ಆ್ಯಪ್ನಗರ

ನಾವೇನು ತಪ್ಪು ಮಾಡಿದ್ದೇವೆ ? -ಸಿಎಂ ಬಿಎಸ್‌ವೈಗೆ ಎಚ್‌ಡಿಡಿ ಪ್ರಶ್ನೆ

ಅಪ್ಪ-ಮಕ್ಕಳನ್ನು ರಾಜಕೀಯವಾಗಿ ಮುಗಿಸುವುದು ನನ್ನ ಮೊದಲ ಗುರಿ ಎಂದು ಸಿಎಂ ಬಿಎಸ್‌ವೈ ಹೇಳುತ್ತಾರೆ. ಆದರೆ ನಾವು ಏನು ತಪ್ಪು ಮಾಡಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರಶ್ನಿಸಿದ್ದಾರೆ.

Vijaya Karnataka Web 10 Oct 2019, 6:24 pm
ಬೆಂಗಳೂರು: ಅಪ್ಪ-ಮಕ್ಕಳನ್ನು ಮುಗಿಸುವುದೇ ನನ್ನ ಗುರಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳುತ್ತಾರೆ. ಯಾಕಪ್ಪಾ..? ನಾವು ಏನು ತಪ್ಪು ಮಾಡಿದ್ದೇವೆ. ಹೀಗಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು. ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಪ್ರತಿಭಟನೆಯಲ್ಲಿ ಬಿಜೆಪಿ ಹಾಗೂ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web hdd


ಜನರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿ ಬಂದವರು ನಾವು. ನಮ್ಮನ್ನು ಮುಗಿಸುವುದು ಬಿಡುವುದು ರಾಜ್ಯದ ಜನರಿಂದ ಮಾತ್ರ ಸಾಧ್ಯವೇ ಹೊರತು ಯಡಿರಪ್ಪನವರಿಂದ ಸಾಧ್ಯವಿಲ್ಲ. ಮೊದಲು ರಾಜ್ಯದ ಜನರ ಸಂಕಷ್ಟವನ್ನು ನಿವಾರಣೆ ಮಾಡಿ ನಂತರ ರಾಜಕೀಯ ಮಾಡಿ ಎಂದರು.

ಕರ್ನಾಟಕದ ಬಗ್ಗೆ ಮೋದಿಗೆ ಉದಾಸೀನ: ಸಿದ್ದರಾಮಯ್ಯ

ಮೈತ್ರಿ ಸರಕಾರದ ನಡವಳಿಕೆ ಬೇರೆಯೇ ಆಗಿರಬಹುದು. ಇಂದು ಅವರು ಅಪ್ಪ ಮತ್ತು ಮಗನನ್ನು ಮುಗಿಸೋದೆ ನನ್ನ ಗುರಿ ಅಂತ ಹೇಳಿದ್ದಾರೆ. ಯಾಕೆ ಮುಗಿಸುತ್ತಾರೆ, ನಾನು ರಾಜ್ಯದ ಹಿತಾಸಕ್ತಿಗೆ ಹೋರಾಟ ಮಾಡಿದಕ್ಕೆ ಮುಗಿಸುತ್ತೀರಾ ಎಂದು ಪ್ರಶ್ನಿಸಿದರು.

ನಮ್ಮ ಬಗ್ಗೆ ಯಡಿಯೂರಪ್ಪ ಕಠೋರವಾಗಿ ಮಾತನಾಡ್ತಾರೆ ಆದ್ರೆ ಅವರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ. ನಾನು ಇಂದು ಸಂಸತ್ತಿಗೆ ಹೋಗುವ ಶಕ್ತಿ ಕಳೆದುಕೊಂಡಿದ್ದೇನೆ. ಆದ್ರೆ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ ಬದಲಾಗಿ ರಾಜ್ಯದ ಜನರಿಗಾಗಿ ಕೊನೆ ಉಸಿರು ಇರುವವವರೆಗೂ ಹೋರಾಟ ಮಾಡುತ್ತೇನೆ ಎಂದು ಗುಡುಗಿದ್ದಾರೆ.

ಜಾಲಪ್ಪ, ಪರಮೇಶ್ವರ್‌ಗೆ ಐಟಿ ಶಾಕ್‌: ದಿನದ ಪ್ರಮುಖ ಬೆಳವಣಿಗೆಗಳು

ಇದೇ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧನೂ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಅಂತ ಟಿಕೆ ಮಾಡಿದ್ರು. ಆ ಮಾತು ನನಗೆ ಬಹಳಷ್ಟು ನೋವು ತಂದಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷರಾಗಿದ್ದವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿರು.

ಪ್ರವಾಹ ಪರಿಹಾರ ವಿಳಂಬ, ರೈತರ ಆತ್ಮಹತ್ಯೆ ವಿಚಾರದ ಅಧಿವೇಶದನದ ಮೊದಲ ದಿನದಂದೇ ಜೆಡಿಎಸ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದೆ. ಜೆಡಿಎಸ್ ಕಚೇರಿಯಿಂದ ಫ್ರೀಡಂ ಪಾರ್ಕ್‌ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯರ್ತರು ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ