ಆ್ಯಪ್ನಗರ

ರಾಜ್ಯ ರಾಜಕಾರಣ ಟ್ರೋಲಿಗರಿಗೆ ಬಾಡೂಟ.... ಏನೆಲ್ಲ ಮಾಡಿದಾರೆ ನೋಡಿ!

ರಾಜ್ಯ ರಾಜಕೀಯ ಬೆಳವಣಿಗೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಹೆಚ್ಚಾಗುತ್ತಿದೆ. ವಿಶ್ವಾಸಮತ ಯಾಚನೆ, ಸ್ಪೀಕರ್‌ ರಮೇಶ್‌ ಕುಮಾರ್‌ ಹಾಗೂ ದೋಸ್ತಿ ಸರಕಾರದ ನಾಯಕರನ್ನು ವಿವಿಧ ರೀತಿಯಲ್ಲಿ ಟ್ರೋಲ್‌ ಮಾಡಲಾಗುತ್ತಿದೆ.

Vijaya Karnataka Web 23 Jul 2019, 2:53 pm
ಬೆಂಗಳೂರು: ರಾಜ್ಯ ರಾಜಕೀಯದ ಬೆಳವಣಿಗೆಗಳ ಕುರಿತು ಸಾಮಾಜಿಕ ತಾಣಗಳಲ್ಲಿ ಭರ್ಜರಿ ಟ್ರೋಲ್‌ ಆಗುತ್ತಿದೆ.
Vijaya Karnataka Web WhatsApp Image 2019-07-23 at 2.26.38 PM.


ಕಳೆದ ಮೂರು ವಾರಗಳಿಂದ ರಾಜ್ಯ ರಾಜಕಾರಣದ ಹೈಡ್ರಾಮದ ಕುರಿತು ಸಾಮಾಜಿಕ ತಾಣಗಳಲ್ಲಿ ರಾಜಕೀಯ ನಾಯಕರ ಕಾಲೆಳೆಯುವ ಟ್ರೋಲ್‌ ಎಲ್ಲೆಡೆ ವೈರಲ್ ಆಗಿದೆ.

ಅಂತೆಯೇ ಸೋಮವಾರ ಇಸ್ರೋ ಚಂದ್ರಯಾನ ಉಡಾವಣೆಯನ್ನು ಹೋಲಿಸಿಯೂ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಟ್ರೋಲ್‌ ಮಾಡಲಾಗಿದೆ. ಸಾಮಾನ್ಯವಾಗಿ ವಿಪಕ್ಷಗಳು ಸದನದ ಬಾವಿಗಿಳಿದು ಕಲಾಪಕ್ಕೆ ಅಡ್ಡಿಪಡಿಸುವುದು ಸಾಮಾನ್ಯ. ಆದರೆ ಈ ಬಾರಿ ದೋಸ್ತಿ ಸರಕಾರದ ಶಾಸಕರೇ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕಲಾಪವನ್ನು ಮುಂದೂಡುವಂತೆಯೂ ಆಡಳಿತ ಪಕ್ಷದ ನಾಯಕರು ಪಟ್ಟು ಹಿಡಿದ ಸಂಗತಿಗಳಿಗೆ ಕರ್ನಾಟಕ ವಿಧಾನಸಭೆ ಸಾಕ್ಷಿಯಾಗಿದೆ.

ಜು.6ಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 15 ಮಂದಿ ಶಾಸಕರು ರಾಜೀನಾಮೆ ನೀಡಿ, ಮುಂಬಯಿಗೆ ತೆರಳಿದ ಬಳಿಕ, ದೇಶದೆಲ್ಲೆಡೆ ರಾಜ್ಯ ರಾಜಕೀಯ ಪರಿಸ್ಥಿತಿಯ ಅವಲೋಕನ ನಡೆಯುತ್ತಿದೆ. ಅದರಲ್ಲೂ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿ, ಸದನ ಕರೆದ ಬಳಿಕವಂತೂ ರಾಜ್ಯ ರಾಜಕೀಯ ಸ್ಥಿತಿ ಟ್ರೋಲಿಗರ ಬಾಯಿಗೆ ಬಾಡೂಟದಂತೆ ಪರಿಣಮಿಸಿದೆ.

ಸದನ ಆರಂಭವಾದ ದಿನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಂದೂಡುತ್ತಿರುವುದಕ್ಕೆ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧವೂ ಟ್ರೋಲ್‌ ಮಾಡಲಾಗಿತ್ತು. ಅನೇಕರು ಹಾಳಾದ ಸ್ಪೀಕರ್‌ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಿ, ಸ್ಪೀಕರ್‌ ಸರಿ ಇಲ್ಲ ಎಂದು ಕಾಮೆಂಟ್‌ ಮಾಡಿದ್ದರು. ಈ ಸಂಬಂಧ ಕಲಾಪದಲ್ಲೇ ಸ್ಪೀಕರ್‌ ರಮೇಶ್‌ ಕುಮಾರ್‌ ಖಡಕ್‌ ಎಚ್ಚರಿಕೆಯನ್ನೂ ನೀಡಿದ್ದರು.

ಇಸ್ರೋ.. ಇಳಿಸ್ರೋ, ಉಳಿಸ್ರೋ...
ಚಂದ್ರಯಾನ-2ರ ಯಶಸ್ವಿ ಉಡಾವಣೆಯ ಚಿತ್ರಕ್ಕೆ ಬಿಎಸ್‌ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಹಾಗೂ ದೋಸ್ತಿ ನಾಯಕರ ಚಿತ್ರಗಳನ್ನು ಕೊಲ್ಯಾಜ್‌ಗೊಳಿಸಿ ಟ್ರೋಲ್‌ ಮಾಡಲಾಗಿದೆ. ರಾಕೆಟ್‌ ಎದುರು ಇಸ್ರೋ, ಯಡಿಯೂರಪ್ಪ ಅವರ ಫೋಟೋ ಎದುರು ಇಳಿಸ್ರೋ ಎಂದು ಹಾಗೂ ದೋಸ್ತಿ ಸರಕಾರದ ನಾಯಕರ ಫೋಟೋ ಎದುರು ಉಳಿಸ್ರೋ ಎಂದು ನಮೂದಿಸಿ ಸಾಮಾಜಿಕ ತಾಣಗಳಲ್ಲಿ ಹರಿಬಿಡಲಾಗಿದೆ.



ಮೋದಿ-ಎಚ್‌ಡಿಡಿ ಟ್ರೋಲ್‌
ಚಂದ್ರಯಾನ ಉಡಾವಣೆಯನ್ನು ದಿಲ್ಲಿಯ ತಮ್ಮ ಕಚೇರಿಯ ಆಡಿಯೋ ವಿಶುವಲ್‌ ರೂಂನಿಂದ ಲೈವ್‌ ವೀಕ್ಷಿಸಿದ ಪ್ರಧಾನಿ ಮೋದಿ ಚಿತ್ರವನ್ನು, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಫೋಟೋಕ್ಕೆ ಹೋಲಿಕೆ ಮಾಡಲಾಗಿದೆ. ದೇವೇಗೌಡ ಅವರು ಟಿವಿ ಪರದೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ನೋಡುತ್ತಿದ್ದಾರೆ. ಬಾಯಿಗೆ ಕರ್ಚೀಫ್‌ ಇಟ್ಟಿರುವ ಚಿತ್ರವನ್ನು ಬಳಸಲಾಗಿದೆ.


ಕಾದು ಸಾಕಾಯ್ತು!
ಇನ್ನು ಸರಕಾರದ ವಿಶ್ವಾಸಮತ ಯಾಚನೆಗೆ ಕಾದು ಕುಳಿತಿರುವ ಜನರು, ಅಸ್ಥಿಪಂಜರಗಳಾದರು ಎನ್ನುವ ಟ್ರೋಲ್‌ ಟ್ವಿಟರ್‌ನಲ್ಲಿ ಹರಿದಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ