ಆ್ಯಪ್ನಗರ

ವಿಧಾನಸಭೆಯಲ್ಲಿ ಮಾಧುಸ್ವಾಮಿಯನ್ನು ಸಿಕ್ಕಾಪಟ್ಟೆ ಹಾಡಿ ಹೊಗಳಿದ ಎಚ್‌.ಡಿ. ರೇವಣ್ಣ!

ವಿಧಾನಸಭೆಯಲ್ಲಿ ಗುರುವಾರ ಸಚಿವ ಜೆ.ಸಿ. ಮಾಧುಸ್ವಾಮಿಯನ್ನು ಜೆಡಿಎಸ್‌ ನಾಯಕ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಸಿಕ್ಕಾಪಟ್ಟೆ ಹೊಗಳಿದರು.‌ ಜೆಸಿ ಮಾಧುಸ್ವಾಮಿ ಕಾನೂನಿನ ರೀತಿಯಾಗಿ ನಡೆಯುತ್ತಾರೆ ಎಂದು ರೇವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 16 Sep 2021, 8:11 pm

ಹೈಲೈಟ್ಸ್‌:

  • ವಿಧಾನಸಭೆಯಲ್ಲಿ ಗುರುವಾರ ಸಚಿವ ಜೆ.ಸಿ. ಮಾಧುಸ್ವಾಮಿಯನ್ನು ಸಿಕ್ಕಾಪಟ್ಟೆ ಹೊಗಳಿದ ಜೆಡಿಎಸ್‌ ನಾಯಕ, ಮಾಜಿ ಸಚಿವ ಎಚ್‌.ಡಿ. ರೇವಣ್ಣ
  • ಜೆಸಿ ಮಾಧುಸ್ವಾಮಿ ಕಾನೂನಿನ ರೀತಿಯಾಗಿ ನಡೆಯುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ರೇವಣ್ಣ
  • ನಿಮ್ಮ ಕೆಲಸ ಜೆ.ಸಿ. ಮಾಧುಸ್ವಾಮಿ ಮಾಡಿಕೊಟ್ಟಿದ್ದಾರೋ ಎಂದು ಎಚ್‌ಡಿ ರೇವಣ್ಣ ಅವರನ್ನು ಕಿಚಾಯಿಸಿದ ಸಿದ್ದರಾಮಯ್ಯ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web HD Revanna
ಬೆಂಗಳೂರು: ವಿಧಾನಸಭೆಯಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿಯನ್ನು ಜೆಡಿಎಸ್‌ ನಾಯಕ, ಮಾಜಿ ಸಚಿವ ಎಚ್‌.ಡಿ. ರೇವಣ್ಣ
ಸಿಕ್ಕಾಪಟ್ಟೆ ಹೊಗಳಿದರು.‌ 2021ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ (ತಿದ್ದುಪಡಿ) ವಿಧೇಯಕದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ಮಾತನಾಡುತ್ತಾ, ಜೆಸಿ ಮಾಧುಸ್ವಾಮಿ ಕಾನೂನಿನ ರೀತಿಯಾಗಿ ನಡೆಯುತ್ತಾರೆ ಎಂದರು.
'ಈ ತಿದ್ದುಪಡಿ ಸರಿ ಇದೆಯಾ?' ಎಂದು ಮಾಧುಸ್ವಾಮಿ ಹೇಳಲಿ ಎಂದ ಎಚ್‌.ಡಿ. ರೇವಣ್ಣ, ಈ ವಿಧೇಯಕ ಜಾರಿಗೆ ತರಲು ಮಾಧುಸ್ವಾಮಿ ಅವರಿಗೆ ಎಲ್ಲಿಂದ ಒತ್ತಡ ಬಂತು ಎಂದು ಇಲ್ಲಿ ಹೇಳಲು ಸಾಧ್ಯವಿಲ್ಲ. ಹೇಳಿದರೆ ಅವರಿಗೆ ಕುತ್ತಾಗುತ್ತೆ ಎಂದರು.‌

ಈ ವೇಳೆ ರಮೇಶ್ ಕುಮಾರ್ ಮಧ್ಯ ಪ್ರವೇಶ ಮಾಡಿ, ನೀವು ಏನು ದೊಡ್ಡ ಉಪಕಾರ ಮಾಡುತ್ತಿದ್ದೀರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ? ಅವರಿಗೆ ಇನ್ನೇನು ಕುತ್ತಾಗಬೇಕು ಏನು‌ ಬಾಕಿ ಇದೆ ಹೇಳಿ. ನಿಮಗೆ ಯಡಿಯೂರಪ್ಪ, ಮಾಧುಸ್ವಾಮಿ ತೊಂದರೆ ಮಾಡಿಲ್ಲ. ಹಾಗಾದರೆ ನಿಮಗೆ ಅಭಿಮಾನ ಇಲ್ಲದಿರುವುದು ಯಾರ ಬಗ್ಗೆ? ಹೇಳಿ ಎಂದು ಕಾಲೆಳೆದರು.


ಈ ವೇಳೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ಈಗ ಇದ್ದಕ್ಕಿದ್ದಂತೆ ಜೆ.ಸಿ. ಮಾಧುಸ್ವಾಮಿ ಮೇಲೆ ರೇವಣ್ಣನಿಗೆ ಪ್ರೀತಿ ಬಂದಿದೆ.
ನಿಮ್ಮ ಕೆಲಸ ಜೆ.ಸಿ. ಮಾಧುಸ್ವಾಮಿ ಮಾಡಿಕೊಟ್ಟಿದ್ದಾರೋ ಎಂದು ಎಚ್‌ಡಿ ರೇವಣ್ಣ ಅವರನ್ನು ಕಿಚಾಯಿಸಿದರು. ‌
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ