ಆ್ಯಪ್ನಗರ

* ಏನ್ರೀ, ಬಿಜೆಪಿ ಸಂಪರ್ಕ ಮಾಡಲು ಹೋಗಿದ್ರಾ ? : ಸಾರಾಮ, ಜಿಟಿಡಿ ವಿರುದ್ಧ ಸಿಎಂ ಗರಂ

ಸಂಪುಟದ ಸಹೋದ್ಯೋಗಿಗಳಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌ ವಿರುದ್ಧ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲೆ ಗರಂ ಆದ ಘಟನೆ ನಡೆದಿದೆ.

Vijaya Karnataka 16 Jul 2019, 5:00 am
ಬೆಂಗಳೂರು: ಸಂಪುಟದ ಸಹೋದ್ಯೋಗಿಗಳಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌ ವಿರುದ್ಧ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲೆ ಗರಂ ಆದ ಘಟನೆ ನಡೆದಿದೆ.
Vijaya Karnataka Web F51CC6A9-1EC1-47B4-8FD4-2256D0948AAD


ಸೋಮವಾರದ ಕಲಾಪಕ್ಕೆ ತೆರೆ ಬೀಳುತ್ತಿದ್ದಂತೆ ಜೆಡಿಎಸ್‌ ಸಚಿವರು ಸಿಎಂ ಅವರನ್ನು ಸುತ್ತುವರಿದರು. ಈ ಗುಂಪಿನಲ್ಲಿ ದೇವೇಗೌಡ, ಸಾ.ರಾ.ಮಹೇಶ್‌ ಅವರನ್ನು ಕಾಣುತ್ತಿದ್ದಂತೆ ಸಿಎಂ ರೇಗಿದರು ಎನ್ನಲಾಗಿದೆ.

ದೇವೇಗೌಡರಿಗೆ ಬಿಜೆಪಿಗೆ ಸ್ವಾಗತವೆಂಬ ಪೋಸ್ಟ್‌ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ಮಧ್ಯೆ ಜಿಟಿಡಿ ಅವರೂ ಪ್ರತಿಪಕ್ಷದ ಸಾಲಿನತ್ತ ತೆರಳಿ ಬಿಜೆಪಿ ಶಾಸಕರಿಗೆ ಹಸ್ತಲಾಘವ ಮಾಡಿದ್ದರು. ಕುಶಲ ಸಂಭಾಷಣೆ ನಡೆಸಿದ್ದರು. ಇದು ಸಿಎಂ ಕೋಪಕ್ಕೆ ಕಾರಣವಾಗಿತ್ತು. ಹಾಗೆಯೇ ಕುಮಾರಕೃಪಾ ಅತಿಥಿ ಗೃಹದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರನ್ನು ಮಹೇಶ್‌ ಭೇಟಿಯಾಗಿದ್ದರಿಂದ ಸಿಎಂ ಅಸಹನೆಗೊಂಡಿದ್ದರು. ಹಾಗಾಗಿ ಇಬ್ಬರತ್ತಲೂ ಬೆರಳು ತೋರಿಸಿದ ಸಿಎಂ, ''ಏನ್ರೀ ಬಿಜೆಪಿ ಸಂಪರ್ಕ ಮಾಡಲು ಹೋಗಿದ್ರಾ,'' ಎಂದು ತರಾಟೆಗೆ ತೆಗೆದುಕೊಂಡರೆಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ