ಆ್ಯಪ್ನಗರ

ದೇವೇಗೌಡರ ಬಗ್ಗೆ ಗೌರವ ಇದೆ, ಭಯವಿಲ್ಲ: ಸದಾನಂದ ಗೌಡ

ಗೌಡರ ಬಗ್ಗೆ ನನಗೆ ಗೌರವವಿದೆ. ನನ್ನ ಇದುವರೆಗಿನ ಚುನಾವಣೆಯಲ್ಲಿ ನಾನು ಸಣ್ಣವರ ಜತೆ ಸೆಣಸಿದ್ದೇನೆ. ಈ ಬಾರಿ ದೊಡ್ಡವರ ಜತೆ ಕಾದಾಡುವ ಆಸೆ ಇದೆ ಎಂದು ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

Vijaya Karnataka Web 12 Mar 2019, 1:10 pm
ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಬಗ್ಗೆ ನನಗೆ ಭಯವಿಲ್ಲ, ಗೌರವವಿದೆ. ಯಾರ ಬಗ್ಗೆಯೇ ಆಗಲಿ ಹಾರಿಕೆ ಸುದ್ದಿ ಹಬ್ಬಿಸುವವರು ದೇಶದ್ರೋಹಿಗಳು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
Vijaya Karnataka Web D V Sadananda Gowda


ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿ ತಮ್ಮ ಐದು ವರ್ಷದ ಸಾಧನೆಯ ಪಟ್ಟಿ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, ‘‘ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಬಹುದೆಂಬ ವಿಚಾರದಲ್ಲಿ ನನಗೆ ಭಯವಿಲ್ಲ. ಗೌಡರ ಬಗ್ಗೆ ನನಗೆ ಗೌರವವಿದೆ. ನನ್ನ ಇದುವರೆಗಿನ ಚುನಾವಣೆಯಲ್ಲಿ ನಾನು ಸಣ್ಣವರ ಜತೆ ಸೆಣಸಿದ್ದೇನೆ. ಈ ಬಾರಿ ದೊಡ್ಡವರ ಜತೆ ಕಾದಾಡುವ ಆಸೆ ಇದೆ,’’ ಎಂದು ಹೇಳಿದರು.

‘‘ನನಗೆ ಪಕ್ಷದಲ್ಲಿ ಯಾರ ವಿರೋಧವೂ ಇಲ್ಲ. ನನ್ನನ್ನು ಸೇರಿದಂತೆ ಯಾರ ಬಗ್ಗೆಯಾದರೂ ಹಾರಿಕೆ ಸುದ್ದಿ ಹಬ್ಬಿಸುವವರು ದೇಶದ್ರೋಹಿಗಳು,’’ ಎಂದರು. ‘‘ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಕೊಟ್ಟರೆ ಸ್ಪರ್ಧಿಸಿ ಗೆಲ್ಲುತ್ತೇನೆ. ಇಲ್ಲವಾದರೆ ಉತ್ತರದಲ್ಲಿ ಯಾರನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿದರೂ ಬಿಜೆಪಿಯ ಆ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ