ಆ್ಯಪ್ನಗರ

ತಿಹಾರ್‌ ಜೈಲಿನಲ್ಲಿ ಡಿಕೆ ಶಿವಕುಮಾರ್‌ -ಎಚ್‌ಡಿಕೆ 'ಸೌಹಾರ್ದಯುತ' ಭೇಟಿ

​ಸೋಮವಾರ ಬೆಳಗ್ಗೆ 11 ಗಂಟೆಗೆ ತಿಹಾರ್‌ ಜೈಲಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಡಿಕೆ ಶಿವಕುಮಾರ್‌ ಜೊತೆ ಮಾತುಕತೆ ನಡೆಸಿದರು.

Vijaya Karnataka 21 Oct 2019, 11:34 pm
ಹೊಸದಿಲ್ಲಿ: ಸೋಮವಾರ ಘಟಾನುಘಟಿ ರಾಜಕಾರಣಿಗಳಿಬ್ಬರ ಮಹತ್ವದ ಭೇಟಿಗೆ ತಿಹಾರ್‌ ಜೈಲು ಸಾಕ್ಷಿಯಾಯಿತು. ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿ ಬಂಧಿತರಾಗಿ ತಿಹಾರ್‌ ಜೈಲಿನಲ್ಲಿರುವ ಕಾಂಗ್ರೆಸ್‌ ನಾಯಕ ಮತ್ತು ಶಾಸಕ ಡಿ.ಕೆ ಶಿವಕುಮಾರ್‌ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸೋಮವಾರ ಭೇಟಿ ಮಾಡಿ, ಚರ್ಚಿಸಿದರು.
Vijaya Karnataka Web HDKumaraswamyDKShivakumar


ಸೋಮವಾರ ಬೆಳಗ್ಗೆ 11ಕ್ಕೆ ತಿಹಾರ್‌ ಜೈಲಿಗೆ ಭೇಟಿ ನೀಡಿದ ಕುಮಾರಸ್ವಾಮಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಡಿಕೆ ಶಿವಕುಮಾರ್‌ ಜೊತೆ ಮಾತುಕತೆ ನಡೆಸಿದರು.

ಭೇಟಿ ಬಳಿಕ ಮಾತನಾಡಿದ ಅವರು, "ಶಿವಕುಮಾರ್‌ ನನ್ನ ಉತ್ತಮ ಗೆಳೆಯ. ಸೌಹಾರ್ದಯುತವಾಗಿ ಭೇಟಿ ಆಗಲು ಬಂದಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿಆರೋಪ ಮುಕ್ತರಾಗಿ ಡಿಕೆಶಿ ಹೊರ ಬರಲಿದ್ದಾರೆ,'' ಎಂದರು.

''ಡಿಕೆ ಶಿವಕುಮಾರ್‌ ಪ್ರಕರಣದಲ್ಲಿ ಬಿಜೆಪಿ ನಾಯಕರ ದುರುದ್ದೇಶ ಎದ್ದು ಕಾಣುತ್ತದೆ. ಯಾವುದಕ್ಕೂ ಅಳುಕದೆ ಅದಮ್ಯ ಆತ್ಮವಿಶ್ವಾಸ ಇಟ್ಟುಕೊಂಡಿರುವ ಡಿಕೆಶಿ ಆದಷ್ಟು ಬೇಗ ಸಕ್ರಿಯ ರಾಜಕಾರಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ,'' ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗಿಂತ ಮಹಾರಾಷ್ಟ್ರ ಚುನಾವಣೆಯೇ ಬಿಜೆಪಿಗೆ ಮುಖ್ಯವೆನಿಸಿದೆ ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ