ಆ್ಯಪ್ನಗರ

ರಾಜ್ಯದಲ್ಲಿ ಮತ್ತೆ ಇಬ್ಬರನ್ನು ಬಲಿ ಪಡೆದ ಎಚ್‌1ಎನ್‌1 ಮಹಾಮಾರಿ: 192 ಜನರಿಗೆ ಸೋಂಕು!

ಕೊರೊನಾ ಮಹಾಮಾರಿ ವಿಶ್ವಾದ್ಯಂತ ತಳಮಳ ಹುಟ್ಟಿಸಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಮತ್ತೆ ಎಚ್‌1ಎನ್1 ಸೋಂಕು ಉಲ್ಬಣಗೊಂಡಿದೆ. ಕಳೆದ ಕೆಲ ದಿನಗಳಲ್ಲಿ ಎಚ್‌1ಎನ್‌1ಗೆ ಇಬ್ಬರು ಬಲಿಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Vijaya Karnataka Web 25 Feb 2020, 6:04 pm
ಉಡುಪಿ: ಕೊರೊನಾ ಮಹಾಮಾರಿ ವಿಶ್ವಾದ್ಯಂತ ತಳಮಳ ಹುಟ್ಟಿಸಿರುವ ಸಂದರ್ಭದಲ್ಲೇ, ರಾಜ್ಯದಲ್ಲಿ ಎಚ್‌1ಎನ್1 ಸೋಂಕು ಮತ್ತೆ ಉಲ್ಬಣಗೊಂಡಿದೆ. ಹಂದಿಜ್ವರ ಎಂದೇ ಕರೆಯಲಾಗುವ ಈ ಸೋಂಕಿಗೆ ಕಳೆದ ಕೆಲ ದಿನಗಳಲ್ಲಿ ಇಬ್ಬರು ಬಲಿಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
Vijaya Karnataka Web H1N1


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಂಕಿ ಅಂಶಗಳಂತೆ ಫೆಬ್ರವರಿಯಲ್ಲಿ ಎಚ್‌1ಎನ್‌1ಗೆ ಇಬ್ಬರು (ದಾವಣಗೆರೆ ಮತ್ತು ತುಮಕೂರಿನಲ್ಲಿ ತಲಾ ಒಬ್ಬರು) ಬಲಿಯಾಗಿದ್ದಾರೆ. ಇದುವರೆಗೆ ರಾಜ್ಯಾದ್ಯಂತ ಒಟ್ಟು 192 ಜನರಿಗೆ ಎಚ್‌1ಎನ್‌1 ಸೋಂಕು ತಗುಲಿರುವುದು ಖಾತರಿಯಾಗಿದೆ.

ಎಚ್‌1ಎನ್‌1 ಸೋಂಕು ಖಾತರಿಯಾಗಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಒಟ್ಟು 192 ಪ್ರಕರಣಗಳ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 74 ಪ್ರಕರಣಗಳು ದಾಖಲಾಗಿವೆ. ಉಡುಪಿಯಲ್ಲಿ 46 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ (ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ) 22, ಬೆಂಗಳೂರು ಗ್ರಾಮಾಂತರ 7, ಬೆಳಗಾವಿ 1, ಬಳ್ಳಾರಿ 2, ಚಿತ್ರದುರ್ಗ 2, ದಕ್ಷಿಣ ಕನ್ನಡ 13, ದಾವಣಗೆರೆ 7, ಕೋಲಾರ 2, ಕೊಪ್ಪಳ 1, ಮೈಸೂರು 1, ಶಿವಮೊಗ್ಗದಲ್ಲಿ 7 ಪ್ರಕರಣಗಳು ಖಾತರಿಯಾಗಿವೆ.

ಏನಿದು ಹಂದಿ ಜ್ವರ, ಇದರ ಲಕ್ಷಣಗಳೇನು, ಇದರ ನಿಯಂತ್ರಣ ಹೇಗೆ?

2020ರಲ್ಲಿ ಇದುವರೆಗೂ 1823 ಜನರಿಗೆ ಎಚ್‌1ಎನ್‌1 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 192 ಪ್ರಕರಣಗಳು ಖಾತರಿಯಾಗಿವೆ. 2019ರಲ್ಲಿ ಒಟ್ಟು 15,140 ಜನರಿಗೆ ಎಚ್‌1ಎನ್‌1 ಪರೀಕ್ಷೆ ನಡೆಸಲಾಗಿತ್ತು ಈ ಪೈಕಿ 2,030 ಜನರಲ್ಲಿ ಎಚ್‌1ಎನ್‌1 ಖಾತರಿಯಾಗಿತ್ತು.

2010ರಿಂದ 2020ರವರೆಗೆ ಒಟ್ಟು 10 ವರ್ಷಗಳಲ್ಲಿ 85,266 ಜನರಿಗೆ ಎಚ್‌1ಎನ್‌1 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 14,853 ಪ್ರಕರಣಗಳು ಖಾತರಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ