ಆ್ಯಪ್ನಗರ

5 ಕೋಟಿ ರೂ. ವೆಚ್ಚದ ರಸ್ತೆ ಮಳೆಗೆ ಕೊಚ್ಚಿ ಹೋಯ್ತು; ಬಿಎಸ್‌ವೈಗೆ ಕುಕ್ಕಿದ 'ಹಳ್ಳಿಹಕ್ಕಿ'

ಬಿಜೆಪಿ ನಾಯಕರನ್ನ ಬಿಚ್ಚಿಡ್ತೇನೆಂಬ ಎಚ್ ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಿಚ್ಚಿಡಪ್ಪ ಅದೇನಿದೆ? ನೀವು ಅವರದನ್ನು ಬಿಚ್ಚಿಡ್ತೇನೆ ಅಂತೀರಿ, ಅವರು ನಿಮ್ಮದನ್ನು ಬಿಚ್ಚಿಡ್ತೇನೆ ಅಂತಾರೆ. ‌ಬಿಚ್ಚಿಡ್ರಪ್ಪ ಕುಮಾರಸ್ವಾಮಿ ಬಿಚ್ಚಿಡ್ರಿ ಎಲ್ಲ.

Vijaya Karnataka Web 21 Oct 2021, 4:41 pm
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಮತ್ತೆ ಕಿಡಿಕಾರಿದ್ದಾರೆ.
Vijaya Karnataka Web ಎಚ್ ವಿಶ್ವನಾಥ್‌
ಎಚ್‌ ವಿಶ್ವನಾಥ್‌


ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ ವಿಶ್ವನಾಥ್‌, ಎಂಜಿ ರಸ್ತೆಯಲ್ಲಿ ರಸ್ತೆ ಉದ್ಘಾಟನೆ ಮಾಡಿದರು.‌ 5 ಕೋಟಿ ಹಣ ಖರ್ಚು ಮಾಡಿ ರಸ್ತೆ ಉದ್ಘಾಟಿಸಿದರು. ಆದರೆ ಅವರು ಇತ್ತ ಬರುತ್ತಲೇ ಮಳೆಗೆ ರಸ್ತೆ ಕೊಚ್ಚಿ‌ಹೋಯ್ತು.ಅದ್ರಲ್ಲಿ ಏನೇನು ಮಾಡಿದ್ರು ಗೊತ್ತಿಲ್ಲ ಎಂದರು.

ಗುರುವಾರ ವಿಧಾನಸೌಧದಲ್ಲಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ಮಾಡುವ ನಮ್ಮ ಪಕ್ಷ, ಜೆಡಿಎಸ್, ಕಾಂಗ್ರೆಸ್ ತನ್ನತನವನ್ನು ಮರೆತಿವೆ. ರಾಜ್ಯಕ್ಕೆ ತನ್ನದೇ ಆದ ಸ್ಥಾನಮಾನವಿತ್ತು ಆದರೆ ಅದನ್ನು ಬಾವಿಕಟ್ಟೆ ಬಳಿ ಮಾತನಾಡುವಂತೆ ಮಾತನಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಜನ ಇದನ್ನು ಒಪ್ಪಿಕೊಳ್ಳುವುದಿಲ್ಲ.ಸಾಕಷ್ಟು ವಿಚಾರಗಳು ಇವತ್ತು ರಾಜ್ಯದಲ್ಲಿವೆ. ಇವನ್ನು ಬದಿಗೊತ್ತಿ ನೀನ್ಯಾರು, ನಿನಗೆಷ್ಟು ಹೆಂಡ್ತಿಯರು, ಅವನು ಹೆಬ್ಬೆಟ್ಟು ಎಂಬ ಹೇಳಿಕೆ ನೀಡ್ತಿದ್ದಾರೆ. ಇದು ನಿಜಕ್ಕೂ ಸರಿಯಲ್ಲ ಎಂದು ವಿಶ್ವನಾಥ್‌ ತಿಳಿಸಿದರು.

ತಮಿಳುನಾಡು ಆಳಿದ ಕಾಮರಾಜ್ ನಾಡರ್ ಹೆಬ್ಬೆಟ್ಟೇ. ಒಂದು ಜಿಲ್ಲೆಯಲ್ಲಿ ಪ್ರಿಂಟಿಂಗ್ ಟೆಕ್ನಾಲಜಿ, ಮಗದೊಂದು ಜಿಲ್ಲೆಗೆ ಟೆಕ್ಸ್ ಟೈಲ್ ಮಾಡಿದ್ರು. ನಾಡಾರ್ ಹೆಬ್ಬೆಟ್ಟು ಅಲ್ವೇ? ಪ್ರಧಾನಿಯವರನ್ನು ಹೆಬ್ಬೆಟ್ಟು ಅಂದಿದ್ದು ಸರಿಯಲ್ಲ. ಹಿಂದುಳಿದವರಿಗೆ ಸಿದ್ದರಾಮಯ್ಯ ಯಾವ ಗೌರವ ಕೊಟ್ರಿ? ಗೆದ್ದವರ ಬಗ್ಗೆ ನೀವು ಮಾತನಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ರಾಹುಲ್‌ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಎಂದಿದ್ದರು. ಯಡಿಯೂರಪ್ಪ ಹಾಗೆ ಮಾತನಾಡಬಾರದೆಂದಿದ್ದರು. ನೀವು ಈ ರೀತಿ ಮಾತನಾಡುವುದು‌ ಸರಿಯಲ್ಲ. ನಿಮ್ಮ ಕಿಚ್ಚನ್ನ ಮಾತಿನ ಮೂಲಕ ಹರಿಬಿಡಬೇಡಿ. ರಾಜ್ಯವನ್ನ ಮಲಿನ ಮಾಡುವುದು ಬೇಡ ಎಂದು ಎಚ್ ವಿಶ್ವನಾಥ್ ಮೂರು ಪಕ್ಷದವರಿಗೆ ಕಿವಿ ಮಾತು ಹೇಳಿದರು.

ಬಿಜೆಪಿ ನಾಯಕರನ್ನ ಬಿಚ್ಚಿಡ್ತೇನೆಂಬ ಎಚ್ ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಿಚ್ಚಿಡಪ್ಪ ಅದೇನಿದೆ? ನೀವು ಅವರದನ್ನು ಬಿಚ್ಚಿಡ್ತೇನೆ ಅಂತೀರಿ, ಅವರು ನಿಮ್ಮದನ್ನು ಬಿಚ್ಚಿಡ್ತೇನೆ ಅಂತಾರೆ. ‌ಬಿಚ್ಚಿಡ್ರಪ್ಪ ಕುಮಾರಸ್ವಾಮಿ ಬಿಚ್ಚಿಡ್ರಿ ಎಲ್ಲ. ಈಗ ಸಮಯ ಬಂದಿದೆಯದಲ್ಲಾ ಬಿಚ್ಚಿಡಿ ಎಂದು ವಿಶ್ವನಾಥ್‌ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ