ಆ್ಯಪ್ನಗರ

ಚಾಮುಂಡಿ ಬೆಟ್ಟದಲ್ಲಿ ರಾಜಕೀಯ ನಾಯಕರ ಹೈಡ್ರಾಮ: ಭಕ್ತರಿಂದ ಹಿಡಿಶಾಪ

ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಸಾ ರಾ ಮಹೇಶ್ ಮತ್ತು ಅನರ್ಹ ಶಾಸಕ ವಿಶ್ವನಾಥ್ ಅವರ ನಡುವಿನ ಬಹಿರಂಗ ಗುದ್ದಾಟ ಇಂದು ಚಾಮುಂಡಿ ಬೆಟ್ಟಕ್ಕೆ ತಲುಪಿತ್ತು. ಆದರೆ ಯಾವುದು ಇತ್ಯರ್ಥವಾಗದೆ ಇಬ್ಬರು ಅಲ್ಲಿಂದ ಹಿಂತಿರುಗಿದರು.

Vijaya Karnataka Web 17 Oct 2019, 2:06 pm
ಮೈಸೂರು: ಕಳೆದೊಂದು ತಿಂಗಳಿನಿಂದಲೂ ಮಾಜಿ ಜೆಡಿಎಸ್ ಸಚಿವ ಸಾ ರಾ ಮಹೇಶ್ ಮತ್ತು ಅನರ್ಹ ಶಾಸಕ ವಿಶ್ವನಾಥ್ ರವರ ಆರೋಪ - ಪ್ರತ್ಯಾರೋಪ ಟೀಕೆಗಳ ಜೊತೆಗೆ ಆಣೆ- ಪ್ರಮಾಣದ ವಿಚಾರವಾಗಿ ಇಂದು ಬೆಳಗ್ಗೆ 9ಕ್ಕೆ ಸರಿಯಾಗಿ ಚಾಮುಂಡಿಬೆಟ್ಟಕ್ಕೆ ಉಭಯ ನಾಯಕರು ಆಗಮಿಸಿ ಹೈಡ್ರಾಮವನ್ನೇ ಸೃಷ್ಟಿಸಿದರು.
Vijaya Karnataka Web vishwa sara


ಕ್ಲೈಮ್ಯಾಕ್ಸ್ ಹಂತದಲ್ಲಿ ಸಾರಾ, ವಿಶ್ವನಾಥ್ ಫೈಟ್! 'ಬೆಟ್ಟ'ಕ್ಕೆ ಬರಲು ಇಬ್ಬರೂ ರೆಡಿ, ಆಣೆ ಮಾಡೋರು ಯಾರು?

ಹೌದು, ಆಣೆ - ಪ್ರಮಾಣದ ವಿಚಾರವಾಗಿ ಇಬ್ಬರು ನಾಯಕರು ಒಂದು ತಿಂಗಳಿನಿಂದಲೂ ಮಾತಿನ ಚಕಮಕಿ ನಡೆಸುತ್ತಲೇ ಇದ್ದರು. ಇದಕ್ಕೆ ಕಾರಣ ಸದನದಲ್ಲಿ ಸಾ ರಾ ಮಹೇಶ್ ವಿಶ್ವನಾಥ್ ವಿರುದ್ಧ ಮಾಡಿದ್ದ ಆರೋಪ. ವಿಶ್ವನಾಥ್ ಅವರು ನಾನು 25 ಕೋಟಿಗೆ ಮಾರಾಟವಾಗಿದ್ದೇನೆ ಎಂದು ಸಾ ರಾ ಮಹೇಶ್ ಹೇಳುತ್ತಿದ್ದಾರೆ. ನನ್ನನ್ನು ಕೊಂಡುಕೊಂಡವರು ಕೂಡಲೇ ಬಂದರೆ ನಾನು ಸಿದ್ಧ ಎಂದಿದ್ದರು. ಇದಕ್ಕೆ ಮಹೇಶ್ ಸಹ ನಾನು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ ಎಂದು ತಿಳಿಸಿದ್ದರು. ಅದಕ್ಕೆ ಇಂದು ಬೆಳಗ್ಗೆ ಇಬ್ಬರು ನಾಯಕರು ತಾವು ತಿಳಿಸಿದ ಜಾಗಕ್ಕೆ ಬಂದೇ ಬಿಟ್ಟರು.

ಚಾಮುಂಡೇಶ್ವರಿ ತಾಯಿ ಎದುರು ಪ್ರಮಾಣ: ವಿಶ್ವನಾಥ್‌ ಸವಾಲು ಸ್ವೀಕರಿಸಿದ ಸಾ.ರಾ. ಮಹೇಶ್‌

ಚಾಮುಂಡಿ ಬೆಟ್ಟದಲ್ಲಿ ನಡೆದ ಹೈಡ್ರಾಮದ ಕಥೆ:
ಮೊದಲು ಚಾಮುಂಡಿಬೆಟ್ಟಕ್ಕೆ ಆಗಮಿಸಿದ ವಿಶ್ವನಾಥ್ ತಾಯಿ ದರ್ಶನ ಪಡೆದರು. ಹೊರಭಾಗಕ್ಕೆ ಬಂದು ನಿಂತು ನನ್ನನ್ನು ಕೊಂಡು ಕೊಂಡವರನ್ನು ಸಾ ರಾ ಕರೆದು ತರಲಿ ನಾನು ಕಾಯುತ್ತೇನೆ ಎಂದರು. ಇದಾದ ಬಳಿಕ ಕೆಲವೇ ಕ್ಷಣದಲ್ಲಿ ಸಾ ರಾ ಮಹೇಶ್ ಕೂಡ ಬೆಟ್ಟಕ್ಕೆ ಆಗಮಿಸಿ ನೇರವಾಗಿ ದೇವರ ದರ್ಶನಕ್ಕೆ ತೆರಳಿ ಕಣ್ಣೀರು ಹಾಕಿದರು. ಅಲ್ಲದೇ ದೇಗುಲದ ಆವರಣದಲ್ಲಿ ಕುಳಿತುಕೊಂಡರು. ಅಲ್ಲದೇ ವಿಶ್ವನಾಥ್ ಅವರನ್ನು ನಾನು ಭೇಟಿ ಮಾಡುವುದಿಲ್ಲ. ನಾನು ಈಗಾಗಲೇ ಅವರನ್ನು ಪಕ್ಷಕ್ಕೆ ಕರೆತಂದು ಹಿಂಸೆ ಅನುಭವಿಸಿದ್ದೇನೆ ಎಂದರು.

ಠುಸ್ಸಾಯ್ತು ಆಣೆ - ಪ್ರಮಾಣ! ಚಾಮುಂಡಿ ಬೆಟ್ಟದಲ್ಲಿ ವಿಶ್ವನಾಥ್ - ಸಾ.ರಾ. ಮಹೇಶ್‌ ಹೈಡ್ರಾಮಾ!

ಇದಕ್ಕೆ ಪ್ರತಿಯಾಗಿ ವಿಶ್ವನಾಥ್ ಅವರು ನಾನು ಆಣೆ- ಪ್ರಮಾಣ ಮಾಡುವುದಿಲ್ಲ. ಮಹೇಶ್ ನನಗೆ ನನ್ನನ್ನು ಕೊಂಡುಕೊಂಡವರನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದರು. ನಾನು ಅವರನ್ನು ಸ್ವಾಗತಿಸಲು ಬಂದಿದ್ದೇನೆ ಅಷ್ಟೇ. ಮಹೇಶ್ ದೇವಸ್ಥಾನದ ಹೊರಬರದೆ ಹೇಡಿಯಂತೆ ಒಳಗೆ ಕುಳಿತಿದ್ದಾರೆ. ಅವನೊಬ್ಬ ಫಲಾಯನವಾದಿ ಎಂದು ಸಾ ರಾ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿ ತೆರಳಿದರು.

ಆಣೆ, ಪ್ರಮಾಣ ಸರಿಯಲ್ಲ: ಸಿ.ಟಿ.ರವಿ

ವಿಶ್ವನಾಥ್ ತೆರಳಿದ ಬಳಿಕ ಸಾ ರಾ ಮಹೇಶ್ ಹೊರಬಂದು ನನಗೆ ಉತ್ತರಕೊಡಲಾಗದೇ ಅವರು ಹೋಗಿದ್ದಾರೆ. ನಾನೆಲ್ಲೂ ಅವರನ್ನು ಕೊಂಡುಕೊಂಡವರನ್ನು ಕರೆದು ತರುತ್ತೇನೆ ಎಂದಿಲ್ಲ. ನಾನು ಹಣ ಪಡೆದುಕೊಂಡಿಲ್ಲ ಎಂದು ಆಣೆ ಮಾಡದೇ ತೆರಳಿರುವ ವಿಶ್ವನಾಥ್ ಹೇಡಿ ಎಂದು ಮಹೇಶ್ ತಮ್ಮ ಮನೆಕಡೆ ತೆರಳಿದರು. ನಡೆದದ್ದು ಇಷ್ಟೇ !

ಶಾಸಕ ಸ್ಥಾನಕ್ಕೆ ಸಾರಾ ರಾಜೀನಾಮೆ

ಇಷ್ಟೆಲ್ಲಾ ಹೈಡ್ರಾಮಾಗಳು ಚಾಮುಂಡಿ ಬೆಟ್ಟದಲ್ಲಿ ಕೇವಲ ಒಂದೆರಡು ಗಂಟೆಯಲ್ಲಿಯೇ ಘಟಿಸಿತು. ಆದರೆ ಇವೆಲ್ಲವೂ ಅವಶ್ಯಕತೆ ಇತ್ತೇ ಎಂಬುದು ಈಗ ಸಾವರ್ಜನಿಕರು ಉಭಯ ನಾಯಕರಿಗೆ ಕೇಳುತ್ತಿರುವ ಪ್ರಶ್ನೆ. ಧಾರ್ಮಿಕ ಕ್ಷೇತ್ರವೆಂದರೆ ಎಲ್ಲರಿಗೂ ಅವರದ್ದೇ ಆದ ನಂಬಿಕೆಗಳಿದೆ. ನಿಮ್ಮ ರಾಜಕೀಯ ಕೆಸರೆರೆಚಾಟಕ್ಕೆ ದೇವಸ್ಥಾನವನ್ನು ಏತಕ್ಕಾಗಿ ಬಳಸಿದ್ದೀರಿ ಎಂದು ಜನರು ಪ್ರಶ್ನಿಸುತ್ತಿದ್ದದ್ದು ಚಾಮುಂಡಿ ಬೆಟ್ಟದಲ್ಲಿ ಕಂಡುಬಂದಿತು.

ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ದೇವರನ್ನು ಎಳೆದು ತರಬೇಡಿ: ಸಾರಾ ಮಹೇಶ್ - ಎಚ್‌ ವಿಶ್ವನಾಥ್‌ಗೆ ಈಶ್ವರಪ್ಪ ಸಲಹೆ

ಈ ಹಿಂದೆ ರಾಜೀಸೂತ್ರವನ್ನು ಮಾಡಿಕೊಂಡಿದ್ದ ಈ ಇಬ್ಬರು ನಾಯಕರು ಕೇವಲ 15 ದಿನದೊಳಗಿಯೇ ಮತ್ತೆ ಕಚ್ಚಾಟ ನಡೆಸಿದ್ದು, ಎಲ್ಲರಲ್ಲೂ ಬೇಸರ ತರಿಸಿತ್ತು. ಇನ್ನಾದರೂ ಈ ರಾಜಕೀಯ ನೇತರಾರರು ತಮ್ಮೊಳಗಿನ ಮನಸ್ತಾಪಕ್ಕೆ ಪೂರ್ಣ ವಿರಾಮ ಇಡುತ್ತಾರಾ ಎಂಬುದು ಎಲ್ಲರಲ್ಲೂ ಇರುವ ಯಕ್ಷಪ್ರಶ್ನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ