ಆ್ಯಪ್ನಗರ

ಬಿಎಸ್‌ವೈರನ್ನು ಬಾವಿಗೆ ತಳ್ಳಿದ ಬಿಜೆಪಿ: ಎಚ್‌ಡಿಕೆ

ಬಹುಮತವಿಲ್ಲದ ಸರಕಾರ ಉರುಳುತ್ತದೆ ಎಂಬುದು ಗೊತ್ತಿದ್ದೂ ಆತುರಕ್ಕೆ ಬಿದ್ದಂತೆ ಯಡಿಯೂರಪ್ಪ ಅವರನ್ನು ಸಿಎಂ ಮಾಡಿ, ಕೊನೆಗೆ ರಾಜೀನಾಮೆಯ ಅನಿವಾರ್ಯತೆಯನ್ನೂ ಸೃಷ್ಟಿಸುವ ಮೂಲಕ ಬಿಜೆಪಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಸಂಭ್ರಮಿಸುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ನಿಯೋಜಿತ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Vijaya Karnataka 22 May 2018, 8:02 am
ಬೆಂಗಳೂರು: ಬಹುಮತವಿಲ್ಲದ ಸರಕಾರ ಉರುಳುತ್ತದೆ ಎಂಬುದು ಗೊತ್ತಿದ್ದೂ ಆತುರಕ್ಕೆ ಬಿದ್ದಂತೆ ಯಡಿಯೂರಪ್ಪ ಅವರನ್ನು ಸಿಎಂ ಮಾಡಿ, ಕೊನೆಗೆ ರಾಜೀನಾಮೆಯ ಅನಿವಾರ್ಯತೆಯನ್ನೂ ಸೃಷ್ಟಿಸುವ ಮೂಲಕ ಬಿಜೆಪಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಸಂಭ್ರಮಿಸುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ನಿಯೋಜಿತ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web h d kumaraswamy counters amit shah
ಬಿಎಸ್‌ವೈರನ್ನು ಬಾವಿಗೆ ತಳ್ಳಿದ ಬಿಜೆಪಿ: ಎಚ್‌ಡಿಕೆ


''ರಾಜ್ಯದಲ್ಲಿ ನೀವು (ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿಕೂಟ) ಏನನ್ನು ಸಂಭ್ರಮಿಸುತ್ತಿದ್ದೀರಿ'' ಎಂದು ಪ್ರಶ್ನಿಸಿರುವ ಅಮಿತ್‌ಶಾ ಅವರಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ ''ಧರ್ಮದ ಆಧಾರದಲ್ಲಿ ಒಡೆದು ಆಳುವ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟು ಸಂಭ್ರಮಿಸುತ್ತಿದ್ದೇವೆ'' ಎಂದು ಉತ್ತರಿಸಿದ್ದಾರೆ.

ಅಮಿತ್‌ ಶಾ ಹೇಳಿಕೆಗೆ ಪ್ರತಿಯಾಗಿ ಪ್ರಕಟಣೆ ನೀಡಿರುವ ಕುಮಾರಸ್ವಾಮಿ ''ಫಲಿತಾಂಶ ಹೊರಬಿದ್ದು ವಾರ ಕಳೆದರೂ ಕಣ್ಮರೆಯಾಗಿದ್ದ ಅಮಿತ್‌ಶಾ ದಿಢೀರ್‌ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ನಮ್ಮ ಮೈತ್ರಿಕೂಟ ಅಪವಿತ್ರ ಎಂದಿರುವ ಶಾ ಅವರಿಗೆ ನೂರು ಕೋಟಿ ಆಮಿಷವೊಡ್ಡಿದ್ದು ಬಿಜೆಪಿಯ ಪವಿತ್ರ ಕಾರ್ಯವೇ? ಈ ಉದ್ದೇಶಕ್ಕೆ ಖರ್ಚು ಮಾಡಲು ಹೊರಟಿದ್ದು ಸಕ್ರಮ ಹಣವೇ,''ಎಂದು ಪ್ರಶ್ನಿಸಿದ್ದಾರೆ.

ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲದ ಕಾರಣಕ್ಕೆ ಜಾತ್ಯತೀತ ನೆಲೆಯಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಒಟ್ಟಾಗಿವೆ. ನಮ್ಮ ಮೈತ್ರಿಯನ್ನು ಅಪವಿತ್ರ ಎನ್ನುವ ನಿಮ್ಮ ಅಭಿಪ್ರಾಯವೇ ಅಪವಿತ್ರ'' ಎಂದು ಅಮಿತ್‌ಶಾಗೆ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದಾರೆ.

''ಪ್ರಜಾತಂತ್ರದಲ್ಲಿ ದೊಡ್ಡ ಪಕ್ಷ ಎಂಬುದಕ್ಕಿಂತ ಬಹುಮತ ಹೊಂದಿರುವವರು ಸರಕಾರ ರಚಿಸಬೇಕು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟಕ್ಕೆ 2.25 ಕೋಟಿ ಮತ ಸಿಕ್ಕಿವೆ'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ