ಆ್ಯಪ್ನಗರ

ಹವ್ಯಕರ ವಂಶವಾಹಿಯಲ್ಲೇ ಪ್ರತಿಭೆ

ಹವ್ಯಕ ಸಮುದಾಯದ ವಂಶವಾಹಿಯಲ್ಲೇ ಪ್ರತಿಭೆ ಹಾಗೂ ಜಾಣತನವಿದೆ ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.

Vijaya Karnataka 1 Apr 2019, 5:00 am
ಬೆಂಗಳೂರು : ಹವ್ಯಕ ಸಮುದಾಯದ ವಂಶವಾಹಿಯಲ್ಲೇ ಪ್ರತಿಭೆ ಹಾಗೂ ಜಾಣತನವಿದೆ ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.
Vijaya Karnataka Web 3103-2-2-KSG_035 (3)


ಮಹಾಸಭಾದ 76 ನೇ ಸಂಸ್ಥಾಪನಾ ದಿನದ ಅಂಗವಾಗಿ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ''ಪ್ರತಿ ವರ್ಷ ಮಹಾಸಭಾದ ಸಂಸ್ಥಾಪನಾ ದಿನದಂದು ಪ್ರತಿಭಾವಂತರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಇದರಿಂದ ಹೊರಜಗತ್ತಿಗೆ ಪ್ರತಿಭೆಗಳ ಅನಾವರಣವಾಗುತ್ತಿದೆ,'' ಎಂದರು.

''ಮಹಾಸಭಾದ ಪ್ರಶಸ್ತಿ ಅರ್ಜಿ ಹಾಕಿ ಬರುವಂಥದ್ದಲ್ಲ. ರಾಜಕೀಯ ಮಾಡಿದರೂ ಸಿಗುವಂತದ್ದಲ್ಲ. ಸಾಧಕರನ್ನು ಸಮುದಾಯದ ಮಂದಿಯಿಂದಲೇ ಗುರುತಿಸಿ ಗೌರವಿಸಲಾಗುತ್ತಿದೆ,'' ಎಂದರು.

ಸಾಹಿತಿ ಎ.ಪಿ.ಮಾಲತಿ ಮಾತನಾಡಿ, ''ಮೊಬೈಲ್‌ ಬಳಕೆ ಹೆಚ್ಚಿರುವ ಇಂದಿನ ಕಾಲದಲ್ಲಿ ಪ್ರತಿಭೆಗಳಿರುವುದು ಅಚ್ಚರಿಯ ವಿಚಾರವಾಗಿದೆ. ಎಲೆಮರೆಕಾಯಿಗಳಂತಿದ್ದ ಪ್ರತಿಭಾವಂತರನ್ನು ಸಮಾಜ ಗುರುತಿಸುವಂತೆ ಮಾಡುತ್ತಿರುವುದು ಹೆಮ್ಮೆಯ ವಿಷಯ,'' ಎಂದರು.

ಸಿಆರ್‌ಪಿಎಫ್‌ನ ನಿವೃತ್ತ ಐಜಿಪಿ ಡಾ.ಪಿ.ನಾರಾಯಣಭಟ್‌ ಮಾತನಾಡಿ, ''ಮನೆಯನ್ನು ಬಿಟ್ಟು ಹೋದ ವ್ಯಕ್ತಿಯನ್ನು ಮರಳಿ ಮನೆಗೆ ಕರೆದುತಂದಾಗ ಆತನಿಗೆ ಅತೀವ ಸಂತೋಷವಾಗುತ್ತದೆ. ನನ್ನದೇ ಸಮುದಾಯದವರು ಗುರುತಿಸಿ ಗೌರವಿಸಿದಾಗ ಅದೇ ರೀತಿಯ ಸಂತೋಷವಾಯಿತು,'' ಎಂದರು.

ಪ್ರಶಸ್ತಿ ಪುರಸ್ಕೃತರು

ಯಕ್ಷಗಾನ ಕಲಾವಿದ ನಾರಾಯಣ ಹಾಸ್ಯಗಾರ್‌ ಕರ್ಕಿ-'ಹವ್ಯಕ ವಿಭೂಷಣ', ಸಮಾಜ ಸೇವಕ ಗೋವಿಂದ ಭಟ್‌ ಮುಳ್ಳಂಕೊಚಿ, ಸಿಆರ್‌ಪಿಎಫ್‌ ಐಜಿಪಿ(ಮೆಡಿಕಲ್‌) ಡಾ.ಪಿ.ನಾರಾಯಣ ಭಟ್‌-'ಹವ್ಯಕ ಭೂಷಣ', ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಅನನ್ಯ ಭಾರ್ಗವ ಬೇದೂರು, ಸಾಹಿತಿ ಸುಧಾ ಶರ್ಮಾ ಚವತ್ತಿ, ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಸಂಸ್ಥಾಪಕಿ ಶಾಂತಲಾ ಸುರೇಶ ಮುಂಗರವಳ್ಳಿ-'ಹವ್ಯಕ ಶ್ರೀ' ಹಾಗೂ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಕ್ಕಳಿಗೆ 'ಹವ್ಯಕ ಪಲ್ಲವ ಪುರಸ್ಕಾರ' ನೀಡಿ ಸನ್ಮಾನಿಸಲಾಯಿತು.

ಕೆನರಾ ಬ್ಯಾಂಕ್‌ನ ಮಾಜಿ ಮುಖ್ಯಸ್ಥ ಆರ್‌.ವಿ.ಶಾಸ್ತ್ರಿ, ಸಂಸ್ಥಾಪನೋತ್ಸವ ಸಮಿತಿ ಸಂಚಾಲಕ ಮುಗಲೋಡಿ ಕೃಷ್ಣಮೂರ್ತಿ, ಸಮಾಜ ಸೇವಕ ಪ್ರಮೋದ್‌ ಹೆಗಡೆ, ಮಹಾಸಭಾ ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ ಸಂಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ