ಆ್ಯಪ್ನಗರ

ಡಿಸಿ ಜತೆಗೆ ಡಿಶುಂ ಡಿಶುಂ ಸುಳ್ಳು: ರೇವಣ್ಣ ಸಮಜಾಯಿಷಿ

ಹಾಸನ ಜಿಲ್ಲಾಧಿಕಾರಿ ಜತೆಗೆ ಡಿಶುಂ ಡಿಶುಂ ಎಂಬುದೆಲ್ಲಾ ಸುಳ್ಳು. ಯಾರೊಟ್ಟಿಗೂ ಸಂಘರ್ಷ ಮಾಡಬೇಕಾದ ಅಗತ್ಯ ನನಗಿಲ್ಲ ಎಂದು ಹಾಸನ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

Vijaya Karnataka 10 May 2019, 5:00 am
ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ಜತೆಗೆ ಡಿಶುಂ ಡಿಶುಂ ಎಂಬುದೆಲ್ಲಾ ಸುಳ್ಳು. ಯಾರೊಟ್ಟಿಗೂ ಸಂಘರ್ಷ ಮಾಡಬೇಕಾದ ಅಗತ್ಯ ನನಗಿಲ್ಲ ಎಂದು ಹಾಸನ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
Vijaya Karnataka Web Revanna-Priyanka Francis


ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ''ವೈಯಕ್ತಿಕವಾದ ಯಾವ ವಿಚಾರಗಳೊಂದಿಗೂ ಡಿ.ಸಿ. ಜತೆಗೆ ಮಾತನಾಡಿಲ್ಲ. ಬರ ಪರಿಹಾರಕ್ಕೆ ಜಿಲ್ಲೆಗೆ ಬಂದಿರುವ ಹಣ ಬಿಡುಗಡೆ ಮಾಡುವ ಕುರಿತು ಕೇಳಿದ್ದೇನೆ,'' ಎಂದರು.

''ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆ ಸಮರ್ಪಕವಾಗಿ ಆಗಬೇಕು. ಬಿತ್ತನೆ ಆಲೂಗಡ್ಡೆಗೆ ಸಮಸ್ಯೆ ಆಗಬಾರದು. ಹಿಂದೆ ಇದೇ ಕಾರಣಕ್ಕೆ ಗೋಲಿಬಾರ್‌ ಆಗಿತ್ತು ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಆಡಳಿತಾತ್ಮಕ ವಿಚಾರಗಳಲ್ಲಿ ಮೂಗು ತೂರಿಸಿಲ್ಲ'' ಎಂದು ಸಮಜಾಯಿಷಿ ನೀಡಿದರು.

'' ಹಾಲಿ ಡಿ.ಸಿ.ಯನ್ನು ಚುನಾವಣಾ ಆಯೋಗದವರು ನೇಮಕ ಮಾಡಿದ್ದಾರೆ. ದೇವೇಗೌಡ ಮತ್ತು ಮಕ್ಕಳು ಚುನಾವಣೆಯಲ್ಲಿ ದುಡ್ಡು ಹಂಚುತ್ತಿದ್ದಾರೆ ಎಂದು ಡಿ.ಸಿ. ಹಾಕಿದರು. ತರಕಾರಿ ಮಾರುವವರು, ಪೂಜಾರಿಗಳನ್ನೂ ಬಿಡದೆ ಐಟಿ ದಾಳಿ ಮಾಡಿಸಿದರು. ಸಿಕ್ಕಿದ್ದೇನು? ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ