ಆ್ಯಪ್ನಗರ

ಗನ್‌ ಮ್ಯಾನ್‌ ಬೇಡಿಕೆಯಿಟ್ಟ ಜಿಪಂ ಅಧ್ಯಕ್ಷರಿಗೆ ಬಿಸಿ ಮುಟ್ಟಿಸಿದ ಸಿಎಂ ಯಡಿಯೂರಪ್ಪ

ಗನ್ ಮ್ಯಾನ್ ನೀಡುವಂತೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಿಸಿ ಮುಟ್ಟಿಸಿದ್ದಾರೆ.

Vijaya Karnataka 24 Sep 2019, 6:41 am
ಬೆಂಗಳೂರು: ಗನ್‌ ಮ್ಯಾನ್‌ ಒದಗಿಸುವಂತೆ ಬೇಡಿಕೆಯಿಟ್ಟಿದ್ದಲ್ಲದೆ ಹೆಚ್ಚಿನ ಅನುದಾನಕ್ಕೆ ಒತ್ತಡ ತಂದ ರಾಜ್ಯದ ಜಿಲ್ಲಾಪಂಚಾಯಿತಿ ಅಧ್ಯಕ್ಷರಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಬಿಸಿ ಮುಟ್ಟಿಸಿದ್ದಾರೆ.
Vijaya Karnataka Web b s y


ಗೃಹ ಕಚೇರಿ ಕೃಷ್ಣಾದಲ್ಲಿಸಿಎಂ ಅವರನ್ನು ಜಿಲ್ಲಾಪಂಚಾಯಿತಿ ಅಧ್ಯಕ್ಷರು ಭೇಟಿಯಾಗಿ ಇತ್ತೀಚೆಗೆ ಜಿಲ್ಲಾಪಂಚಾಯಿತಿಗಳಿಗೆ ಬರುವ ಅನುದಾನದಲ್ಲಿಕಡಿತವಾಗುತ್ತಿದೆ ಎಂದು ಗಮನ ಸೆಳೆದರು. ಹೆಚ್ಚುವರಿ ಅನುದಾನ ನೀಡಲು ಸರಕಾರ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿದರು.

ನೆರೆಪರಿಹಾರಕ್ಕೆ ಇನ್ನೂ ಬಂದಿಲ್ಲ ಕೇಂದ್ರದ ಅನುದಾನ

ಈ ಬೇಡಿಕೆಯನ್ನು ತಳ್ಳಿ ಹಾಕಿದ ಸಿಎಂ ಬಿಎಸ್‌ವೈ,'ಸದ್ಯಕ್ಕೆ ಹೆಚ್ಚಿನ ಅನುದಾನ ನೀಡುವ ಸ್ಥಿತಿಯಲ್ಲಿಸರಕಾರವಿಲ್ಲ. ಹೆಚ್ಚಿನ ಜಿಲ್ಲೆಗಳಲ್ಲಿಅತಿವೃಷ್ಟಿಯಿಂದ ಹಾನಿಯಾಗಿದ್ದು ಸಮರೋಪಾದಿಯಲ್ಲಿಪರಿಹಾರ ಕಾರ್ಯ ಕೈಗೊಳ್ಳಬೇಕು. ಕೆಲವು ಜಿಲ್ಲೆಗಳಲ್ಲಿಬರ ಪರಿಸ್ಥಿತಿಯೂ ಇದೆ. ಮುಂದಿನ ಹಂತದಲ್ಲಿಹೆಚ್ಚಿನ ಅನುದಾನ ಕೊಡುತ್ತೇನೆ,'ಎಂದು ಭರವಸೆ ನೀಡಿದರು.

ನೆರೆಪರಿಹಾರಕ್ಕೆ ಇನ್ನೂ ಬಂದಿಲ್ಲ ಕೇಂದ್ರದ ಅನುದಾನ: 39 ಇಲಾಖೆಗಳ ನಿಧಿ ಬಳಸ್ತಿದೆ ಬಿಎಸ್‌ವೈ ಸರಕಾರ

ವೇತನ ಸಮರ್ಪಣೆ: ಈ ಮಧ್ಯೆ ಸಿಎಂ ಸೂಚನೆ ಮೇರೆಗೆ ಜಿಲ್ಲಾಪಂಚಾಯಿತಿ ಅಧ್ಯಕ್ಷರು ತಮ್ಮ 1 ತಿಂಗಳ ವೇತನವನ್ನು ಪ್ರವಾಹ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದರು. ಇಷ್ಟರ ನಡುವೆಯೂ ತಮಗೆ ಅಂಗರಕ್ಷಕರ ನೀಡುವಂತೆ ಮಾಡಿದ ಮನವಿಗೆ ಸಿಟ್ಟಾದರು. ಇಂಥ ಬೇಡಿಕೆ ಸಲ್ಲಿಸದಂತೆ ಕಟ್ಟಪ್ಪಣೆ ಮಾಡಿದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ