆಕುಂದ್ರಿ ಸರ್ಕಲ್ನಿಂದ ತಿಮ್ಮಯ್ಯ ರಸ್ತೆ ಮೂಲಕ ಬಂದು ಚಾಲುಕ್ಯ ಸರ್ಕಲ್ಗೆ ಸಂಪರ್ಕ ಪಡೆಯಬೇಕು.

ಮೈಸೂರು ರಸ್ತೆ ಮೂಲಕ ಬರುವವರು ಟೌನ್ಹಾಲ್, ಎನ್.ಆರ್.ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಹಡ್ಸನ್ ಸರ್ಕಲ್, ಕ್ವೀನ್ಸ್ ಸರ್ಕಲ್, ಅನಿಲ್‌ ಕುಂಬ್ಳೆ ಸರ್ಕಲ್ನಿಂದ ಆರ್ಬಿಐ ಜಂಕ್ಷನ್ಗೆ ಸಂಪರ್ಕಿಸಿ, ಕೃಷ್ಣ ವಿಹಾರಕ್ಕೆ ತೆರಳಬೇಕು.

ತುಮಕೂರು ಕಡೆಯಿಂದ ಬರುವವರು ಗೊರಗುಂಟೆಪಾಳ್ಯ ಬಳಿ ಎಡ ತಿರುವು‌ ಪಡೆದು ಬಿಇಎಲ್ ಸರ್ಕಲ್, ಹೆಬ್ಬಾಳ‌, ಮೇಕ್ರಿ ಸರ್ಕಲ್ ಮೂಲಕ ಪ್ಯಾಲೇಸ್ ಗ್ರೌಂಡ್ಗೆ ಸಂಪರ್ಕ ಪಡೆಯಬೇಕು.

ಕೋಲಾರ ಕಡೆಯಿಂದ ಬರುವವರು ರಾಮಮೂರ್ತಿನಗರ, ರಾಮಮೂರ್ತಿನಗರ ಮೂಲಕ ರಿಂಗ್ ರೋಡ್, ಹೆಬ್ಬಾಳ ಮಾರ್ಗವಾಗಿ ಅರಮನೆ ಮೈದಾನ ರಸ್ತೆಗೆ ಸೇರಬೇಕು.

ಪಾರ್ಕಿಂಗ್ ವ್ಯವಸ್ಥೆ:
ಸಮಾರಂಭಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸೇಂಟ್ ಜೋಸೆಫ್ ಶಾಲೆ, ಕಂಠೀರವ ಸ್ಟೇಡಿಯಂ, ಯುಬಿ ಸಿಟಿ, ಸೆಂಟ್ರಲ್ ಕಾಲೇಜು ಮೈದಾನ, ಫ್ರೀಡಂಪಾರ್ಕ್, ಸರ್ಕಾರಿ ಕಲಾ ಕಾಲೇಜು, ಚೌಡಯ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಹಾಲಿ, ಮಾಜಿ ಶಾಸಕರು, ಎಂಎಲ್ಸಿಗಳಿಗೆ ದೇವರಾಜ ಅರಸು ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿ ಪಾರ್ಕಿಂಗ್ ನಿಷೇಧ: ಅಂಬೇಡ್ಕರ್ ರಸ್ತೆ, ರಾಜಭವನ‌ ರಸ್ತೆ, ಎಲ್ಎಚ್ ರಸ್ತೆ, ಚಾಲುಕ್ಯ ಸರ್ಕಲ್ನಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ