ಆ್ಯಪ್ನಗರ

ನಿತ್ಯಾನಂದನನ್ನು ಹುಡುಕಿಕೊಂಡು ಬಿಡದಿಗೇ ಬಂದರು ಗುಜರಾತ್‌ ಪೊಲೀಸರು!

ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನಲಾದ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಸ್ವಾಮಿಯನ್ನು ಹುಡುಕಿಕೊಂಡು ಗುಜರಾತ್‌ ಪೊಲೀಸರೇ ಆಗಮಿಸಿದ್ದಾರೆ. ಸರ್ಚ್‌ ವಾರೆಂಟ್‌ ಹಿನ್ನೆಲೆ ಆಶ್ರಮದಲ್ಲಿ ನಿತ್ಯಾನಂದನಿಗಾಗಿ ಹುಡುಕಾಟ ನಡೆಸಿದ್ದಾರೆ.

Vijaya Karnataka Web 30 Nov 2019, 2:38 pm
ಬೆಂಗಳೂರು: ಸ್ವಾಮಿ ನಿತ್ಯಾನಂದನನ್ನು ಹುಡುಕಿಕೊಂಡು ಗುಜರಾತ್‌ ಪೊಲೀಸರು ಬಿಡದಿಗೆ ಆಗಮಿಸಿದ್ದಾರೆ. ಕಳೆದ ವಾರವು ಸಿಐಡಿ ಪೊಲೀಸರು ಬಿಡದಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಸರ್ಚ್‌ ವಾರೆಂಟ್‌ ಹಿನ್ನೆಲೆ ನಿತ್ಯಾನಂದ ಆಶ್ರಮಕ್ಕೆ ಗುಜರಾತ್‌ ಪೊಲೀಸರು ಆಗಮಿಸಿದ್ದಾರೆ. ಆದರೆ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದು, ಅಮೆರಿಕಾ ಸಮೀಪದ ಬಿಲೀಜ್‌ ದ್ವೀಪದಲ್ಲಿದ್ದಾನೆ ಎನ್ನಲಾಗಿದೆ.
Vijaya Karnataka Web Nithyananda Swami


ಜನಾರ್ಧನ ಶರ್ಮ ಎಂಬುವವರು ತಮ್ಮ ಮಗಳ ವಿಚಾರವಾಗಿ ಹೆಬಿಯಸ್ ಕಾರ್ಪಸ್ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಿತ್ಯಾನಂದನ ಹುಡುಕಿಕೊಂಡು ಗುಜರಾತ್ ಪೊಲೀಸರು ಆಗಮಿಸಿದ್ದಾರೆ. ಬಿಲೀಜ್ನಲ್ಲಿ ನಿತ್ಯಾನಂದ ಇರುವ ಬಗ್ಗೆ ಪೊಲೀಸ್ ಉನ್ನತ ಮೂಲಗಳ ಮಾಹಿತಿ ನೀಡಿವೆ.

ಸದಾ ವಿವಾದಗಳ ಮೂಲಕ ಸುದ್ದಿ ಮಾಡುತ್ತಿರುವ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಆಶ್ರಮಕ್ಕೆ ಬಾರದೆ ವರ್ಷ ಕಳೆದಿದೆ. ಕಳೆದ 6 ತಿಂಗಳಿನಿಂದ ನ್ಯಾಯಾಲಯದ ವಿಚಾರಣೆಗೂ ಹಾಜರಾಗಿಲ್ಲ. ಸ್ವಾಮಿಗಳು ಎಲ್ಲಿ ಎಂದು ಕೇಳಿದರೆ ಆಶ್ರಮದಲ್ಲೇ ಉಳಿದುಕೊಂಡಿರುವ ಒಂದಷ್ಟು ಭಕ್ತರು ಕೊಡುವ ಉತ್ತರ 'ದೀರ್ಘ ತಪಸ್ಸು ಮಾಡಲು ನಿತ್ಯಾನಂದ ಸ್ವಾಮಿಗಳು ತೆರಳಿದ್ದಾರೆ'! ಎಂದು. ಮುಂದೆ ಓದಿ. ನಿತ್ಯಾನಂದ ಬಿಡದಿಗೆ ಬಾರದೆ ವರ್ಷವಾಗಿದೆ; ಅದೆಲ್ಲಿ 'ದೀರ್ಘ ತಪಸ್ಸು' ಮಾಡುತ್ತಿದ್ದಾರೆ? ಅಸಲಿ ಕತೆ ಬೇರೆಯಿದೆ!

ನಿತ್ಯಾನಂದ ಬಿಡದಿ ಬಿಡಿ, ದೇಶವನ್ನೇ ತೊರೆದು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಗುಜರಾತ್‌ ಪೊಲೀಸರು ಹೇಳಿದ್ದಾರೆ. ತಮ್ಮ ಯೋಗಿನಿ ಸರ್ವಗ್ಯಪೀಠಮ್‌ ಆಶ್ರಮದಲ್ಲಿನ ವಿದ್ಯಾರ್ಥಿಗಳ ಅಪಹರಣ ಹಾಗೂ ಅವರನ್ನು ಆಶ್ರಮಕ್ಕೆ ದೇಣಿಗೆ ಸಂಗ್ರಹಿಸಲು ಬಳಸಿಕೊಂಡ ಆರೋಪದ ಮೇಲೆ ನಿತ್ಯಾನಂದ ವಿರುದ್ಧ ಗುಜರಾತ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ತನ್ನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗುತ್ತಿದ್ದಂತೆ ನಿತ್ಯಾನಂದ ಸದ್ದಿಲ್ಲದೇ ವಿದೇಶಕ್ಕೆ ಹಾರಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ವಿ. ಆಸಾರಿ ತಿಳಿಸಿದ್ದಾರೆ.

ಸೂರ್ಯನಿಗೆ ತಡವಾಗಿ ಬರಲು ನಾನೇ ಹೇಳಿದ್ದು: ನಿತ್ಯಾನಂದ ಸ್ವಾಮೀಜಿ ಹೇಳಿಕೆ ವೈರಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ