ಆ್ಯಪ್ನಗರ

ಅನರ್ಹ ಶಾಸಕ ಎಚ್‌.ವಿಶ್ವನಾಥ ಅಳಿಯನಿಗೆ ಪ್ರಮುಖ ಹುದ್ದೆ

ಈ ಹುದ್ದೆಯನ್ನು ಹೆಚ್ಚುವರಿ ಪ್ರಭಾರದಲ್ಲಿ ಅಧೀಕ್ಷಕ ಎಂಜಿನಿಯರ್‌ ಬಿ.ಎಲ್‌ ರವೀಂದ್ರಬಾಬು ಅವರು ನಿರ್ವಹಿಸುತ್ತಿದ್ದರು.

Vijaya Karnataka 16 Aug 2019, 7:59 am
ಬೆಂಗಳೂರು: ಅನರ್ಹ ಶಾಸಕ ಎಚ್‌.ವಿಶ್ವನಾಥ ಅವರ ಅಳಿಯ ಎಚ್‌.ಸಿ ರಮೇಂದ್ರ ಅವರನ್ನು ಲೋಕೋಪಯೋಗಿ ಇಲಾಖೆ ಬೆಂಗಳೂರು ದಕ್ಷಿಣ ವಲಯ ಸಂಪರ್ಕ ಮತ್ತು ಕಟ್ಟಡಗಳ ವಿಭಾಗದ ಮುಖ್ಯ ಎಂಜಿನಿಯರ್‌ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
Vijaya Karnataka Web vishwanath


ಈ ಹುದ್ದೆಯನ್ನು ಹೆಚ್ಚುವರಿ ಪ್ರಭಾರದಲ್ಲಿ ಅಧೀಕ್ಷಕ ಎಂಜಿನಿಯರ್‌ ಬಿ.ಎಲ್‌ ರವೀಂದ್ರಬಾಬು ಅವರು ನಿರ್ವಹಿಸುತ್ತಿದ್ದರು. ಎಚ್‌.ಸಿ ರಮೇಂದ್ರ ಅವರು ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಅಧೀಕ್ಷಕ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಿಜೆಪಿ ಸರಕಾರ ರಚನೆಯಾಗಲು ನೆರವಾದ ವಿಶ್ವನಾಥ್‌ಗೆ ಬಳುವಳಿಯಾಗಿ ಅವರ ಕೋರಿಕೆಯಂತೆ ಅಳಿಯನಿಗೆ ಆಯಕಟ್ಟಿನ ಹುದ್ದೆ ನೀಡಲಾಗಿದೆ.

ಜೆಡಿಎಸ್‌ ಪಕ್ಷದ ಶಾಸಕರಾಗಿರುವ ವಿಶ್ವನಾಥ್‌ ರಾಜೀನಾಮೆ ನೀಡಿ ಇತರ ರೆಬೆಲ್‌ ಶಾಸಕರ ಜೊತೆ ಮುಂಬಯಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಇದರಿಂದ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಾಗದೆ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ವಿಶ್ವನಾಥ ಸೇರಿದಂತೆ ರೆಬೆಲ್‌ ಶಾಸಕರನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಅನರ್ಹಗೊಳಿಸಿದ್ದಾರೆ. ರೆಬೆಲ್‌ ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರಕಾರ ರಚನೆಯಾಗಲು ಸಾಧ್ಯವಾಗಿದೆ. ಇದಕ್ಕೆ ಪ್ರತಿಯಾಗಿ ಅನರ್ಹ ಶಾಸಕರು ಹೇಳಿದ ಕೆಲಸಗಳು ಬಿಜೆಪಿ ಸರಕಾರದಲ್ಲಿ ಒಂದೊಂದಾಗಿ ಆಗುತ್ತಿವೆ. ಇದರಲ್ಲಿ ವಿಶ್ವನಾಥ್‌ ಅಳಿಯ ರಮೇಂದ್ರಗೆ ಪ್ರಮುಖ ಹುದ್ದೆ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ