ಆ್ಯಪ್ನಗರ

ನಮ್ಮ ಶಾಸಕರಿಗೆ ಕೋಟಿಕೋಟಿ ಕೊಟ್ಟಾಗ ಐಟಿ ಸತ್ತು ಹೋಗಿತ್ತಾ?: ಬಿಜೆಪಿ ವಿರುದ್ಧ ಎಚ್ಡಿಕೆ ಕಿಡಿಕಿಡಿ,

ಬಿಬಿಎಂಪಿ ಕಡತಗಳ ಬೆಂಕಿ ಇಟ್ಟವರಿಗೆ ಮುಖ್ಯಸ್ಥರಾಗಿದ್ದವರು ನವಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಡಿಸಿಎಂ ಅಶ್ವತ್ಥನಾರಾಯಣ ವಿರುದ್ದ ಮಾಜಿ ...

Vijaya Karnataka 5 Sep 2019, 5:00 am
ಬೆಂಗಳೂರು: ಬಿಬಿಎಂಪಿ ಕಡತಗಳ ಬೆಂಕಿ ಇಟ್ಟವರಿಗೆ ಮುಖ್ಯಸ್ಥರಾಗಿದ್ದವರು ನವಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಡಿಸಿಎಂ ಅಶ್ವತ್ಥನಾರಾಯಣ ವಿರುದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Vijaya Karnataka Web hdk


ಜೆಡಿಎಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೇರವಾಗಿಯೇ ಮಲ್ಲೇಶ್ವರದ ಮಹಾನುಭಾವ ಎಂದು ಡಿಸಿಎಂ ವಿರುದ್ಧ ನೇರ ಆಪಾದನೆಯೊಂದಿಗೆ ಆಕ್ರೋಶ ಹೊರಹಾಕಿದರು.

''ಮೈತ್ರಿ ಸರಕಾರ ಕೆಡವಲು ಯಾರಾರ‍ಯರ ಬಳಿ ಹಣ ಸಂಗ್ರಹಿಸಿ ತಂದರು. ಈಗಲೂ ನಮ್ಮ ಶಾಸಕರನ್ನು ಸೆಳೆಯಲು ನಿಗಮ -ಮಂಡಳಿ ಅಧ್ಯಕ್ಷಗಾದಿ ಹಾಗೂ 20 ಕೋಟಿ ರೂ. ಹಣ ಕೊಡುವ ಅಮಿಷ ನೀಡುತ್ತಿದ್ದಾರೆ. ಇಂತವರು ಭ್ರಷ್ಟಾಚಾರ ನಿಲ್ಲಿಸುತ್ತಾರಂತೆ. ನಾಚಿಕೆ, ಮಾನ-ಮರ್ಯಾದೆ ಇದೆಯಾ?'' ಎಂದು ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲವಾದರು.

''ಬಿಜೆಪಿ ವಿರುದ್ಧ ಇರುವವರಿಗೆ ಹಿಂಸೆ ನೀಡುವುದು ನಡೆಯುತ್ತಿದೆ. ಯಾರಾದರೂ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದರೆ ನಿಯಮಾವಳಿಯಂತೆ ಕ್ರಮ ತೆಗೆದುಕೊಳ್ಳಲಿ. ಬಂಧಿಸುವ ಅವಶ್ಯಕತೆ ಏನಿದೆ? ಮೈತ್ರಿ ಸರಕಾರ ಕೆಡವಲು ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಕೋಟಿಕೋಟಿ ಆಮಿಷ ನೀಡಿ ಬಿಜೆಪಿಯವರು ಖರೀದಿ ಮಾಡಿದಾಗ ಈ ಐಟಿ, ಇಡಿ ಇಲಾಖೆಗಳು ಸತ್ತು ಹೋಗಿದ್ದವೇ'' ಎಂದು ಪ್ರಶ್ನಿಸಿದರು.

ಬಿಎಸ್‌ವೈ ಮುಂಬೈ ಪ್ರವಾಸದ ರಹಸ್ಯ!

''ದ್ವೇಷದ ರಾಜಕಾರಣ ಮಾಡಲ್ಲ ಎಂದ ಬಿಎಸ್‌ವೈ ಏನೇನು ಮಾಡುತ್ತಿದ್ದಾರೆ ಗೊತ್ತಿಲ್ಲವೇ? ಯಡಿಯೂರಪ್ಪ ಅವರು ಮೊನ್ನೆ ಮುಂಬಯಿಗೆæ ಹೋಗಿದ್ದು ಮಹದಾಯಿ ವಿಚಾರ ಚರ್ಚಿಸಲು ಅಂದುಕೊಂಡಿದ್ದೀರಾ? ಯಾರೂ ಕಿವಿಗೆ ಹೂವು ಮುಡಿದುಕೊಂಡಿಲ್ಲ. ನನಗೆ ಎಲ್ಲವೂ ಗೊತ್ತಿದೆ'' ಎಂದು ಕುಮಾರಸ್ವಾಮಿ ಮುಗುಮ್ಮಾಗಿ ಮಾತನಾಡಿದರು.

ಬಿಜೆಪಿಗೇ ತಿರುಗುಬಾಣ!

ರಾಜ್ಯದ ಶಾಸಕರನ್ನು ಮುಂಬಯಿಗೆ ಎತ್ತಿಕೊಂಡು ಹೋದಾಗ ಯಾವುದೂ ಇರಲಿಲ್ಲ. ಆದರೆ, ಗುಜರಾತ್‌ ಕಾಂಗ್ರೆಸ್‌ ಶಾಸಕರನ್ನು ಅವರದೇ ಪಕ್ಷದ ಶಿವಕುಮಾರ್‌ ರಕ್ಷಣೆ ಮಾಡಿದ್ದು ತಪ್ಪಾಯಿತು ಎಂಬಂತೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಧಮನ ಮಾಡುವ ಕೆಲಸವನ್ನು ಕೇಂದ್ರ ಸರಕಾರ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಮುಂದಿನ ದಿನಗಳಲ್ಲಿ ಬಿಜೆಪಿಗೇ ತಿರುಗುಬಾಣವಾಗಲಿದೆ'' ಎಂದು ಎಚ್‌.ಡಿ.ರೇವಣ್ಣ ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ